ಕೃಷಿ ಪರಿಕರಗಳಿಗೆ ಕಮ್ಮಾರರದ್ದೇ ಪಡೇಚ್ಚು
ಗ್ರಾಮೀಣದಲ್ಲಿ ಬೀಡು ಬಿಟ್ಟಿರುವ ವಿವಿಧ ರಾಜ್ಯದ ಕಮ್ಮಾರರು ಕೃಷಿಗೆ ಪೂರಕ ಸಲಕರಣೆ ಸಿದ್ಧ
Team Udayavani, Mar 15, 2021, 7:37 PM IST
ಮುದಗಲ್ಲ: ಕುಡುಗೋಲು, ಕೊಡಲಿ, ಬೆಡಗಾ,ಕುಂಟೆ ಕುಡ, ತಾಳ, ಪಿಕಾಸಿ, ಗುದ್ದಲಿ, ಚಾಕು, ಕೋತಾ, ಸಲಿಕೆ, ಬಿತ್ತಣಿಕೆ ತಯಾರಿಸುವುದಲ್ಲದೇ, ಹಳೆಯದನ್ನು ಹರಿತಗೊಳಿಸುವ ಕೆಲಸ ವಲಸಿಗ ಕಮ್ಮಾರರಿಂದ ಭರದಿಂದ ನಡೆಯುತ್ತಿದೆ.
ಮುದಗಲ್ಲ ಸಮೀಪದ ಛತ್ತರ, ತಲೇಖಾನ, ನಾಗಲಾಪೂರ, ಉಳಿಮೇಶ್ವರ, ನಾಗರಹಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಸ್ತೆ ಬದಿ, ಜನ ಸೇರುವ ಸ್ಥಳ, ಬಸ್ ನಿಲ್ದಾಣಗಳ ಹತ್ತಿರ ತಾತ್ಕಾಲಿಕ ಕುಲುಮೆಗಳನ್ನು ಹಾಕಿಕೊಂಡು ಕೃಷಿಗೆ ಅಗತ್ಯ ಸಲಕರಣೆಗಳನ್ನು ತಯಾರು ಮಾಡಿಕೊಡುತ್ತಿದ್ದಾರೆ.
ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ರಾಜ್ಯಗಳಿಂದ ವಲಸೆ ಬಂದ ಕುಲುಮೆ ಕುಟುಂಬಗಳು ಒಂದಿಷ್ಟು ದಿನ ಇಲ್ಲಿನ ಗ್ರಾಮಗಳಲ್ಲಿ ಟೆಂಟ್ ಹಾಕಿಕೊಂಡು ರೈತರಿಗೆ ಕೃಷಿಗೆ ಬೇಕಾದ ಪರಿಕರಗಳನ್ನು ಸಿದ್ಧಪಡಿಸುತ್ತಾರೆ. ಕೆಲ ರೈತರು ಕುಲುಮೆ ಸ್ಥಳಕ್ಕೇ ಬಂದು ತಮಗೆ ಬೇಕಾಗುವ ಕೃಷಿ ಸಲಕರಣೆಗಳನ್ನು ಖರೀದಿಸಿದರೆ, ಇನ್ನೂ ಕೆಲ ರೈತರು ಮನೆಮನೆಗೆ ತಂದು ಮಾರಾಟ ಮಾರುವವರಿಂದ ಖರೀದಿಸುತ್ತಾರೆ.
ಮಾರಾಟ ಮಾಡಿ ಬರುವ ಹಣದಲ್ಲಿ ವಲಸೆ ಕಮ್ಮಾರರು ತಮ್ಮ ಉಪಜೀವನ ನಡೆಸುತ್ತಾರೆ. ಸಂಚಾರಿ ಜೀವನದಲ್ಲಿಯೇ ತೃಪ್ತಿ ಕಾಣುವ ಕಮ್ಮಾರರು ವರ್ಷದಲ್ಲಿ 9 ತಿಂಗಳು ಸಂಚಾರಿ ಜೀವನದಲ್ಲಿಯೇ ಕಾಲ ಕಳೆಯುತ್ತೇವೆಂದು ಎಂದು ಹೇಳುತ್ತಾರೆ ಮಧ್ಯಪ್ರದೇಶದ ಕಮ್ಮಾರ ಗೊರೇಲಾ ಒಂಕಾರ್ ಸಿಂಗ್. ವಲಸೆ ಕಮ್ಮಾರರು ಕೃಷಿಗೆ ಬೇಕಾದ ಸಲಕರಣೆಗಳನ್ನು ತ್ವರಿತವಾಗಿ ಕೊಡುವುದರಿಂದ ಕೃಷಿಗೆ ಬಹಳಷ್ಟು ಅನುಕೂಲವಾಗಿದೆ ಎನ್ನುತ್ತಾರೆ ಛತ್ತರ ಗ್ರಾಮದ ರೈತ ನಿಂಗಪ್ಪ, ಗೊವಿಂದಪ್ಪ, ವೆಂಕಟೇಶ.
ದೇವಪ್ಪ ರಾಠೊಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ