ಹುಣಸೂರು: ಜಿಂಕೆಗೆ ಅಪರಿಚಿತ ವಾಹನ ಢಿಕ್ಕಿ
Team Udayavani, Jun 2, 2022, 11:48 AM IST
ಹುಣಸೂರು: ಹೆದ್ದಾರಿಯಲ್ಲಿ ಅಪರಿಚಿತ ವಾಹನ ಢಿಕ್ಕಿ ಹೊಡೆದು ಜಿಂಕೆಗೆ ಗಾಯವಾಗಿರುವ ಘಟನೆ ಗುರುವಾರ ಬೆಳಗ್ಗೆ ಹುಣಸೂರು- ಮೈಸೂರು ರಸ್ತೆಯ ಅರಬ್ಬಿ ತಿಟ್ಟು ರಕ್ಷಿತಾರಣ್ಯದ ಬಳಿ ನಡೆದಿದೆ.
ಅರಬ್ಬಿ ತಿಟ್ಟು ಸಂರಕ್ಷಿತಾರಣ್ಯದಿಂದ ಮೇವನ್ನರಸಿ ಹೊರ ಬಂದಿದ್ದ ಜಿಂಕೆಗಳು ಹೆದ್ದಾರಿ ದಾಟುವ ವೇಳೆ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ. ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಪ್ರಯಾಣಿಸುತ್ತಿದ್ದಾಗಲೇ ಏಕಾಏಕಿ ಹೊತ್ತಿ ಉರಿದ ಬೈಕ್…ಸವಾರ ಪ್ರಾಣಾಪಾಯದಿಂದ ಪಾರು!
ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಜಿಂಕೆಯನ್ನು ಉಪಚರಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಜಿಂಕೆಯನ್ನು ರಕ್ಷಿತಾರಣ್ಯದೊಳಕ್ಕೆ ಕರೆದೊಯ್ದು ಉಪಚರಿಸಿದ್ದು, ಇಲಾಖೆಯ ಪಶುವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು. ಜಿಂಕೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚೇತರಿಸಿಕೊಳ್ಳಲಿದೆ ಎಂದು ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ತಿಳಿಸಿದ್ದಾರೆ.