ಕಾಯಕಲ್ಪಕ್ಕೆ ಕಾಯುತ್ತಿದೆ ಜಕ್ಕಲಿ ಗರಡಿಮನೆ
ಆಗುತ್ತಿಲ್ಲ ಪುರಾತನ ವ್ಯಾಯಾಮ ಶಾಲೆ ಸುಧಾರಿಸುವ ಕೆಲಸ ಸರ್ಕಾರದ ನಿರ್ಲಕ್ಷ್ಯಕ್ಕೆ ಅಸಮಾಧಾನ
Team Udayavani, Nov 7, 2019, 3:05 PM IST
ಸಿಕಂದರ ಎಂ. ಆರಿ
ನರೇಗಲ್ಲ: ಸ್ವಾತಂತ್ರ್ಯ ಬಳಿಕ ನಿರ್ಮಿಸಲಾದ ಜಕ್ಕಲಿ ಗ್ರಾಮದ ಗರಡಿ ಮನೆ ಹೆಂಚುಗಳಿಗೆ ಅಲ್ಲಲ್ಲಿ ತೂತು ಬಿದ್ದು, ದುರಸ್ತಿಗಾಗಿ ಕಾಯುತ್ತಿದೆ. ಗರಡಿ ಮನೆ ಮೇಲ್ಛಾವಣಿ, ಗೋಡೆ ಬಿರುಕು ಬಿಟ್ಟಿವೆ. ಹೆಗ್ಗಣ, ಇಲಿಗಳ ವಾಸಸ್ಥಾನವಾಗಿದೆ. ಕಾಲಿಡಲು ಭಯವಾಗುವ ಸ್ಥಿತಿಯಲ್ಲಿದೆ. ಗರಡಿ ಮನೆ ಮೇಲ್ಛಾವಣಿ ಹೆಂಚುಗಳು ಒಡೆದು ಹೋಗಿರುವುದರಿಂದ ಸೂರ್ಯನ ಕಿರಣ ಒಳಗೆ ಇಣುಕುತ್ತಿವೆ. ಮಳೆ ಬಂದರೆ ಸೋರುತ್ತಿದೆ.
ಜಕ್ಕಲಿ ಗ್ರಾಮದಲ್ಲಿ 1959ರಲ್ಲಿ ಗರಡಿ ಮನೆ ಆರಂಭವಾಗಿತ್ತು. ಕಳೆದ 30 ವರ್ಷಗಳ ಹಿಂದೆ 22ಕ್ಕೂ ಅಧಿಕ ಪೈಲ್ವಾನವರು ತರಬೇತಿ ಪಡೆಯುತ್ತಿದ್ದರು. ಪ್ರಸ್ತುತ ಪರಿಸ್ಥಿತಿಗೆ ಕೇವಲ ಐವರು ಪೈಲ್ವಾನರು ನಿತ್ಯ ಗರಡಿ ಮನೆಯಲ್ಲಿ ದೈಹಿಕ ಕಸರತ್ತು ಮಾಡುತ್ತಿದ್ದಾರೆ.
ಕುಂದುತ್ತಿರುವ ಆಸಕ್ತಿ: ಹಿಂದೆ ಕುಸ್ತಿ ಆಡುವುದು ಎಂದರೆ ಪ್ರತಿಷ್ಠೆ ಪ್ರಶ್ನೆಯಾಗಿತ್ತು. ಕುಸ್ತಿಯಲ್ಲಿ ವಿಜೇತನಾಗಿದ್ದರೆ ಊರು ತುಂಬೆಲ್ಲ ಮೆರವಣಿಗೆ ಮಾಡುತ್ತಿದ್ದರು. ಹಳ್ಳಿಗೂ ಹೆಮ್ಮೆಯ ವಿಷಯವಾಗುತ್ತಿತ್ತು. ಆದರೆ, ಇಂದು ಜಾತ್ರೆ, ರಥೋತ್ಸವಕ್ಕೆ ಸೀಮಿತವಾಗಿವೆ. ಇತ್ತೀಚಿನ ದಿನಗಳಲ್ಲಿ ದೇಹದಾರ್ಡ್ಯ ಸ್ಪರ್ಧೆಗೆ ಒತ್ತು ನೀಡುತ್ತ ಜಾನಪದ ಕಲೆಯಾಗಿದ್ದ ಕುಸ್ತಿಯಿಂದ ವಿಮುಖರಾಗುತ್ತಿದ್ದಾರೆ.
ಕುಸ್ತಿ ಪಟುಗಳನ್ನು ತಯಾರು ಮಾಡಲು ಗ್ರಾಮದ ಅನುಭವವುಳ್ಳ, ಹಿರಿಯ ಮಾಜಿ ಪೈಲ್ವಾನವರು ಇದ್ದಾರೆ. ಇವರ ಅನುಭವವನ್ನು ಯವ ಸಮುದಾಯ ಪಡೆಯುವತ್ತ ಆಸಕ್ತಿ ತೋರುತ್ತಿಲ್ಲ. ಗ್ರಾಮೀಣ ಕ್ರೀಡೆ ಸಂರಕ್ಷಿಸಲು ಇಂದಿನ ಯುವಕರು ಮುಂದೆ ಬರಬೇಕಿದೆ ಎಂಬುದು ಇಲ್ಲಿನ ಹಿರಿಯ ಪೈಲ್ವಾನರ ಮಾತಾಗಿದೆ.
ಬಂದಿಲ್ಲ ಅನುದಾನ: 1959ರಲ್ಲಿ ಸರ್ಕಾರದಿಂದ ನಿರ್ಮಾಣವಾದ ಗರಡಿ ಮನೆಗೆ ಅಭಿವೃದ್ಧಿ ಎಂಬುದು ದೂರದ ಮಾತಾಗಿದೆ. ಗರಡಿ ಮನೆ ಉಳಿಸಲು ಅನುದಾನ ನೀಡಬೇಕಾದ ಸರಕಾರ ನಿರ್ಲಕ್ಷ್ಯ ವಹಿಸಿವೆ. ಹೀಗಾಗಿ ಮೂಲ ಸೌಲಭ್ಯವೇ ಇಲ್ಲಿ ಇಲ್ಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ