ತರಕಾರಿ ಬೆಲೆ ಪಾತಾಳಕ್ಕಿಳಿಸಿದ 2ನೇ ಅಲೆ


Team Udayavani, Apr 5, 2021, 1:18 PM IST

ತರಕಾರಿ ಬೆಲೆ ಪಾತಾಳಕ್ಕಿಳಿಸಿದ 2ನೇ ಅಲೆ

ಮೈಸೂರು: ಕಳೆದ ಬಾರಿ ಕೋವಿಡ್ ಲಾಕ್‌ಡೌನ್‌ನಿಂದ ತತ್ತರಿಸಿದ್ದ ಬೆಳೆಗಾರರರು, ಕೋವಿಡ್ 2ನೇ ಅಲೆಗೆ ಮತ್ತೆ ಕಂಗೆಟ್ಟಿದ್ದು, ನಷ್ಟದ ಮೇಲೆ ನಷ್ಟ ಅನುಭವಿಸುವಂತಾಗಿದೆ. ವರ್ಷದಿಂದೀಚೆಗೆ ಕೋವಿಡ್ ಅಟ್ಟಹಾಸಕ್ಕೆ ತತ್ತರಿಸಿದ್ದ ಒಟ್ಟಾರೆ ವ್ಯವಸ್ಥೆ, ತದನಂತರದಲ್ಲಿ ಸುಧಾರಿಸಿಕೊಳ್ಳುವತ್ತ ಸಾಗಿದೆ ಎನ್ನುವ ಹೊತ್ತಿಗೆ ಕೋವಿಡ್ ಎರಡನೇ ಅಲೆ ಆರ್ಭಟಕ್ಕೆ ಕೃಷಿ ಉತ್ಪನ್ನಗಳ ಬೆಲೆ ಪಾತಾಳಕ್ಕಿಳಿದಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮೈಸೂರು ಜಿಲ್ಲೆ ವಾರ್ಷಿಕ ಬೆಳೆ ಹೊರತುಪಡಿಸಿ ತರಕಾರಿ, ತೋಟಗಾರಿಕೆ ಬೆಳೆಹಾಗೂ ಹೈನುಗಾರಿಕೆ ಮೇಲೆ ಅತಿ ಹೆಚ್ಚಾಗಿ ಅವಲಂಬಿತವಾಗಿದ್ದು, ಬಹುಪಾಲು ರೈತರುತರಕಾರಿ, ತೋಟಗಾರಿಕೆ ಬೆಳೆಯನ್ನೇ ಅವಲಂಬಿಸಿದ್ದಾರೆ. ಕಳೆದ ಬಾರಿ ಕೊರೊನಾಲಾಕ್‌ಡೌನ್‌ನಿಂದಾಗಿ ತರಕಾರಿ ಹಾಗೂ ಬಾಳೆಹಣ್ಣುಗಳನ್ನು ಕೇಳುವವರಿಲ್ಲದೇ, ಕೃಷಿಭೂಮಿಯಲ್ಲೇ ಕೊಳೆಯುವಂತಾಗಿತ್ತು. ಆದರೆಕಳೆದ ವರ್ಷದ ನಷ್ಟವನ್ನು ಈ ಬಾರಿಯಾದರೂಸರಿದೂಗಿಸಿಕೊಳ್ಳುವ ಯೋಚನೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.

ವರ್ಷಾರಂಭದಲ್ಲಿ ಮದುವೆ, ಸಭೆ, ಸಮಾರಂಭ, ಜಾತ್ರೆ ಹಾಗೂ ಉತ್ಸವಗಳು ಹೆಚ್ಚುನಡೆಯುತ್ತಿದ್ದರಿಂದ ಬಾಳೆ, ಹೂ, ತರಕಾರಿಗೆಹೆಚ್ಚಿನ ಬೇಡಿಕೆಯಿಂದಾಗಿ ಬೆಲೆಯೂಏರಿಕೆಯಾಗುತ್ತಿತ್ತು. ಆದರೆ, ಎಲ್ಲದಕ್ಕೂಕಡಿವಾಣ ಬಿದ್ದಿರುವುದರಿಂದ ಕೃಷಿ ಉತ್ಪನ್ನಗಳ ಬೆಲೆ ಪಾತಾಳಕ್ಕಿಳಿದಿದೆ.

ಮೈಸೂರಿನ ತರಕಾರಿ ಮಾರುಕಟ್ಟೆ ಅವಲಂಭಸಿದ್ದ ಕೇರಳದ ವರ್ತಕರು, ಪ್ರತನಿತ್ಯ ಮೈಸೂರಿಗೆ ಬಂದು ಲಾರಿಗಳಲ್ಲಿ ತರಕಾರಿಯನ್ನು ಕೊಂಡೊಯ್ಯುತ್ತಿದ್ದರು. ಆದರೆ, ಕೋವಿಡ್  2ನೇ ಅಲೆಯ ನಂತರ ಮೈಸೂರು-ಕೇರಳ ನಡುವೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿಸಂಚರಿಸುತ್ತಿದ್ದ ತರಕಾರಿ ವಾಹನಗಳಸಂಚಾರ ಕಡಿಮೆಯಾಗಿತರಕಾರಿ ಕೇಳುವವರಿಲ್ಲ ದಂತಾಗಿದೆ.

ಬೆಲೆಯ ಏರಿಳಿತ: 2021ರ ಜನವರಿಯಲ್ಲಿಪ್ರತಿ ಕೆ.ಜಿ. ಬೀನ್ಸ್‌ಗೆ 50ರೂ. ವಹಿವಾಟುನಡೆದಿದ್ದು, ಇದೀಗ 20 ರೂ.ಗೆ ಕುಸಿದಿದೆ. ಕೇರಳದಲ್ಲಿಹೆಚ್ಚಾಗಿ ಬಳಕೆ ಮಾಡುವ ಪೈರ್‌ಜನವರಿಯಲ್ಲಿ 40 ರೂ. ಇದ್ದ ಬೆಲೆಇದೀಗ 20 ರೂ.ಗೆ ಕುಸಿತ ಕಂಡಿದೆ. ಅದೇರೀತಿ ಬೆಂಡೆ 35 ರಿಂದ 10 ರೂ.ಗೆ, ಗುಂಡುಬದನೆ 10 ರೂ.ನಿಂದ 5 ರೂ.ಗೆ ಇಳಿಕೆ ಕಂಡಿದೆ.20 ರೂ. ಇದ್ದ ಟೊಮೆಟೋ ದರ ಇದೀಗ 8ರೂ.ಗೆ ಇಳಿಕೆ ಕಂಡಿದೆ. ಜೊತೆಗೆ ಸೇವಂತಿಗೆ,ಕನಕಾಂಬರ, ಗುಲಾಬಿ ಸೇರಿದಂತೆ ಇತರೆಹೂವುಗಳಿಗೆ ಬೇಡಿಕೆ ಕಡಿಮೆಯಾಗಿದ್ದು,ಬೆಳೆಗಾರರು ಮತ್ತು ವರ್ತಕರೂ ನಷ್ಟಕ್ಕೀಡಾಗಿದ್ದಾರೆ.

ಅರ್ಧಕ್ಕರ್ಧ ಕುಸಿದ ಬಾಳೆಹಣ್ಣು ಬೆಲೆ :

ಜಿಲ್ಲೆಯಲ್ಲಿ ಒಂದು ಕಿಲೋ ಏಲಕ್ಕಿ ಬಾಳೆಗೆ 40 ರೂಪಾಯಿಗೆ ಮಾರಾಟಮಾಡುತ್ತಿದ್ದ ಬಾಳೆ ಬೆಳೆಗಾರ ಪ್ರಸ್ತುತ ಉತ್ತಮ ದರ್ಜೆಯ ಏಲಕ್ಕಿ ಬಾಳೆಯನ್ನು 25ರೂ.ಗೆ ಮಾರಾಟ ಮಾಡುವಂತಾಗಿದೆ. ಜೊತೆಗೆ 17ರಿಂದ 18 ರೂಪಾಯಿಗೆ ಮಾರಾಟವಾಗುತ್ತಿದ್ದ ಪಚ್ಚಬಾಳೆಗೆ ಕೇವಲ 8 ರಿಂದ 10 ರೂ.ಗೆ ಮಾರಾಟವಾಗುತ್ತಿದೆ.

ಜಿಲ್ಲೆಯಲ್ಲಿ ತರಕಾರಿ, ಬಾಳೆ ಬೆಳೆಯುವ ರೈತರು ಹೆಚ್ಚಿದ್ದು, ನಾವು ಕೇರಳ ಮಾರುಕಟ್ಟೆಯನ್ನೇ ಅವಲಂಬಿಸಿದ್ದೇವೆ. ಕೊರೊನಾ 2ನೇ ಅಲೆ ಯಿಂದಾಗಿ ಅಂತಾರಾಜ್ಯ ಓಡಾಟಕ್ಕೆ, ಸಭೆ ಸಮಾರಂಭ, ಜಾತ್ರೆ ಉತ್ಸವಗಳಿಗೆ ಸರ್ಕಾರ ಕಡಿವಾಣ ಹಾಕಿರುವುದರಿಂದ ಎಲ್ಲ ಬೆಲೆ ಪಾತಾಳಕ್ಕೆ ಕುಸಿದಿದೆ. ಅತ್ತಹಳ್ಳಿ ದೇವರಾಜು, ರೈತ ಮುಖಂಡ

ವರ್ಷಾರಂಭ ಸೇರಿದಂತೆ ಎಲ್ಲದಿನಗಳಲ್ಲಿಯೂ ಸೇವಂತಿಗೆ, ಗುಲಾಬಿ,ಕನಕಾಂಬರ ಹೂವಿಗೆ ಸಾಮಾನ್ಯವಾಗಿ ಬೆಲೆಹೆಚ್ಚಿರುತ್ತಿತ್ತು. ಆದರೆ ಕಳೆದ ಹದಿನೈದುದಿನಗಳಿಂದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಹೂವನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಸುರೇಶ್, ಹೂವಿನ ವ್ಯಾಪಾರಿ

ಕೇರಳ ಮತ್ತು ತಮಿಳುನಾಡಿನಿಂದ ಬರುತ್ತಿದ್ದವರ್ತಕರು ಕೋವಿಡ್2ನೇ ಅಲೆ ಭೀತಿಯಿಂದ ಕಡಿಮೆಯಾಗಿದ್ದಾರೆ. ಮದುವೆ, ಜಾತ್ರೆ-ಉತ್ಸವಗಳಿಗೆ ಸರ್ಕಾರ ಕಡಿವಾಣ ಹಾಕಿರುವುದರಿಂದ ಹೂ, ಹಣ್ಣು ಹಾಗೂ ತರಕಾರಿ ಬೇಡಿಕೆ ಕಡಿಮೆಯಾಗಿದೆ. ಮರಂಕಯ್ಯ, ರೈತ ಸಂಘ ಮುಖಂಡರು

 

-ಸತೀಶ್ ದೇಪುರ

ಟಾಪ್ ನ್ಯೂಸ್

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ನಾನು ಹೇಳುತ್ತಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ಕೋಲಾರದಲ್ಲಿ ಅಸಮಾಧಾನ ಇರೋದು ಸತ್ಯ: ಸಿಎಂ ಸಿದ್ದು

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

ನಮ್ಮ ಅಭ್ಯರ್ಥಿ ಪರ ವ್ಯಕ್ತವಾಗುತ್ತಿರುವ ಪ್ರವಾಹವನ್ನು ಡಿಕೆಶಿ ತಡೆಯಲಿ: ಎಚ್‌ಡಿಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.