ಮಾಜಿ ಸೈನಿಕರಿಗೆ ಸ್ಥಳ ನೀಡಲು ಒತ್ತಾಯಿಸಿ ಎಎಪಿ ಮನವಿ
Team Udayavani, May 5, 2022, 3:24 PM IST
ರಾಯಚೂರು: 2014-15ನೇ ಸಾಲಿನಲ್ಲಿ ಮಾಜಿ ಸೈನಿಕರಿಗೆ ಮಂಜೂರು ಮಾಡಿದ್ದ ಮೂರು ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ರದ್ದುಪಡಿಸಿದ್ದು, ಕೂಡಲೇ ಮರು ಮಂಜೂರಿಗೊಳಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ನಗರ ಘಟಕದ ಸದಸ್ಯರು ಆಗ್ರಹಿಸಿದರು.
ಈ ಕುರಿತು ಬುಧವಾರ ಡಿಸಿಗೆ ಮನವಿ ಸಲ್ಲಿಸಿದರು. ದೇಶಕ್ಕಾಗಿ ಜೀವನವನ್ನೇ ಪಣವಾಗಿಟ್ಟ ಸೈನಿಕರಿಗೆ ಇಷ್ಟು ಕೂಡ ಅನುಕೂಲ ಮಾಡಿಕೊಡದಿರುವುದು ಖಂಡನಿಯ. ಕೂಡಲೇ ಜಮೀನು ಮಂಜೂರು ಮಾಡಿ ಖಾಲಿ ನಿವೇಶನಗಳ ಹಂಚಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದು ತಿಂಗಳೊಳಗೆ ಜಮೀನು ಮಂಜೂರಾತಿ ನೀಡದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಎಎಪಿ ನಗರ ಘಟಕದ ಅಧ್ಯಕ್ಷ ಡಿ. ವೀರೇಶಕುಮಾರ್, ಸದಸ್ಯರಾದ ಬಸವರಾಜ ಗುತ್ತೇದಾರ್, ಹುಸೇನ್, ಅಬ್ದುಲ್ ಖಾದರ್, ಮಹ್ಮದ್ ಹುಸೇನ್ ಸೇರಿ ಇತರರಿದ್ದರು