ಡಿಪೋದಿಂದ ಹೊರಬಂದ ಬಸ್ ತಡೆದು ಪ್ರತಿಭಟಿಸಿದ ಮಹಿಳೆಯರು, ಮಕ್ಕಳು
Team Udayavani, Apr 12, 2021, 9:21 AM IST
ಹುಣಸೂರು: ಸಾರಿಗೆ ಸಂಸ್ಥೆ ನೌಕರರ ಧರಣಿಯನ್ನು ಬೆಂಬಲಿಸಿ, ಕುಟುಂಬದ ಮಂದಿ ಮಕ್ಕಳ ಸಮೇತ ಹುಣಸೂರು ಬಸ್ ಡಿಪೋ ಎದುರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಡಿಪೋದ ಹೆಬ್ಬಾಗಿಲಿನಲ್ಲಿ ಜಮಾಯಿಸಿದ್ದ ನೌಕರರ ಕುಟುಂಬದ ಮಹಿಳೆಯರು ಮತ್ತು ಮಕ್ಕಳು ಸರಕಾರವು ನೌಕರರ ಬೇಡಿಕೆ ಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿ, ಡಿಪೋದಿಂದ ಹೊರಬರುತ್ತಿದ್ದ ಬಸ್ಸನ್ನು ಮಹಿಳೆಯರು ತಡೆಗಟ್ಟಲು ಮುಂದಾದ ವೇಳೆ ಇನ್ಸ್ಪೆಕ್ಟರ್ ರವಿ ಹಾಗೂ ಪೊಲೀಸರು ನಿಯಂತ್ರಿಸಿ ಬಸ್ ಕಳುಹಿಸಿದರು.
ಇದನ್ನೂ ಓದಿ:ಸಾರಿಗೆ ಸಂಸ್ಥೆ ನೌಕರರ ಕಲ್ಲೇಟಿಗೆ ಐದು ಬಸ್ ಗಳ ಗಾಜು ಪುಡಿ: ಒಬ್ಬರಿಗೆ ಗಾಯ, ಇಬ್ಬರ ಬಂಧನ
ಈ ವೇಳೆ ಮಾತನಾಡಿದ ಯಶೋಧಾ ತಾಂಡವಮೂರ್ತಿ, ಮಮತ, ರೇಷ್ಮಾ ಮತ್ತಿತರ ಮಹಿಳೆಯರು ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹುಣಸೂರು ಡಿಪೋದ ಮೂರು ಮಂದಿ ನೌಕರರನ್ನು ವಿನಾಕಾರಣ ಬೇರೆಡೆಗೆ ವರ್ಗಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ತೊಡಗಿರುವವರಿಗೆ ಪೊಲೀಸರ ಮೂಲಕ ಬೆದರಿಕೆಗಳು ಬರುತ್ತಿದೆ. ಮತ್ತಷ್ಟು ನೌಕರರನ್ನು ಬೇರೆಡೆಗೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ. ಇದು ನಿಲ್ಲಬೇಕು. ನೌಕರರಿಗೆ ನೀಡುತ್ತಿರುವ ಸಂಬಳ ಸಾಲದು, ಕಡ್ಡಾಯವಾಗಿ 6ನೇ ವೇತನ ಜಾರಿಗೆ ಬರಬೇಕು. ಸರಕಾರಿ ನೌಕರರೆಂದು ಪರಿಗಣಿಸಬೇಕು. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಸಂಧಾನವೊಂದೇ ಮಾರ್ಗ : ಉದಯವಾಣಿ ಸಮೀಕ್ಷೆಯಲ್ಲಿ ಜನಮತ
ಪ್ರತಿಭಟನೆಯಲ್ಲಿ ಐವತ್ತಕ್ಕೂ ಹೆಚ್ಚು ನೌಕರರ ಕುಟುಂಬದ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.