ಮತದಾನದ ಹಕ್ಕು ಕಡ್ಡಾಯ ಚಲಾಯಿಸಿ
ಮತದಾನ ಜಾಗೃತಿ ಕಾರ್ಯಕ್ರಮ
Team Udayavani, Apr 20, 2019, 3:27 PM IST
ನಾರಾಯಣಪುರ: ಸುಕ್ಷೇತ್ರ ದೇವರಗಡ್ಡಿ ಗ್ರಾಮದಲ್ಲಿ ಭಾರತ ಜಾಗೃತ ಅಭಿಯಾನ ಸಂಸ್ಥೆ ವತಿಯಿಂದ ಮತದಾನ ಜನಜಾಗೃತಿ ಭಿತ್ತಿಪತ್ರ ವಿತರಿಸಲಾಯಿತು.
ನಾರಾಯಣಪುರ: ಮತದಾನ ಹಕ್ಕು ಹೊಂದಿರುವ
ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಚುನಾವಣೆ
ಪ್ರಕ್ರಿಯೆ ಭಾಗವಹಿಸಿ ತಮ್ಮ ಹಕ್ಕನ್ನು ಕಡ್ಡಾಯವಾಗಿ
ಚಲಾಯಿಸಬೇಕು. ಇದರಿಂದ ಪ್ರಜಾಪ್ರಭುತ್ವ
ಗೌರವಿಸಿದಂತಾಗುತ್ತದೆ ಎಂದು ಸಾಮಾಜಿಕ
ಕಾರ್ಯಕರ್ತ ಬಸವರಾಜ ಮೇಲಿನಮನಿ
ಹೇಳಿದರು.
ಸುಕ್ಷೇತ್ರ ದೇವರಗಡ್ಡಿ ಗ್ರಾಮದಲ್ಲಿ ಭಾರತ
ಜಾಗೃತ ಅಭಿಯಾನ ಸಂಸ್ಥೆ ವತಿಯಿಂದ ಶುಕ್ರವಾರ
ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಏ.23ರಂದು ರಾಜ್ಯದಲ್ಲಿ ಎರಡನೇ ಹಂತದ
ಮತದಾನ ನಡೆಯಲಿದೆ. ಅಂದಿನ ದಿನ ಪ್ರತಿಯೊಬ್ಬ
ಪ್ರಬುದ್ಧ ಮತದಾರರು ಮತಗಟ್ಟೆಗಳಿಗೆ ತೆರಳಿ
ಚುನಾವಣೆ ಆಯೋಗ ಸೂಚಿಸಿರುವ ಸೂಕ್ತ ದಾಖಲೆ
ತೋರಿಸಿ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು|
ಹೀಗಾಗಿ ನಿಮಗೆ ನೀಡಲಾದ ಮಹತ್ವದ ಮತದಾನ
ಹಕ್ಕು ಚಲಾಯಿಸಿ ಉತ್ತಮ ಜನನಾಯಕನನ್ನು
ಆಯ್ಕೆ ಮಾಡಲು ಸಿದ್ದರಾಗಬೇಕು. ಯಾವುದೇ
ಕಾರಣಕ್ಕೂ ಮತದಾನದಿಂದ ವಂಚಿತರಾಗದೆ ಹಾಗೂ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಧೈರ್ಯ, ನಿರ್ಭಿತಿಯಿಂದ ಮತ ಚಲಾಯಿಸಬೇಕು. ಪ್ರಜ್ಞಾವಂತ ಮತದಾರರು ತಾವು ಮತ ಚಲಾಯಿಸಬೇಕು.ಇತರರಿಗೂ ಮತ ಚಲಾಯಿಸಲು ತಿಳಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಗ್ರಾಮಸ್ಥರಿಗೆ ಭಿತ್ತಿ ಪತ್ರ ಹಂಚಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು. ಸಂಸ್ಥೆ ಕಾರ್ಯಕರ್ತರಾದ ಚನ್ನುಕುಮಾರ ದಿಂಡವಾರ, ಪುಟ್ಟು ಪಾಟೀಲ ಸೇರಿದಂತೆ ಸ್ಥಳೀಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
MUST WATCH
ಹೊಸ ಸೇರ್ಪಡೆ
Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ