ನಾಲೆಗಳಿಗೆ ಹಾರಂಗಿ ನೀರು ಹರಿಸುವ ನಿರೀಕ್ಷೆ
Team Udayavani, Aug 3, 2017, 12:29 PM IST
ಪಿರಿಯಾಪಟ್ಟಣ: ಹಾರಂಗಿ ಜಲಾಶಯಗಳಿಗೆ 2 ವರ್ಷದಿಂದ ನೀರು ಬಿಟ್ಟಿಲ್ಲ ಎಂಬ ಆರೋಪವಿದೆ. ಆದರೆ ಜನ ಜಾನುವಾರು ಕುಡಿಯುವ ನೀರಿಗಾಗಿ ಸರಕಾರ ನೀಡು ಬಿಡುವ ನಿರೀಕ್ಷೆ ಇದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರ ಸಮುದಾಯ ಭವನ ನಿರ್ಮಾಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜಲಾಶಯಗಳಲ್ಲಿ ಕುಡಿಯುವ ನೀರಿಲ್ಲ ದೇವರ ದಯೆಯಿಂದ ಉತ್ತಮ ಮಳೆಯಾಗಲಿ ಎಂಬುದನ್ನು ಪ್ರತಿನಿತ್ಯ ಪ್ರಾರ್ಥಿಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದ ಯಾವುದೇ ಭಾಗದಲ್ಲಿ ರೈತರು ನೆಮ್ಮದಿ ಇಲ್ಲದಂತಾಗಿದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಪಿರಿಯಾಪಟ್ಟಣ, ಕೆ.ಆರ್.ನಗರ ಮುಂತಾದ ಕಡೆ ಹೆಚ್ಚು ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ರೈತರು ಯಾವುದೇ ಕಾರಣಕ್ಕೆ ಆತ್ಮಹತ್ಯೆ ದಾರಿ ತುಳಿದು ನಿಮ್ಮ ಕುಟುಂಬಗಳನ್ನು ಅನಾಥರನ್ನಾಗಿ ಮಾಡದೆ ಆಶಾಭಾವನೆಯಿಂದ ಜೀವನ ಸಾಧಿಸಬೇಕು ಎಂದು ತಿಳಿಸಿದರು. ಹಾರಂಗಿ ಜಲಾಶಯ ಭಾಗದಿಂದ ನೀರು ಬಿಡಬೇಕು ಎಂದು ಈಗಾಗಲೇ ಹೋರಾಟ ನಡೆಸುತ್ತಿದ್ದೇವೆ ಸದ್ಯದಲ್ಲೇ ಸಭೆ ಕರೆಯುವ ಭರವಸೆ ಇದೆ ಎಂದರು.
ಉಸ್ತುವಾರಿ ಸಚಿವ ಎಸ್.ಮಹದೇವಪ್ಪ ಮಾತನಾಡಿ, ಗ್ರಾಮಗಳಲ್ಲಿ ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯ ಇಲ್ಲ ಎಂಬುದನ್ನು ಗ್ರಾಮದ ಜನರು ತೋರಿಸಿದ್ದಾರೆ. ಒಂದೇ ಸಮಾಜಕ್ಕೆ ಸೇರಿದ ಜನಸಮುದಾಯವಿದ್ದರು ರಾಜಕೀಯವನ್ನು ಹೊರತುಪಡಿಸದರೆ ಸಂಘರ್ಷಕ್ಕೆ ಕಾರಣವಿಲ್ಲ. ರಾಜಕೀಯ ಬದಲಾವಣೆ ಸಾಮಾನ್ಯ ಕಾಂಗ್ರೆಸ್ನವರು ಜೆಡಿಎಸ್ನವರಾಗುತ್ತಾರೆ, ಜೆಡಿಎಸ್ನವರು ಕಾಂಗ್ರೆಸಿನವರಾಗುತ್ತಾರೆ.
ಆದರೆ ನಮ್ಮ ಸಿದ್ಧಾಂತಗಳಲ್ಲಿ ಬದಲಾವಣೆಯಾಗಬಾರದು. ನಾನು ಸೇರಿದಂತೆ ನಮ್ಮ ಮುಖ್ಯಮಂತ್ರಿಗಳು ಎಚ್.ಡಿ.ದೇವೇಗೌಡರ ಗಡಿಯಲ್ಲಿ ಪಳಗಿದ್ದವರು. ಕಾವೇರಿ ವಿಚಾರದಲ್ಲಿ ದೇವೇಗೌಡರು ವಿಧಾನಸೌಧನಕ್ಕೆ ಬಂದು ಮಾರ್ಗದರ್ಶನ ನೀಡಿದ್ದಾರೆ. ರಾಜಕೀಯ ಒಂದು ವಿಜಾnನವಿದ್ದಂತೆ ಅದು ಜನರಿಗೆ ಅನುಕೂಲವಾಗಿರಬೇಕು ಎಂದು ತಿಳಿಸಿದರು.
ಸರಕಾರ 50 ಸಾವಿರ ಸಾಲಾ ಮನ್ನ ಮಾಡಿದೆ. ಕಾವೇರಿ ಕಣಿವೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಮಳೆಯಾಗಿದೆ. ಸರಕಾರ ಎಲ್ಲರೂ ಸೇರಿ ರೈತರ ಹಿತವನ್ನು ರಕ್ಷಣೆ ಮಾಡಬೇಕು 53 ಟಿಎಂಸಿಯಲ್ಲಿ ಸಂಗ್ರಹವಾಗಿದೆ. 43 ಟಿಎಂಸಿಂ ತಮಿಳುನಾಡಿಗೆ ನೀಡಬೇಕು ಆದರೆ ನಾವು ನೀಡಿರುವುದು 7 ಟಿಎಂಸಿ ಮಾತ್ರ ನ್ಯಾಯಾಲಯದಲ್ಲಿ ವಾದವಿದೆ. ಆದ್ದರಿಂದ ರೈತರ ಹಿತಕಾಯುತ್ತಾ ಜನರಿಗೆ ಕುಡಿಯುವ ನೀರು ಕೊಡುತ್ತಾ ಬಂದಿದೆ.
ಶೀಘ್ರದಲ್ಲೇ ಸರ್ವಪಕ್ಷಗಳ ಸಭೆ ಕರೆದು ಜನರಿಗೆ ಕುಡಿಯುವ ನೀರು ಕೊಡುವುದು ಹೇಗೆ? ಅಂತ್ಯಂತದ ಸಂಕಷ್ಟದ ವರ್ಷ ಆಗಿದ್ದು ಸರಕಾರ ಎಲ್ಲರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ ಎಂದರು. ಶಾಸಕ ಕೆ.ವೆಂಕಟೇಶ್ ಮಾತನಾಡಿ, ವೈಜಾnನಿಕ ಏನೇ ಪ್ರಯತ್ನ ಮಾಡಿದರು ಪ್ರಕೃತಿದತ್ತವಾಗಿ ಬರುವ ಮಳೆಯನ್ನು ನಾವು ನಿಜವಾಗಲು ತರಲು ಸಾಧ್ಯವಿಲ್ಲ. ಭಗವಂತರ ಪ್ರಾರ್ಥನೆ ಹೊರತು ಪಡಿಸಿದರೆ ನಮಗೆ ಯಾವುದೇ ಮಾರ್ಗವಿಲ್ಲ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಬರ ಬರಬಹುದೇನೋ? ಎಂಬ ಹೆದರಿಕೆ ಉಂಟಾಗಿದೆ. ತಾಲೂಕಿನಲ್ಲಿ ಅರ್ಧಭಾಗದಷ್ಟು ಜನರಿಗೆ ಬೆಳೆಯೇ ಆಗಿಲ್ಲ. ಮುಖ್ಯಮಂತ್ರಿಗಳಿಗೆ ಕುಡಿಯುವ ನೀರು ಮತ್ತು ಕೆರೆ ನೀರು ತುಂಬಿಸಲು ಒತ್ತಾಯಿಸಲಾಗಿದೆ ಆ.5ರ ನಂತರ ನಾಲೆಗಳಿಗೆ ನೀಡು ಬಿಡುವ ಭರವಸೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ವಿಶೇಷ ಅಧಿಕಾರಿ ಡಾ.ಎಸ್.ಮಧುಕೇಶ್ವರ್ ಮತ್ತು ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಲೋಕನಾಥ್ರನ್ನು ಸನ್ಮಾನಿಸಲಾಯಿತು.
ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಮಾಜಿ ಸಂಸದ ಎಚ್.ವಿಶ್ವನಾಥ್, ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಪಿ.ಎಂ.ಫಾರೂಕ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಮಹದೇವ್, ವಿಶ್ರಾಂತ ಕುಲಪತಿ ಎಸ್.ರಂಗಪ್ಪ, ಗುರುಲಿಂಗ ಜಂಗಮದೇವರ ಮಠದ ಗಾವಡಗೆರೆ ಮಠ ನಟರಾಜ್ ಸ್ವಾಮಿಗಳು, ಜಿಪಂ ಸದಸ್ಯರಾದ ಕೆ.ಎಸ್.ಮಂಜುನಾಥ್, ರುದ್ರಮ್ಮನಾಗಯ್ಯ, ಮಾಜಿ ಜಿಪಂ ಸದಸ್ಯೆ ಮಂಜುಳರಾಜ್,
-ಮೈಸೂರು ನಗರಪಾಲಿಕೆ ಸದಸ್ಯ ಪ್ರಶಾಂತ್ಗೌಡ, ತಾಪಂ ಸದಸ್ಯ ಕೀರ್ತಿಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹಸ್ವಾಮಿ, ಮುಖಂಡ ಸೋಮಶೇಖರ್, ಬೀರಿಹುಂಡಿ ಬಸವಣ್ಣ, ಮಾಜಿ ಎಪಿಎಂಸಿ ಅಧ್ಯಕ್ಷ ಕೆ.ಹೊಲದಪ್ಪ, ಪುರಾತತ್ವ ಇಲಾಖೆ ನಿವೃತ್ತ ಅಧಿಕಾರಿ ರಾಮಚಂದ್ರಯ್ಯ, ಕೃಷ್ಣಪ್ಪ, ಬಸವರಾಜು, ಪಾಷಾ, ಮಂಚೇಗೌಡ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ