ರಂಗಮಂದಿರ ಕೋಣೆಯಲ್ಲೆ ಗ್ರಂಥಾಲಯ
ಚಿಕ್ಕ ಕೋಣೆಯಲ್ಲಿ ವಾಚನಾಲಯನೆಲದ ಮೇಲೆ ಕುಳಿತು ಓದುವ ಪರಿಸ್ಥಿತಿ
Team Udayavani, Nov 14, 2019, 4:40 PM IST
ನರೇಗಲ್ಲ: ಹೆಚ್ಚು ಉಪನ್ಯಾಸಕರನ್ನು ಹೊಂದಿರುವ ಡ.ಸ. ಹಡಗಲಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಹಲವು ಸಮಸ್ಯೆಗಳ ಆಗರವಾಗಿದೆ. ಸ್ವಂತ ಕಟ್ಟಡ, ವಿದ್ಯುತ್ ಸಂಪರ್ಕ ಇಲ್ಲದೆ ಇಕ್ಕಟ್ಟಾದ ಶ್ರೀ ಬಸವೇಶ್ವರ ರಂಗ ಮಂದಿರದ ಕೋಣೆಯೊಂದರಲ್ಲಿ ಗ್ರಂಥಾಲಯವಿದೆ. ಗ್ರಂಥಾಲಯಕ್ಕೆ 80ಕ್ಕೂ ಅಧಿ ಕ ನೋಂದಾಯಿತ ಸದಸ್ಯರಿದ್ದು, ಅವರೇ ತಮಗೆ ಬೇಕಾದ ಪುಸ್ತಕಗಳನ್ನು ರ್ಯಾಕ್ನಿಂದ ಪಡೆಯಬಹುದು. ಗಾಳಿ-ಬೆಳಕಿನ ವ್ಯವಸ್ಥೆ ಸರಿಯಾಗಿಲ್ಲ. ಇಲ್ಲಿ ಪುಸ್ತಕ ಹುಡುಕುವುದು ಸಾಹಸದ ಕೆಲಸವಾಗಿದೆ. ಕುಡಿಯುವ ನೀರು, ಶೌಚಾಲಯ ಮೊದಲಾದ ಸೌಕರ್ಯಗಳು ಗಗನ ಕುಸುಮವಾಗಿವೆ.
ನೆಲದ ಮೇಲೆ ಕುಳಿತು ಓದುವ ಸ್ಥಿತಿ: ಓದುಗರು ಕೂರಲು ಸಾಕಷ್ಟು ಸ್ಥಳಾವಕಾಶವಿಲ್ಲದೆ ಪರದಾಡುವ ಪರಿಸ್ಥಿತಿ ಇದೆ. ಗ್ರಂಥಾಲಯದಲ್ಲಿ ವಿದ್ಯುತ್ ಸಂಪರ್ಕವಿಲ್ಲ, ರಂಗ ಮಂದಿರ ಆದ ಕಾರಣ ಓದುಗರು ತಮಗೆ ಬೇಕಾದ ಪತ್ರಿಕೆ, ಪುಸ್ತಕ ಪಡೆದು ರಂಗ ಮಂದಿರದ ನೆಲದ ಮೇಲೆ ಕುಳಿತುಕೊಂಡು ಓದುತ್ತಾರೆ. ಗ್ರಂಥಾಲಯ ಸುತ್ತಮುತ್ತ ಗದ್ದಲ-ಗಲಾಟೆ ಪರಿಸರವಿದೆ.
ಈ ಗ್ರಂಥಾಯಲವು ಜಿ.ಪಂ, 1999-2000 ಸಾಲಿನ ಲೋಕಸಭಾ ಸದಸ್ಯರ ಅನುದಾನದಲ್ಲಿ ನಿರ್ಮಿಸಿದ ಬಸವೇಶ್ವರ ರಂಗ ಮಂದಿರದ ಚಿಕ್ಕ ಕೊಠಡಿಯಲ್ಲಿ 2002-03ನೇ ಸಾಲಿನಲ್ಲಿ ಕೇವಲ 72 ಪುಸ್ತಕಗಳೊಂದಿಗೆ ಆರಂಭವಾಗಿತ್ತು. ಸದ್ಯ 2169 ಪುಸ್ತಕ ಹೊಂದಿದೆ. ಗ್ರಾಮದಲ್ಲಿ 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಒಂದೊಂದು ಪ್ರಾಥಮಿಕ ಹಾಗೂ ಪ್ರೌಢಶಾಲೆ ಇವೆ. ಗ್ರಾ.ಪಂ ಸೇರಿದಂತೆ ಅನೇಕ ಹಿರಿಯ ಉಪನ್ಯಾಸಕರು ಇರುವುದರಿಂದ ಹೆಚ್ಚು ಕಥೆ, ಕಾದಂಬರಿ, ಮಕ್ಕಳ ಕಥೆ, ಸ್ಪರ್ಧಾತ್ಮಕ ಪುಸ್ತಕಗಳಿಗೆ ಬೇಡಿಕೆ ಇದೆ.
ಗ್ರಂಥಾಲಯ ಚಿಕ್ಕ ಕೋಣೆಯಾಗಿರುವುದರಿಂದ ಟೇಬಲ್, ಖರ್ಚಿ, ಅಲ್ಮೇರಾ ಹಾಕಲು ಸ್ಥಳಾವಕಾಶ ಇಲ್ಲದಿರುವುದರಿಂದ ನಿತ್ಯ ಬರುವ 100ಕ್ಕೂ ಅಧಿಕ ಓದುಗರು ನೆಲದ ಮೇಲೆ ಕುಳಿತುಕೊಂಡು ಓದುವ ಸ್ಥಿತಿ ನಿರ್ಮಾಣವಾಗಿದೆ.
ಕಟ್ಟಡ ಉದ್ಘಾಟನೆ ಯಾವಾಗ?: ಈಗಾಗಲೇ ಜಿಪಂ-ತಾಪಂ, ಗ್ರಾಪಂ 2015-16ನೇ ಸಾಲಿನ ಗ್ರಾಮ ವಿಕಾಸ ಯೋಜನೆಯಡಿ ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಿಸಲಾಗಿದೆ. ಹಳೇ ಗ್ರಂಥಾಲಯದಲ್ಲಿರುವ ಟೇಬಲ್-ಖುರ್ಚಿಗಳನ್ನು ಹೊಸ ಕಟ್ಟಡದಲ್ಲಿಡಲಾಗಿದೆ. ಕೂಡಲೇ ಗ್ರಾ.ಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೂತನ ಕಟ್ಟಡ ಉದ್ಘಾಟಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆನ್ನುವುದು ಪ್ರಜ್ಞಾವಂತರ ಒತ್ತಾಸೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ