ಸೇಂದಿ ಮಾರುತ್ತಿದ್ದ 7 ಜನರ ಬಂಧನ
Team Udayavani, Feb 10, 2022, 12:51 PM IST
ರಾಯಚೂರು: ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ದಾಳಿ ನಡೆಸಿದ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸೇಂದಿ ಮಾರುತ್ತಿದ್ದ ಏಳು ಜನರನ್ನು ಬಂಧಿಸಿದ್ದಾರೆ.
ಫೆ.5ರಿಂದ ಬುಧವಾರವರೆಗೆ ಸುಮಾರು 15 ಕಡೆ ದಾಳಿ ನಡೆಸಿದ್ದರು. ಒಟ್ಟು 6 ಪ್ರಕರಣಗಳನ್ನು ದಾಖಲಿಸಿದ್ದು, 6,250 ಮೌಲ್ಯದ 150 ಲೀಟರ್ ಕಲಬೆರಿಕೆ ಸೇಂದಿ, ಸುಮಾರು 1,23,000 ಮೌಲ್ಯದ 41 ಕೆಜಿ ಸಿಎಚ್ ಪೌಡರ್, 1.50 ಲಕ್ಷ ಮೂರು ದ್ವಿಚಕ್ರ ವಾಹನಗಳನ್ನು ಮತ್ತು 4.5 ಲಕ್ಷ ಮೌಲ್ಯದ ಕಾರು ಸೇರಿ ಒಟ್ಟಾರೆ 7,08,550 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕೃತ್ಯವೆಸಗಿದ ಆರೋಪಿಗಳಾದ ಮಂಗಳವಾರ ಪೇಟೆಯ ಶಾಲಂ, ರಾಂಪುರದ ಆನಂದಮ್ಮ, ಲಿಂಗಸುಗೂರು ತಾಲೂಕಿನ ಗುರುಗುಂಟಾದ ಅಮರೇಶ, ಹರಿಜನವಾಡದ ಯಲ್ಲಪ್ಪ, ಗದ್ವಾಲ್ ಜಿಲ್ಲೆಯ ನಂದಿನಿ ಗ್ರಾಮದ ಶಿವರಾಜ್, ಯಂಕಣ್ಣಗೌಡ, ಕಡಗಂದೊಡ್ಡಿಯ ಮುಕುಂದ, ತಾಯಣ್ಣಗೌಡರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ