ಹೊಟ್ಟೆನೋವೆಂದು ಆಸ್ಪತ್ರೆಯಿಂದ ಔಷಧ ತಂದವ ಅನುಮಾನಸ್ಪದವಾಗಿ ಸಾವು!
Team Udayavani, Feb 18, 2021, 9:48 AM IST
ಹುಣಸೂರು: ಹುಣಸೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಯುವಕನೊಬ್ಬ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಸ್ಪತ್ರೆ ಎದುರಿನ ಬಡಾವಣೆಯ ಬಾಬುಲಾಲ್ ಜೈನ್ ರ ಪುತ್ರ ರಾಹುಲ್ ಜೈನ್ (21) ಸಾವನ್ನಪ್ಪಿದ ಯುವಕ.
ಈತನಿಗೆ ಮಂಗಳವಾರ ಮಧ್ಯರಾತ್ರಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸಹೊದರನೊಂದಿಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ. ಆದರೆ ಬುಧವಾರ ಬೆಳಗ್ಗೆ 9 ಗಂಟೆಯಾದರೂ ಏಳದಿದ್ದಾಗ ಮನೆಯವರು ಎದ್ದೇಳಿಸಲು ಹೋದ ವೇಳೆ ರಾಹುಲ್ ಸಾವನ್ನಪ್ಪಿದ್ದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಸಿದ್ದರಾಮಯ್ಯ, ಯಶ್ ಅಂತ್ಯಕ್ರಿಯೆಗೆ ಬರಬೇಕೆಂದು ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ!
ರಾಹುಲ್ ಗೆ ಆಸ್ಪತ್ರೆಯಲ್ಕಿ ಕರ್ತವ್ಯ ನಿರತ ವೈದ್ಯರ ಸೂಚನೆಯಂತೆ ಕೆಲ ಔಷಧ ಹಾಗೂ ಗ್ಲೂಕೋಸ್ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ಸಿಗದ ಇಂಜಕ್ಷನ್ ನ್ನು ಮೆಡಿಕಲ್ಸ್ ನಲ್ಲಿ ಖರೀದಿಸಿ ನೀಡಲಾಗಿತ್ತು. ಆದರೆ ಹುಷಾರಾಗುವ ಬದಲು ತಮ್ಮ ಮಗ ಸಾವನ್ನಪ್ಪಿದ್ದು, ಸಾವಿನ ಬಗ್ಗೆ ಅನುಮಾನವಿದೆ ಎಂದು ನಗರ ಠಾಣೆಯಲ್ಲಿ ಬಾಬುಲಾಲ್ ಜೈನ್ ದೂರು ದಾಖಲಿಸಿದ್ದಾರೆ.
ಘಟನೆಯಿಂದ ರೊಚ್ಚಿಗೆದ್ದ ಸಂಬಂಧಿಕರು ಮತ್ತು ಸ್ಥಳೀಯರು ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ಹುಣಸೂರು: ಹೊಟ್ಟೆ ಉಬ್ಬರಿಸಿಕೊಂಡು ವಿಚಿತ್ರವಾಗಿ 16 ಕುರಿಗಳು ಸಾವು!
ಶವವನ್ನು ಮೈಸೂರಿನ ಕೆ.ಆರ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ.