ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಸ್ಫೋಟ
Team Udayavani, Mar 24, 2019, 1:32 PM IST
ತುಮಕೂರು: ಕಾಂಗ್ರೆಸ್ ಸಂಸದರಿದ್ದರೂ ಅವರಿಗೆ ಟಿಕೆಟ್ ನೀಡದೇ ಜೆಡಿಎಸ್ಗೆ ಸ್ಥಾನ ಬಿಟ್ಟುಕೊಟ್ಟಾಗಿನಿಂದಲೂ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಆಕ್ರೋಶ ಶನಿವಾರ ಸ್ಫೋಟಗೊಂಡಿದ್ದು, ಕಾಂಗ್ರೆಸ್ ಟಿಕೆಟ್ ನೀಡದಿದ್ದರೆ ಏನಂತೆ ನೀವು ಪಕ್ಷೇತರವಾಗಿ ನಿಲ್ಲಿ.
ನಿಮ್ಮಂಥ ನಾಯಕರು ನಮಗೆ ಬೇಕು ಎಂದು ಒಕ್ಕೊರಲಿನಿಂದ ಕೂಗುವ ಮೂಲಕ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮನ ಒಲಿಸುವಲ್ಲಿ ಎಸ್.ಪಿ.ಮುದ್ದಹನುಮೇಗೌಡರ ಅಭಿಮಾನಿಗಳು ಯಶಸ್ವಿಯಾದರು.
ತುಮಕೂರು ತಾಲೂಕಿನ ಹೆಬ್ಬೂರು ಬಳಿ ಇರುವ ಸಂಸದರ ತೋಟದ ಮನೆಯ ಆವರಣದಲ್ಲಿ ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಕಾಂಗ್ರೆಸ್ ಮತ್ತು ಮುದ್ದಹನುಮೇಗೌಡ ಅಭಿಮಾನಿ ಕಾರ್ಯಕರ್ತರು ಕಾಂಗ್ರೆಸ್ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವುದಕ್ಕೆ ತಮ್ಮ ಆಕ್ರೋಶದ ಕಿಡಿಗಳನ್ನು ಹತ್ತಿಸಿದರು.
ಜನರ ಸೇವೆ ಮಾಡಿದ್ದೇನೆ: ಸಂಸದ ಎಸ್.ಪಿ.ಮುದ್ದಹನುಮೇಗೌಡರು ಆರಂಭದಲ್ಲಿ ಮಾತನಾಡಿ, ತಮ್ಮ ರಾಜಕೀಯ ಜೀವನ, ಮೂವತ್ತು ವರ್ಷಗಳ ಸಾಮಾಜಿಕ ಸೇವೆ ನೆನೆದು ಕಳೆದ ಹತ್ತೆನ್ನರಡು ದಿನಗಳಿಂದ ನನಗೆ ಟಿಕೆಟ್ ಸಿಕ್ಕದೇ ಇರುವುದಕ್ಕೆ ಅನೇಕ ಹೃದಯಗಳು ಮಿಡಿದಿವೆ. ಕಣ್ಣೀರು ಹಾಕಿದ್ದೀರಿ ಎಂದು ಭಾವನಾತ್ಮಕವಾಗಿಯೇ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿ ಬರುವವರೆಗೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದೇನೆ ಎಂದು ಹೇಳಿದರು.
ನಾನೂ ಒಬ್ಬ: ದೇಶದಲ್ಲಿ ಗೆದ್ದಿರುವ 44 ಕಾಂಗ್ರೆಸ್ ಸಂಸದರಲ್ಲಿ ನಾನೂ ಒಬ್ಬನಾಗಿದ್ದೆ. ರಾಜ್ಯದಲ್ಲಿ ಗೆದ್ದಿರುವ 10 ಸಂಸದರ ಪೈಕಿ 9 ಸಂಸದರಿಗೆ ಟಿಕೆಟ್ ನೀಡಲಾಗಿದೆ. ಆದರೆ, ನನ್ನ ಕ್ಷೇತ್ರವನ್ನು ಮಾತ್ರ ಜೆಡಿಎಸ್ಗೆ ಬಿಟ್ಟುಕೊಡಲು ಕಾರಣವೇನು. ಈ ಕ್ಷೇತ್ರವನ್ನು ನನಗೆ ಕೊಡಿ ಎಂದು ಮನವಿ ಮಾಡಿದ್ದೇನೆ . ಆದರೆ, ಇದ್ಯಾವುದಕ್ಕೂ ಅವರು ಸ್ಪಂದಿಸಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಬಂಡಾಯ ಅಭ್ಯರ್ಥಿ: ದೇವೇಗೌಡರ ಸ್ಪರ್ಧೆ ಅಂತಿಮವಾಗಿರುವ ಬೆನ್ನಲ್ಲೆ ಕಾಂಗ್ರೆಸ್, ತನ್ನ ಮೈತ್ರಿ ಧರ್ಮವನ್ನೂ ಲೆಕ್ಕಿಸದೇ ಬಂಡಾಯದ ಅಭ್ಯರ್ಥಿಯಾಗಿ ಮುದ್ದಹನುಮೇಗೌಡರು ಸ್ಪರ್ಧೆಗೆ ಮುಂದಾಗಿರುವುದು ಜೆಡಿಎಸ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾಂಗ್ರೆಸ್ ಹೈಕಮಾಂಡ್ ಮುದ್ದಹನುಮೇಗೌಡರನ್ನು ಮನವೊಲಿಸುವ ಪ್ರಯತ್ನ ಮಾಡುತ್ತದೆಯೋ..? ಅಥವಾ ಮುದ್ದಹನುಮೇಗೌಡರನ್ನೇ ತನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತದೆಯೋ ಎನ್ನುವುದು ಸದ್ಯದ ಪ್ರಶ್ನೆಯಾಗಿಯೇ ಉಳಿದಿದೆ.
ಸೋಮವಾರ 11 ಗಂಟೆಗೆ ಟೌನ್ಹಾಲ್ನಿಂದ ತಮ್ಮ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಡೀಸಿ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ನನಗೆ ಟಿಕೆಟ್ ನೀಡದೇ ಇರಲು ಕಾರಣ ತಿಳಿಸಿ. ಒಂದೇ ಒಂದು ಕಾರಣ ಹೇಳದೇ, ನನ್ನನ್ನೇ ಯಾಕೆ ಬಲಿಪಶು ಮಾಡುತ್ತೀರಾ, ಒಂದು ಅವಕಾಶ ಕೊಡಿ, ನನಗೆ ಟಿಕೆಟ್ ಕೊಟ್ಟರೆ ಇತಿಹಾಸ ಸೃಷ್ಟಿಯಾಗುತ್ತದೆ. ಪಕ್ಷದ ಬಿ-ಫಾರಂ ಸಿಗದಿದ್ದಲ್ಲಿ ಆ ಬಗ್ಗೆ ಸೋಮವಾರ ಮಾತನಾಡುತ್ತೇನೆ. ನಾಮಪತ್ರ ಸಲ್ಲಿಸೋದು ಮಾತ್ರ ನಿಶ್ಚಿತ, ಬೇರೆ ಏನೇ ಇದ್ದರೂ ಸೋಮವಾರ ಮಾತನಾಡುತ್ತೇನೆ.
-ಎಸ್.ಪಿ.ಮುದ್ದಹನುಮೇಗೌಡ, ಕಾಂಗ್ರೆಸ್ ಸಂಸದ
* ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು