ಬಡವರ ಬಾಳಲ್ಲಿ ಅಕ್ರಮ ಸಕ್ರಮ ಆಶಾಕಿರಣ
Team Udayavani, Jun 12, 2021, 10:44 AM IST
ಸಿಂಧನೂರು: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡವರ ಬಹು ನಿರೀಕ್ಷೆಯ ಅಕ್ರಮ-ಸಕ್ರಮ ಯೋಜನೆಗೆ ಸರ್ಕಾರ ಚಾಲನೆ ನೀಡುತ್ತಿದ್ದಂತೆ, ಅರ್ಜಿದಾರರಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ.
ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡ ಕಾರಣಕ್ಕೆ ಸರ್ಕಾರಿ ಸೌಲಭ್ಯಗಳಿಂದ ವಂಚಿತಗೊಂಡ ಜನರಲ್ಲಿ ಈಗಿನ ಯೋಜನೆ ಹೊಸ ಆಶಾಭಾವ ಮೂಡಿಸಿದೆ. ಕಳೆದ ವರ್ಷ ಮಾ.31ರೊಳಗೆಅರ್ಜಿ ಸಲ್ಲಿಸಲು ಅವಕಾಶ ನೀಡಿದರೂ ನಂತರದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಯೋಜನೆಗೆ ಸ್ಥಗಿತಗೊಂಡಿತ್ತು. ಕೋವಿಡ್ 2ನೇ ಅಲೆ ತಗ್ಗುತ್ತಿರುವ ಸಂದರ್ಭದಲ್ಲಿ ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದರಿಂದ ಬಡವರಲ್ಲಿ ಹೊಸ ಕನಸು ಚಿಗುರೊಡೆದಿದೆ.
ಗ್ರಾಮೀಣ ಸ್ಥಿತಿ ಏನು?: ಸರ್ಕಾರ ಭೂ ಕಂದಾಯ ಅಧಿನಿಯಮ 1964ರ ಕಲಂ 94ಸಿ ಮತ್ತು 94 ಸಿಸಿಯಡಿ ಅರ್ಜಿ ಸಲ್ಲಿಸಲು ಕಳೆದ ವರ್ಷವೇ ಸೂಚಿಸಿತ್ತು. ಆದರೆ, ನಂತರದಲ್ಲಿ ಇತ್ಯರ್ಥಪಡಿಸಿರಲಿಲ್ಲ. ಸಿಂಧನೂರು ಹೋಬಳಿಯಲ್ಲಿ 11, ಹೆಡಗಿನಾಳ-32, ತುರುವಿಹಾಳ-190, ಬಾದರ್ಲಿ-57, ವಲ್ಕಂದಿನ್ನಿ-13, ಗೊರೇಬಾಳ-1, ಕುನ್ನಟಗಿ-47, ಜವಳಗೇರಾ-1, ಹುಡಾ-133, ಸಾಲಗುಂದಾ-78, ಗುಂಜಳ್ಳಿ ಹೋಬಳಿಯಲ್ಲಿ 118 ಅರ್ಜಿ ಸಲ್ಲಿಕೆಯಾದರೆ, ಜಾಲಿಹಾಳ ಹೋಬಳಿಯಲ್ಲಿ ಒಂದೇ ಒಂದು ಅರ್ಜಿ ಸಲ್ಲಿಕೆಯಾಗಿರಲಿಲ್ಲ. ಕಂದಾಯ ಇಲಾಖೆಗೆ ಸಂಬಂಧಿಸಿ ಜಮೀನುಗಳ ಮಾಲೀಕತ್ವಕ್ಕಾಗಿ 681 ಜನ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಸರ್ಕಾರ ವಿಧಿಸಲಿರುವ ಶುಲ್ಕ ಭರಿಸಲಿಕ್ಕೂ ಹಲವರು ಮುಂದೆ ಬಂದಿದ್ದರು. ಆ ಎಲ್ಲ ಜನರಲ್ಲಿ ಹೊಸದಾಗಿ ಅಕ್ರಮ-ಸಕ್ರಮ ಯೋಜನೆಯಲ್ಲಿ ಸೌಲಭ್ಯ ಪಡೆಯುವ ನಿರೀಕ್ಷೆ ಮೂಡಿಸಿದೆ.
ನಗರ ವ್ಯಾಪ್ತಿಯಲ್ಲಿ ಬೇಡಿಕೆ: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಜನರು ನಗರ ಪ್ರದೇಶದಲ್ಲೂ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಸರ್ಕಾರ ನಿಗದಿಪಡಿಸಿದ ಪ್ರಕಾರ ಜಾಗದ ಅಳತೆ ಆಧರಿಸಿ ದಂಡ ಕಟ್ಟಲಿಕ್ಕೂ ಮುಂದೆ ಬಂದಿದ್ದರು. ಇದರ ಪರಿಣಾಮ ಇಲ್ಲಿನ ನಗರಸಭೆ ಕಚೇರಿಗೆ 18 ಲಕ್ಷ ರೂ. ಮುಂಗಡವೂ ಸಲ್ಲಿಕೆಯಾಗಿತ್ತು. ಮಾ.31, 2019ರ ನಂತರ ಅರ್ಜಿ ಇತ್ಯರ್ಥಪಡಿಸದ ಹಿನ್ನೆಲೆಯಲ್ಲಿ ಬಹುತೇಕರು ಅರ್ಜಿ ವಾಪಸ್ ಪಡೆದಿದ್ದರು. ಜತೆಗೆ 6 ಲಕ್ಷ ರೂ. ಡಿಡಿ ಮೊತ್ತ ವಾಪಸ್ ಪಡೆದಿದ್ದರು.
ಬೇಡಿಕೆ ಈಡೇರುವ ಆಸೆ: ಸರ್ಕಾರ ಕಂದಾಯ ಭೂಮಿಯಲ್ಲಿ ವಾಸವಾಗಿರುವ ಮನೆಗಳನ್ನು ಸಕ್ರಮಗೊಳಿಸುವ ಆದೇಶ ಹೊರಡಿಸುತ್ತಿದ್ದಂತೆ ಬಹುತೇಕರಲ್ಲಿ ಸಂತಸ ಮೂಡಿದೆ. ಮಾ.31, 2022ರ ತನಕವೂ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರಿಂದ ಮತ್ತೆ ಅರ್ಜಿ ಸಲ್ಲಿಸುವ ಸಿದ್ಧತೆಗಳು ಗರಿಗೆದರಿವೆ. ಕಚ್ಚಾ ಲೇಔಟ್ಗಳನ್ನು ಪಕ್ಕಾ ಮಾಡಿಕೊಳ್ಳುವ ಧಾವಂತ ನಗರದಲ್ಲಿ ಕಂಡುಬಂದಿದ್ದು, ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯೂ ಚುರುಕು ಪಡೆದಿದೆ.
ಅಕ್ರಮ-ಸಕ್ರಮ ಸಮಿತಿಗೆ ಶಾಸಕರು ಅಧ್ಯಕ್ಷರು. ನಾನು ಕಾರ್ಯದರ್ಶಿ. ಸರ್ಕಾರದಿಂದ ಆದೇಶ ಹೊರಬಿದ್ದರೆ ಕೋವಿಡ್ ನಂತರದಲ್ಲಿ ಸಭೆ ಕರೆದು ಸ್ಥಳ ಪರಿಶೀಲಿಸಿ ಅರ್ಜಿಗಳನ್ನು ಇತ್ಯರ್ಥಪಡಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು.-ಮಂಜುನಾಥ ಭೋಗಾವತಿ, ತಹಶೀಲ್ದಾರ್, ಸಿಂಧನೂರು
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ