ವೆಂಟಿಲೇಟರ್, ಆಕ್ಸಿಜನ್ಗಾಗಿ ವಾರ್ರೂಂಗೆ ನಿತ್ಯ ಕರೆ
Team Udayavani, May 9, 2021, 6:56 PM IST
ಮೈಸೂರು: ನಗರದ ಸಿದ್ದಾರ್ಥ ಬಡಾವಣೆಯಲ್ಲಿನನೂತನ ಜಿಲ್ಲಾಧಿಕಾರಿ ಕಟ್ಟಡದಲ್ಲಿ ಆರಂಭಿಸಿರುವಜಿಲ್ಲಾ ವಾರ್ ರೂಂಗೆ ಶನಿವಾರ ಕೋವಿಡ್-19ಟಾಸ್ಕ್ಫೋರ್ಸ್ನ ಹಾಸಿಗೆ ನಿರ್ವಹಣೆ ಸಂಚಾಲಕ ಎಚ್.ವಿ.ರಾಜೀವ್ ಹಾಗೂ ವಾರ್ ರೂಂ ಸಂಚಾಲಕಆರ್.ರಘು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಹೆಲ್ಪ್ಲೈನ್ ನೋಡೆಲ್ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿ, ಏಪ್ರಿಲ್28ರಿಂದ ನಗರದಲ್ಲಿ ಜಿಲ್ಲಾ ವಾರ್ ರೂಂಸ್ಥಾಪಿಸಲಾಗಿದ್ದು, ಮೇ 8ರ ಶನಿವಾರದ ಅಂತ್ಯಕ್ಕೆ 4,071 ಕರೆಗಳು ಬಂದಿವೆ. ನಿತ್ಯ 400ಕ್ಕಿಂತಹೆಚ್ಚು ಕರೆಗಳು ಬರುತ್ತಿವೆ. ವೆಂಟಿಲೇಟರ್ಗೆ 50,ಆಕ್ಸಿಜನ್ ಕೇಳಿಕೊಂಡು 100 ಕರೆಗಳು ಬರುತ್ತಿವೆ.ಕೋವಿಡ್ ಪಾಸಿಟಿವ್ ಇರುವವರು ಕರೆಮಾಡುತ್ತಿದ್ದಾರೆ. ಪರೀಕ್ಷೆ ಮಾಡಿಸಿ ವರದಿ ಲಭ್ಯವಾಗದ ನಾಗರಿಕರು ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಕರೆ ಮಾಡುವ ಎಲ್ಲರಿಗೂ ಅಗತ್ಯ ಮಾಹಿತಿ ರವಾನಿಸುತ್ತಿದ್ದೇವೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಮುಡಾ ಅಧ್ಯಕ್ಷ, ಕೋವಿಡ್ಟಾಸ್ಕ್ ಫೋರ್ಸ್ನ ಹಾಸಿಗೆ ನಿರ್ವಹಣೆ ಸಂಚಾಲಕಎಚ್.ವಿ.ರಾಜೀವ್, ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಾರ್ಡನ್ಗಳು ಮತ್ತು ಯೂತ್ ಸೇವಾ ಸಂಸ್ಥೆ ಸೇರಿ 30 ಸೇರಿವಾರ್ ರೂಂ ಕಾರ್ಯನಿರ್ವಹಣೆಗೆ 30 ಮಂದಿಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗಿದೆಎಂದು ತಿಳಿಸಿದರು.
ಕೋವಿಡ್ 2ನೇ ಅಲೆ ನಿರ್ವಹಣೆ ಸಂಬಂಧನಗರದಲ್ಲಿ ಸ್ಥಾಪಿಸಿರುವ ಜಿಲ್ಲಾ ವಾರ್ ರೂಂಗೆಶನಿವಾರದವರೆಗೆ 4 ಸಾವಿರಕ್ಕೂ ಅಧಿಕ ಕರೆಗಳುಬಂದಿವೆ. ಈ ಪೈಕಿ ವೆಂಟಿಲೇಟರ್ ಯಾವಆಸ್ಪತ್ರೆಯಲ್ಲಿ ಲಭ್ಯವಿದೆ. ಆಕ್ಸಿಜನ್ ಬೆಡ್ ಎಲ್ಲಿದೊರೆಯುತ್ತಿದೆ. ರೆಮ್ಡಿಸಿವಿರ್ ಇಂಜೆಕ Òನ್ಲಭ್ಯವಿದೆಯಾ? ಎಂಬುದು ವಾರ್ ರೂಂಗೆಬರುತ್ತಿರುವ ಕರೆಗಳು ಎಂದು ಹೇಳಿದರು.ಈ ವೇಳೆ ಸಾರ್ವಜನಿಕ ಗ್ರಂಥಾಲಯ ಇಲಾಖೆಉಪ ನಿರ್ದೇಶಕ ಮಂಜುನಾಥ್, ಆಯುಷ್ಇಲಾಖೆ ಉಪ ನಿರ್ದೇಶಕ ಡಾ. ಸೀತಾಲಕ್ಷ್ಮೀ,ಉಪ ವಿಭಾಗಾಧಿಕಾರಿ ವೆಂಕಟರಾಜು, ಸರ್ಕಾರಿಆಸ್ಪತ್ರೆಗಳ ಬೆಡ್ ಉಸ್ತುವಾರಿ ಡಾ. ಸಿ. ರವಿ, ಖಾಸಗಿಆಸ್ಪತ್ರೆಗಳ ನೋಡೆಲ್ ಅಧಿಕಾರಿ ಡಾ. ಅಶೋಕ್ಕರ್ನಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ