ತಂಬಾಕು ಬೆಲೆ ಕುಸಿತ;ಆಕ್ರೋಶಿತ ರೈತರಿಂದ ಹೆದ್ದಾರಿಯಲ್ಲಿ ಪ್ರತಿಭಟನೆ;ಸಂಚಾರ ಅಸ್ತವ್ಯಸ್ತ
Team Udayavani, Oct 19, 2022, 2:50 PM IST
ಹುಣಸೂರು: ತಂಬಾಕು ಬೆಲೆ ಕುಸಿತದಿಂದ ಆಕ್ರೋಶಿತರಾದ ಬೆಳೆಗಾರರು ಅ.19 ರ ಬುಧವಾರ ಚಿಲ್ಕುಂದ ಬಳಿ ಹೆದ್ದಾರಿಯಲ್ಲಿ ದಿಢೀರ್ ಪ್ರತಿಭಟೆನೆಗೆ ಮಾಡಿದ್ದರಿಂದ ಸಂಚಾರ ಅಸ್ಥವ್ಯಸ್ಥವಾಗಿದೆ.
ತಾಲೂಕಿನ ಚಿಲ್ಕುಂದದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬುಧವಾರ ಬೆಳಗಿನಿಂದಲೇ ಉತ್ತಮ ದರ್ಜೆ ತಂಬಾಕಿಗೂ ಕಡಿಮೆ ಬೆಲೆಗೆ ಹರಾಜಾಗಿತ್ತು. ರೈತರು ಮತ್ತು ತಂಬಾಕು ಮಂಡಳಿ ಅಧಿಕಾರಿಗಳ ನಡುವೆ ಚರ್ಚೆ ನಡೆದಿತ್ತಾದರೂ ಬೆಲೆ ಏರಿಕೆ ಕಾಣದ ಪರಿಣಾಮ ಆಕ್ರೋಶಿತರಾದ ಬೆಳೆಗಾರರು ಮದ್ಯಾಹ್ನ ಮಾರುಕಟ್ಟೆ ಎದುರಿನಲ್ಲೇ ಪ್ರತಿಭಟಿಸಿದರು.
ಹೆದ್ದಾರಿಯಲ್ಲಿ 300ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿದ್ದರಿಂದಾಗಿ ಕೆಲ ಹೊತ್ತು ಸಂಚಾರ ಅಸ್ಥವ್ಯಸ್ತವಾಗಿದೆ. ವಿಷಯ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮನವೊಲಿಸಿದರೂ ಮಂಡಳಿ ಅಧಿಕಾರಿಗಳು ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.