ಹುಣಸೂರು: ತಂಬಾಕು ಬೆಳೆಗಾರರ ಪ್ರತಿಭಟನೆ; ಶಾಸಕ ಮಂಜುನಾಥ್ ಹರಾಜು ಮಾರುಕಟ್ಟೆಗೆ ಭೇಟಿ
Team Udayavani, Oct 20, 2022, 12:51 PM IST
ಹುಣಸೂರು: ತಂಬಾಕು ಬೆಳೆಗಾರರೊಂದಿಗೆ ಜನಪ್ರತಿನಿಧಿಗಳಿದ್ದೇವೆ. ಅನ್ಯಾಯವಾಗಲು ಬಿಡುವುದಿಲ್ಲ ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ತಂಬಾಕು ಬೆಲೆ ಕುಸಿತದಿಂದ ಆಕ್ರೋಶಿತರಾದ ರೈತರು ಕಟ್ಟೆಮಳಲವಾಡಿ ಮತ್ತು ಚಿಲ್ಕುಂದದಲ್ಲಿ ತಂಬಾಕು ಹರಾಜು ಬಹಿಷ್ಕರಿಸಿ, ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಕಟ್ಟೆಮಳಲವಾಡಿ ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ಹರಾಜು ಮಾರುಕಟ್ಟೆ ಸೂಪರಿಡೆಂಟ್ ಹಾಗೂ ರೈತರೊಂದಿಗೆ ಚರ್ಚಿಸಿದ ಸಂದರ್ಭ ಈ ಮಾತುಗಳನ್ನು ಹೇಳಿದರು.
ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರಿಂದ ಮಾಹಿತಿ ಪಡೆದ ನಂತರ ಮಂಡಳಿಯ ಹರಾಜು ಅಧೀಕ್ಷಕ ವೇಣೊಗೋಪಾಲ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಶಾಸಕರು, ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಮಾರುಕಟ್ಟೆಯಲ್ಲಿ ತಾವಿದ್ದು, ರೈತರ ಸಭೆ ನಡೆಸಲಾಗುವುದೆಂಬ ಅಧೀಕ್ಷಕರ ಹೇಳಿಕೆಗೆ ಮೊದಲು ಖರೀದಿ ಕಂಪನಿಯವರು, ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳನ್ನು ಕರೆದು ಸಮಸ್ಯೆ ಬಗೆಹರಿಸಲು ಮುಂದಾಗಿ. ರೈತರ ಬದುಕಿನೊಂದಿಗೆ ಕಂಪನಿಯವರು ಚೆಲ್ಲಾಟವಾಡುತ್ತಿದ್ದು, ಮಂಡಳಿ ನೆರವಿಗೆ ಬರಬೇಕೆಂದು ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ