ಬ್ಯಾಂಕ್‌ಗೆ ಹಣ ಪೂರೈಕೆ ಕುಸಿತ: ಗ್ರಾಹಕರ ಪರದಾಟ


Team Udayavani, Apr 12, 2018, 5:52 PM IST

ray-1.jpg

ರಾಯಚೂರು: ಕಳೆದ ಒಂದೆರಡು ತಿಂಗಳಿಂದ ಜಿಲ್ಲೆಯಲ್ಲಿ ಹಣಕಾಸಿನ ಸಂಕಷ್ಟ ಎದುರಾಗಿದ್ದು, ಎಟಿಎಂಗಳು ಸೇವೆ ನೀಡುವುದನ್ನೆ ಮರೆತಿವೆ. ಇದರಿಂದ ತುರ್ತು ಸೇವೆಗೆ ಹಣ ಸಿಗದೆ ಗ್ರಾಹಕರು ಮಾತ್ರ ಪರದಾಡುವಂತಾಗಿದೆ. ಜಿಲ್ಲೆಯ ಯಾವುದೇ ಬ್ಯಾಂಕ್‌ಗಳ ಎಟಿಎಂಗಳಿಗೆ ಹೋದರೂ ನೋ ಕ್ಯಾಶ್‌, ಔಟ್‌ ಆಫ್‌ ಸರ್ವಿಸ್‌ ಎಂಬ ಫಲಕಗಳೇ ಕಾಣುತ್ತಿವೆ. ಇದರಿಂದ ತುರ್ತು ಕೆಲಸಗಳಿಗೆ ಹಣ ಸಿಗದೆ ಗ್ರಾಹಕರು ಪರದಾಡುವಂತಾಗಿದೆ. ತಮ್ಮ ಖಾತೆ ಇರುವ ಬ್ಯಾಂಕ್‌ ಗಳ ಎಟಿಎಂಗಳಲ್ಲೇ ಹಣ ಬರುತ್ತಿಲ್ಲ. ಕಡಿಮೆ ಮೊತ್ತದ ಹಣ ಬಿಡಿಸಿಕೊಳ್ಳಬೇಕಾದರೂ ಚೆಕ್‌ ನೀಡುವಂತಾಗಿದೆ. ಒಂದೆರಡು ಎಟಿಎಂ ಸೇವೆ ಲಭ್ಯವಿದ್ದರೂ ಸಾಲುಗಟ್ಟಿ ನಿಲ್ಲಬೇಕಿದೆ. 

ಕೈ ಎತ್ತಿದ ಆರ್‌ಬಿಐ..!:
ಟು ಅಮಾನ್ಯಿಕರಣದ ನಂತರ ಬ್ಯಾಂಕ್‌ಗಳಿಗೆ ಹಣ ಪೂರೈಕೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಆರು ತಿಂಗಳಿಗೆ ಕನಿಷ್ಠ 100 ಕೋಟಿಯಾದರೂ ಹಣ ಬಿಡುಗಡೆ ಮಾಡುತ್ತಿತ್ತು. ಆದರೆ, ಹೆಚ್ಚಿನ ಹಣ ನೀಡಲು ಸಾಧ್ಯವಿಲ್ಲ ಎಂದು ಡಿಸೆಂಬರ್‌ನಲ್ಲೇ ಆರ್‌ಬಿಐ ಸೂಚನೆ ನೀಡಿದೆ ಎನ್ನುತ್ತಾರೆ ಬ್ಯಾಂಕ್‌ ವ್ಯವಸ್ಥಾಪಕರು. ಹೀಗಾಗಿ ಅಬ್ಬಬ್ಟಾ ಎಂದರೂ 30ರಿಂದ 40 ಕೋಟಿ ಪೂರೈಸಿದೆ ಅಷ್ಟೆ. ಈಚೆಗೆ ಹಣವನ್ನೇ ಪೂರೈಸುತ್ತಿಲ್ಲ. ಹಣದ ಕೊರತೆ ಬಗ್ಗೆ ಮನವರಿಕೆ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಸಾಧ್ಯವಾದಷ್ಟು ಆನ್‌ಲೈನ್‌ ವಹಿವಾಟು ಮಾಡುವಂತೆಯೇ ನಿರ್ದೇಶನ ನೀಡಲಾಗುತ್ತಿದೆ.

ಗ್ರಾಹಕರಿಂದಲೂ ಹಣ ಸಂದಾಯವಿಲ್ಲ: ಆರ್‌ಬಿಐ ಅಲ್ಲದಿದ್ದರೂ ಗ್ರಾಹಕರಿಂದಲಾದರೂ ವಹಿವಾಟು ನಡೆಯುತ್ತಿದ್ದರಿಂದ ಬ್ಯಾಂಕ್‌ ಗಳಿಗೆ ಸಮಸ್ಯೆ ಎದುರಾಗಿದ್ದಿಲ್ಲ. ಆದರೆ, ಕಳೆದ ಎರಡು ತಿಂಗಳಿಂದ ಬ್ಯಾಂಕ್‌ಗಳಿಗೆ ಗ್ರಾಹಕರು ಹಣ ಸಂದಾಯ ಮಾಡುತ್ತಿಲ್ಲ. ವರ್ತಕರು, ಪೆಟ್ರೋಲ್‌ ಬಂಕ್‌ಗಳ ಮಾಲಿಕರು, ಎಪಿಎಂಸಿ ಸೇರಿ ವಿವಿಧೆಡೆಯಿಂದ ಬ್ಯಾಂಕ್‌ಗಳಿಗೆ ಬರಬೇಕಾದ ಹಣ ಬರುತ್ತಿಲ್ಲ. ಇದರಿಂದ ಬ್ಯಾಂಕ್‌ಗಳು ನಿಷ್ಕ್ರಿಯಗೊಳ್ಳುತ್ತಿವೆ. 

ಚುನಾವಣೆ ಎಫೆಕ್ಟ್..?:
ಹಣ ವಹಿವಾಟು ಸ್ಥಗಿತಗೊಂಡಿದ್ದರ ಹಿಂದೆ ವಿಧಾನಸಭೆ ಚುನಾವಣೆ ಕೆಲಸ ಮಾಡಿದೆಯಾ ಎಂಬ ಗಾಳಿ ಮಾತು ಜೋರಾಗಿವೆ. ಮುಖ್ಯವಾಗಿ ದಿನಂಪ್ರತಿ ಲಕ್ಷಾಂತರ ರೂ. ವಹಿವಾಟು ನಡೆಸುವ ಗ್ರಾಹಕರೇ ಬ್ಯಾಂಕ್‌ಗಳಿಗೆ ಹಣ ಸಂದಾಯ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಇದರಿಂದ ಹಣ ಎಲ್ಲಿ ಶೇಖರಣೆಯಾಗುತ್ತಿದೆ. ಅದು ಹವಾಲಾಕ್ಕೆ ಬಳಸಲಾಗುತ್ತಿದೆಯಾ ಎಂಬ ಗುಮಾನಿಯಿದೆ.

ಎರಡರಿಂದ ಮೂರು ಲಕ್ಷ: ಎಟಿಎಂಗಳಲ್ಲಿ ಗಾತ್ರಾನುಸಾರ 24ರಿಂದ 40 ಲಕ್ಷ ರೂ. ವರೆಗೆ ಹಣ ಸಂಗ್ರಹಿಸಬಹುದು. ಮೊದಲೆಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು 40 ಲಕ್ಷ ರೂ. ಹಾಕುತ್ತಿದ್ದವು. ಆದರೆ, ಈಗ ಗ್ರಾಹಕರಿಗೆ ಕನಿಷ್ಠ ಸೇವೆಯಾದರೂ ನೀಡಬೇಕು ಎಂಬ ಕಾರಣಕ್ಕೆ ಎರಡರಿಂದ ನಾಲ್ಕು ಲಕ್ಷ ರೂ. ವರೆಗೆ ಹಾಕಲಾಗುತ್ತಿದೆ. ಅದು ಒಂದರಿಂದ ಎರಡು ಗಂಟೆಯೊಳಗೆ ಖರ್ಚಾಗುತ್ತಿದೆ. ನಂತರ ಬಂದ ಗ್ರಾಹಕರಿಗೆ ನೋ ಕ್ಯಾಶ್‌ ಔಟ್‌ ಆಫ್‌ ಸರ್ವಿಸ್‌ ಬೋರ್ಡ್‌ಗಳೇ ಗೋಚರಿಸುತ್ತಿವೆ.

ಮದುವೆಗಳಿಗೂ ಎಫೆಕ್ಟ್: ಹೇಳಿ ಕೇಳಿ ಇದು ಮದುವೆ ಕಾಲ. ಸಾದಾ ಸೀದಾ ಮದುವೆಗಳಿಗೆ ಐದಾರು ಲಕ್ಷ ರೂ. ಬೇಕಿದೆ. ದೊಡ್ಡ ಮೊತ್ತವನ್ನು ಚೆಕ್‌ ಮೂಲಕ ಪಡೆದರೂ, ಸಣ್ಣಪುಟ್ಟ ಕೆಲಸಗಳಿಗೆ ಎಟಿಎಂಗಳ ಮೊರೆ ಹೋಗಬೇಕಿದೆ. ಆದರೆ, ಅಂಥ ಕಡೆ ಹಣ ಸಿಗದೆ ಪರದಾಡುವಂತಾಗಿದೆ. ಬ್ಯಾಂಕ್‌ಗಳು ಕೂಡ ಮೂರು ಲಕ್ಷಕ್ಕಿಂತ ಹೆಚ್ಚು ಹಣ ನೀಡಲು ಆಗುವುದಿಲ್ಲ. ಬೇಕಾದರೆ, ಆನ್‌ ಲೈನ್‌ ವಹಿವಾಟು ಮಾಡಿ ಎನ್ನುತ್ತಿದ್ದಾರೆ. ಅಡುಗೆಯವರು, ಶಾಮಿಯಾನದವರು, ಪಾತ್ರೆ ಪಗಡೆಯವರಿಗೆಲ್ಲ ಆರ್‌ಟಿಜಿಎಸ್‌ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ಗ್ರಾಹಕರು. ಹಣಕಾಸಿನ ಸಂಕಷ್ಟಕ್ಕೆ ಚುನಾವಣೆ ಕಾರಣವೋ, ಆರ್‌ಬಿಐ ನಡೆ ಕಾರಣವೋ
ತಿಳಿಯದೆ ಜನ ಕಂಗಾಲಾಗಿದ್ದಾರೆ. ಆಪತ್ತಿಗಾಗದ ಹಣ ಎಷ್ಟಿದ್ದರೇನು ಎಂದು ಆಕ್ರೋಶ ವ್ಯಕ್ತಪಡಿಸುವ ಜನ, ನಮ್ಮ
ಹಣ ನಾವು ಪಡೆಯಲು ಇಷ್ಟೊಂದು ಕಷ್ಟವೇ ಎಂದು ಗೊಣಗುತ್ತಿದ್ದಾರೆ.

ನೋಟು ಅಮಾನ್ಯದ ಬಳಿಕ ನಗದು ವಹಿವಾಟು ಕ್ರಮೇಣ ಕ್ಷೀಣಿಸುತ್ತಿದೆ. 100 ಕೋಟಿ ಕಳುಹಿಸುತ್ತಿದ್ದ ಆರ್‌ಬಿಐ 30ರಿಂದ 40 ಕೋಟಿ ಕಳುಹಿಸುತ್ತಿಲ್ಲ. ಅಲ್ಲದೇ, ನಮ್ಮ ಮನವಿಗೆ ಸದ್ಯಕ್ಕೆ ಹಣ ಕಳುಹಿಸಲು ಆಗದು ಎಂದು ಪ್ರತಿಕ್ರಿಯೆ ಬರುತ್ತಿವೆ. ಹೀಗಾಗಿ ಗ್ರಾಹಕರಿಗೆ ಎಷ್ಟು ಸಾಧ್ಯವೋ ಅಷ್ಟು ಸೇವೆ ನೀಡುತ್ತಿದ್ದೇವೆ.  ವಿ.ಎಸ್‌.ಬಾಲಿ, ಎಸ್‌ಬಿಎಚ್‌ ವ್ಯವಸ್ಥಾಪಕ ಕಳೆದ ಎಂಟು ಹತ್ತು ದಿನದಿಂದ ಗ್ರಾಹಕರಿಂದ ಬ್ಯಾಂಕ್‌ಗಳಿಗೆ ಸಂದಾಯವಾಗುವ ಹಣ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದರಿಂದ ಹಣದ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ವಸ್ತುಸ್ಥಿತಿ ಬಗ್ಗೆ ಆರ್‌ಬಿಐ ಸಂಪರ್ಕಾಧಿಕಾರಿಗಳಿಗೆ ವಿವರಿಸಲಾಗಿದೆ. ಆದರೆ, ಅವರು ಕೂಡ ಹಣ ಬಿಡುಗಡೆ ಮಾಡುತ್ತಿಲ್ಲ. ಇಲ್ಲಿ ಮಾತ್ರವಲ್ಲದೇ, ರಾಜ್ಯದ ಬೇರೆ ಕಡೆಯೂ ಇದೇ ಸನ್ನಿವೇಶ ಇದೆ ಎಂದು ತಿಳಿದು ಬಂದಿದೆ. ಇದರಿಂದ ಎಟಿಎಂಗಳು ಸೇವೆಯಿಂದ ದೂರು ಉಳಿಯುತ್ತಿವೆ.
 ಮುರಳಿ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ 

ಸಿದ್ಧಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ

Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.