ಒಂದೇ ಭಾಷೆ ಎನ್ನುವುದು ದೇಶದ್ರೋಹ


Team Udayavani, Sep 19, 2019, 3:00 AM IST

onde-bhashe

ಮೈಸೂರು: ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಬಹುತ್ವದ ರಾಷ್ಟ್ರವಾಗಿದ್ದು, ಒಂದೇ ಭಾಷೆ ಎನ್ನುವುದು ದೇಶಕ್ಕೆ ಬಗೆಯುವ ದ್ರೋಹವಾಗಿದೆ ಎಂದು ಸಾಹಿತಿ ಡಾ.ಓ.ಎಲ್‌. ನಾಗಭೂಷಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಬೆಳಗಾವಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬಸವರಾಜ ಕಟ್ಟಿಮನಿ ಜನ್ಮಶತಮಾನೊತ್ಸವ ಅಂಗವಾಗಿ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವರಾಜ ಕಟ್ಟಿಮನಿ ಸಾಹಿತ್ಯ ಸಮಕಾಲೀನ ಸಂದರ್ಭ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ವೈವಿಧ್ಯತೆಯಲ್ಲಿ ಏಕತೆ: ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆಯಿದೆ. ಮನುಷ್ಯರಾಗಿ ಬಹುತ್ವವನ್ನು ಮೈಗೂಡಿಸಿಕೊಳ್ಳದಿದ್ದರೆ ಜೀವನವೆಲ್ಲ ನಿರುಪಯುಕ್ತವಾಗಿದೆ. ಕನ್ನಡ ಸಾಹಿತ್ಯದಲ್ಲಿ ಬಂದ ಕಾದಂಬರಿಗಳು ಬಹುತ್ವವನ್ನು ಸಾಬೀತುಪಡಿಸಿವೆ. ಒಬ್ಬ ಪೊಲೀಸ್‌ ಪೇದೆಯ ಮಗನಾಗಿದ್ದ ಬಸವರಾಜ ಕಟ್ಟಿಮನಿ ಸಾರ್ವಜನಿಕರಂತೆ ನಿಂತು “ನಾನು ಪೊಲೀಸನಾಗಿ’ ಎಂಬ ಕಾದಂಬರಿ ಬರೆದರು. ಬೇರೆಯವರು ಪೊಲೀಸರ ಬಗ್ಗೆ ಬರೆಯುವುದಕ್ಕಿಂತ ಪೊಲೀಸ್‌ ಅಥವಾ ಆ ಮನೆಯವನಾಗಿ ಬರೆಯುವುದು ಮುಖ್ಯ ಎಂದು ತಿಳಿಸಿದರು.

ಬರೆದಂತೆಯೇ ಬದುಕಿದರು: ಪ್ರಗತಿಶೀಲ ಪಂಥದಲ್ಲಿ ಗುರುತಿಸಿಕೊಂಡ ಬಸವರಾಜ ಕಟ್ಟಿಮನಿ ಬಡತನದಿಂದ ಬಂದು ಕಾದಂಬರಿ ಬರೆದು ಅದರಲ್ಲಿಯೇ ಬದುಕಿದ ಸಾಹಿತಿ. ನಮ್ಮ ಸಮಾಜ ಕಟ್ಟಿಮನಿಯವರನ್ನು ಮರೆವಿನ ಸಾಹಿತಿಯನ್ನಾಗಿ ಮಾಡಿಬಿಟ್ಟಿದೆ. ಯಾವ ಸಾಹಿತಿ ಅಧಿಕಾರ, ಪ್ರಶಸ್ತಿಯಿಂದ ಇರುತ್ತಾರೋ ಅಂತವರನ್ನು ನೆನೆಸಿಕೊಳ್ಳುತ್ತೇವೆ. ಅದೇ ಯಾವ ಲಾಬಿಯೂ ಇಲ್ಲದೆ, ತಮಗೆ ಅನಿಸಿದ್ದನ್ನು ಬರೆಯುವ ಸಾಹಿತಿ ಮತ್ತು ಸಾಹಿತ್ಯವನ್ನು ವಿಸ್ಮತಿಗೆ ಸರಿಸುತ್ತೇವೆ. ಬಸವರಾಜ ಕಟ್ಟಿಮನಿ ಪ್ರತಿಷ್ಠಾನವೂ ಈಗ ಕಾದಂಬರಿ ರಚಿಸುವ ಕುರಿತ ಕಾರ್ಯಾಗಾರ ಮಾಡಿ ಇಂತಹ ಸಾಹಿತಿಗಳನ್ನು ಪ್ರಚಾರಪಡಿಸಬೇಕು ಎಂದು ಹೇಳಿದರು.

ಓದುಗರ ಅಭಿಮತ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶ್ರೇಷ್ಠ ಸಾಹಿತ್ಯ ಮತ್ತು ಕೆಲಸಕ್ಕೆ ಬಾರದ ಸಾಹಿತ್ಯ ಎಂಬುದಾಗಿ ವಿಂಗಡಿಸಿದರೂ ಬಸವರಾಜ ಕಟ್ಟಿಮನಿ, ಅನಕೃ, ತರಾಸು ಮಧ್ಯಮ ಪಥದಲ್ಲಿ ನಿಂತು ಸಾಹಿತ್ಯ ರಚಿಸಿಕೊಟ್ಟಿದ್ದಾರೆ. ಕೆಲವು ಕಾದಂಬರಿಗಳು ಓದಿದಾಗ ಅರ್ಥವಾಗುತ್ತವೆ. ಮತ್ತೆ ಕೆಲವು ಅರ್ಥವಾದರೂ ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಅಂತವನ್ನು ಶ್ರೇಷ್ಠ ಎನ್ನಬಹುದು. ಇಂತವನ್ನು ವಾಚಾನಾಭಿಮುಖ ಲೇಖನ ಎನ್ನುಬಹುದು. ಓದಿಸಿಕೊಳ್ಳುವ ಕಾದಂಬರಿ ಪ್ರೇಯಸಿಯಾದರೆ, ಒಂದೇ ಬಾರಿಗೆ ಅರ್ಥವಾಗುವ ಕಾದಂಬರಿ ಹೆಂಡತಿಯಂತೆ. ಆದರೂ ಅರ್ಥ ಮಾಡಿಕೊಂಡು ಬಂಧವನ್ನು ಹೆಚ್ಚಿಸಿಕೊಳ್ಳುವುದು ಓದುಗರ ಕೈಯಲ್ಲಿದೆ ಎಂದು ಅವರು ತಿಳಿಸಿದರು.

ಅಂತರಂಗ, ಬಹಿರಂಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ್‌ ಮಾತನಾಡಿ, ಮನುಷ್ಯನ ಅಂತರಂಗ ಹಾಗೂ ಬಹಿರಂಗ ಎರಡೂ ಒಂದೇ ಆಗಿರಬೇಕು. ಒಳಗೊಂದು ಹೊರಗೊಂದು ವಿಚಾರಗಳು ಇರಬಾರದು. ಬಹಿರಂಗದಲ್ಲಿ ನಾವು ಏನು ಹೇಳುತ್ತೇವೆಯೋ ಅದನ್ನು ಅಂತರಂಗದಲ್ಲಿ ಅನುಸರಿಸಬೇಕು. ಆಗ ಬದುಕಿಗೊಂದು ಅರ್ಥ ಬರಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಸದಸ್ಯರಾದ ಪ್ರೊ. ರಾಮಸ್ವಾಮಿ, ಮುಕ್ತ ವಿವಿ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷೆ ಡಾ. ಕವಿತಾ ರೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಸವರಾಜ ಕಟ್ಟಿಮನಿ ಅಗ್ರಗಣ್ಯ ಲೇಖಕ: ಕನ್ನಡದ ಅಗ್ರಗಣ್ಯ ಲೇಖಕರಲ್ಲಿ ಮತ್ತು ಪ್ರಗತಿಶೀಲ ಪಂಥವನ್ನು ತಾತ್ವಿಕವಾಗಿ ರೂಪಿಸಿದವರಲ್ಲಿ ಬಸವರಾಜ ಕಟ್ಟಿಮನಿ ಪ್ರಮುಖರು. ಇವರ ಸಾಹಿತ್ಯಾಧ್ಯಯನದ ಹರವು ವಿಸ್ತಾರವಾಗಿದ್ದು, ಗಾಂಧೀಜಿ, ನೆಹರೂ, ರವೀಂದ್ರನಾಥ್‌ ಟ್ಯಾಗೋರ, ಸ್ವಾಮಿವಿವೇಕನಂದ ಮೊದಲಾದವರ ಬಗೆಗೆ ಅಧ್ಯಯನ ನಡೆಸಿದ್ದರು ಎಂದು ಕರಾಮುವಿ ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ನಾಡು-ನುಡಿ ಜನರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಕಟ್ಟಿಮನಿ ಕರ್ನಾಟಕ ಗಡಿ ವಿವಾದದ ಬಗ್ಗೆ, ಕನ್ನಡ ಭಾಷಾ ಸ್ಥಾನಮಾನದ ಬಗ್ಗೆ ಕ್ರಿಯಾತ್ಮಕವಾದ ಹೋರಾಟ ನಡೆಸಿದರು. ಅವರ ಹೋರಾಟದಲ್ಲಿ ವ್ಯಕ್ತಿಗಳ ವೈಯಕ್ತಿಕ ಜೀವನ ಪ್ರಗತಿಯ ಗುರಿ ಮಾತ್ರವಲ್ಲದೇ, ಸಮಾಜದ, ರಾಷ್ಟ್ರದ ಹಾಗೂ ಸಮಗ್ರ ಮಾನವತೆಯ ಪ್ರಗತಿಯೂ ಆಗಿತ್ತು ಎಂದು ತಿಳಿಸಿದರು.

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.