ಈ ಬಾರಿ ಯುಗಾದಿ ಹಬ್ಬದ ಬೇವು, ಬೆಲ್ಲ ಯಾರಿಗೆ?


Team Udayavani, Mar 31, 2017, 12:24 PM IST

mys4.jpg

ನಂಜನಗೂಡು: ಇಲ್ಲಿನ ಉಪ ಚುನಾವಣೆಯ ಪ್ರಚಾರ ತಾರಕಕ್ಕೇರಿದ್ದು ಈ ಮಧ್ಯೆ ಹೊಸ ಸಂವತ್ಸರಕ್ಕೆ ಜನತೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೀವನದಲ್ಲಿ ಸಿಹಿ ಕಹಿಗಳೆರಡನ್ನು ಸಮವಾಗಿ ಸ್ವೀಕರಿಸುವ ಮನೋಭಾವ ಬೆಳಸಿಕೊಳ್ಳೆ ಬೇಕೆಂಬ ಸದಾಶಯ ಬೀರುವ ಉದ್ದೇಶದಿಂದಲೆ ಬೇವು ಬೆಲ್ಲ  ತಿನ್ನುವ ಪದ್ಧತಿ ನಮ್ಮಲ್ಲಿ ನಡೆದುಕೊಂಡು ಬಂದಿದೆ.

ಇಂತಹ ಬೇವು ಬೆಲ್ಲ ಸವಿಯುವ ಸಂದರ್ಭದಲ್ಲೀಗ ಪಟ್ಟಣದಲ್ಲಿ ಉಪ ಚುನಾವಣೆ ಆರ್ಭಟ ಜೋರಾಗಿದೆ. ವಿಷವನ್ನೇಲ್ಲ ತಾನು ಉಂಡು ಅಮೃತ ವನ್ನು ಮಾತ್ರ ಜಗತ್ತಿಗೆ ನೀಡಿದ ವಿಷಕಂಠನ ಸನ್ನಿಧಿಯ 2 ಲಕ್ಷದ 4 ಸಾವಿರ ಮತದಾರು ಈಗ ಯಾರಿಗೆ ಬೇವು, ಯಾರಿಗೆ ಬೆಲ್ಲ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

65 ವರ್ಷಗಳ ಇತಿಹಾಸವಿರುವ ನಂಜನಗೂಡಿನ ಚುನಾವಣೆಯಲ್ಲಿ 9 ಜನ ಶಾಸಕರು ಆಯ್ಕೆಯಾಗಿದ್ದಾರೆ. ಮಾಜಿ ಸಚಿವರಾದ ಎಂ.ಮಹದೇವು ಹಾಗೂ ಡಿ.ಟಿ. ಜಯಕುಮಾರ ಮಾತ್ರ ಇಲ್ಲಿ ಒಬ್ಬರಾದ ಮೇಲೊಬ್ಬರಂತೆ ಆಯ್ಕೆ ಯಾಗಿ ತಲಾ ಮೂರು ಬಾರಿ ಅಧಿಕಾರದ ಚುಕಾಣಿ ಹಿಡಿದಿದ್ದಾರೆ.

ಉಳಿದಂತೆ ಸತತವಾಗಿ ಎರಡನೇ ಬಾರಿಗೆ ಮಾಜಿ ಸಚಿವ ಕೆ.ಬಿ ಶಿವಯ್ಯ ಹಾಗೂ ವಿ.ಶ್ರೀನಿವಾಸ ಪ್ರಸಾದರು ಆಯ್ಕೆ ಯಾಗಿದ್ದಾರೆ. ಸತತವಾಗಿ ಎರಡು ಬಾರಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ  ಶಿವಯ್ಯಗೆ ಎಂ. ಮಹದೇವು ಅವರಿಂದಾಗಿ ಮೂರನೇ ಬಾರಿಗೆ ಸ್ಪರ್ಧೆಗಿಳಿಯಲು ಅವಕಾಶ ಸಿಕ್ಕಿರಲಿಲ್ಲ. ಉಳಿದವರಾರು ಒಮ್ಮೆ ಗೆದ್ದವರು ಮತ್ತೂಮ್ಮೆ  ಸ್ಪರ್ಧೆಗಿಳಿದಿಲ್ಲ.

ಸ್ವತಂತ್ರ ಭಾರತದ ಪ್ರಥಮ ಚುನಾವಣೆಯಲ್ಲಿ ರಾಜ್ಯದ ಎಲ್ಲಡೆ ಕಾಂಗ್ರೆಸ್‌ ಜಯಭೇರಿ ಬಾರಿಸಿದಾಗ ಇಲ್ಲಿನ ಮತದಾರರು ಮಣೆ ಹಾಕಿದ್ದು ಕಾಂಗ್ರೆಸ್‌ಗಲ್ಲ  ಎಂಬುದು ಗಮನಾರ್ಹ. ಆಗ ಇಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಹೆಜ್ಜಿಗೆ ಲಿಂಗಣ್ಣ  ಹಾಗೂ ಸಿದ್ದಯ್ಯ ಅವರನ್ನು ಗೆಲ್ಲಿಸಿದ್ದರು. ನಂತರವೂ ಮತದಾರರು ಯಾವುದೇ ಪಕ್ಷಕ್ಕೆ ಜೋತು ಬೀಳದೆ ಪ್ರತಿ ಚುನಾವಣೆಗೂ ವ್ಯಕ್ತಿ ಹಾಗೂ ಪಕ್ಷ ಬದಲಾಯಿಸಿಯೇ ಆಯ್ಕೆ ಮಾಡಿ ಕಳುಹಿಸುತ್ತಿದ್ದರು.

1952ರಿಂದಲೂ ಇದೇ ಪದ್ಧತಿ ಅನುಸರಿಸುತ್ತಿದ್ದ ಮತದಾರರು 1972 ಹಾಗೂ  1978ರಲ್ಲಿ ಮಾತ್ರ ಕಾಂಗ್ರೆಸ್‌ನ  ಕೆ.ಬಿ ಶಿವಯ್ಯರ ಗೆಲುವಿಗೆ ಕಾರಣ ರಾಗಿದ್ದರು. ನಂತರ 2008 ಹಾಗೂ 2013ರಲ್ಲಿ ವಿ. ಶ್ರೀನಿವಾಸ್‌ ಪ್ರಸಾದ ಸತತವಾಗಿ ಕಾಂಗ್ರೆಸ್‌ನಿಂದಲೇ  ಗೆಲುವು ಪಡೆದರು.

ಇಲ್ಲಿನ ಜನತೆ ಈ ಬಾರಿಯೂ ಪ್ರಸಾದರನ್ನು ಗೆಲ್ಲಿಸಿದ್ದೆ ಆದರೆ ಹ್ಯಾಟ್ರಿಕ್‌ ಗೆಲವು. ಮೊದಲನೇ ಬಾರಿಗೆ ತಾವರೆ ಹೂವನ್ನು ಅರಳಿಸಿದ ಕೀರ್ತಿ ಪ್ರಸಾದ್‌  ಸಂಪಾದಿಸಲಿದ್ದಾರೆ. ಇಲ್ಲಿನ ಮತದಾರ ಈಗ ತನ್ನ ಮತ ಚಲಾವಣೆಯ ಮೂಲಕ ಯಾರಿಗೆ ಬೇವು ಯಾರಿಗೆ ಬೆಲ್ಲ ನೀಡಿ ಆಶೀರ್ವಾದಿಸಲಿದ್ದಾರೆಂದು ನೋಡಲು ಚುನಾವಣಾ ಎಣಿಕೆಯವರಿಗೂ ಕಾಯಬೇಕಿದೆ.

* ಶ್ರೀಧರ ಆರ್‌ ಭಟ್‌

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.