ಸಾಮಾನ್ಯ ಸಭೆಗೆ ಬಿಸಿ ತಟ್ಟದ ಬಿಜೆಪಿ ಬಹಿಷ್ಕಾರ

ದುರಸ್ತಿ ಜತೆಗೆ ಕೆಲವೊಂದು ಹೊಸ ವಾಹನಗಳನ್ನು ಮಂಜೂರು ಮಾಡಲಾಗಿದೆ.

Team Udayavani, Oct 1, 2021, 4:45 PM IST

ಸಾಮಾನ್ಯ ಸಭೆಗೆ ಬಿಸಿ ತಟ್ಟದ ಬಿಜೆಪಿ ಬಹಿಷ್ಕಾರ

ರಾಯಚೂರು: ಅವಿಶ್ವಾಸದ ಆತಂಕ ಎದುರಿಸುತ್ತಿದ್ದ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್‌ ಅಗತ್ಯ ಕೋರಂನೊಂದಿಗೆ ಸಾಮಾನ್ಯ ನಡೆಸುವ ಮೂಲಕ ಬೀಸುವ ದೊಣ್ಣೆಯಿಂದ ಪಾರಾದರು. ಆದರೆ, ಬಿಜೆಪಿ ಸದಸ್ಯರು ಮಾತ್ರ ತಮ್ಮ ನಿಲುವಿಗೆ ಬದ್ಧರಾಗಿ ಸಭೆಯಿಂದ ದೂರ ಉಳಿಯುವ ಮೂಲಕ ತಮ್ಮ ಅಸಹಕಾರ ಮುಂದುವರಿಸಿದರು.

ನಗರಸಭೆ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆ ಕರೆಯಲಾಗಿತ್ತು. ಈಚೆಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಪಕ್ಷಾತೀತವಾಗಿ ಸಭೆ ನಡೆಸಿದ್ದ ಸದಸ್ಯರು, ಈಗ ಯಾವ ನಡೆ ತೋರುವರು ಎಂಬ ಕುತೂಹಲವಿತ್ತು. ಸಭೆಗೂ ಮುನ್ನವೇ ಸಭೆಗೆ ಬೇಕಾದ ಕೋರಂ ಸಿದ್ಧಪಡಿಸಿಕೊಂಡಿದ್ದ ಅಧ್ಯಕ್ಷ, ಸದಸ್ಯರ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದಂತೆ ಕಂಡು ಬಂದಿತು. ಆ ಕಾರಣಕ್ಕೆ ಕಿಂಚಿತ್ತೂ ಅಳುಕಿಲ್ಲದೇ ಸಭೆಗೆ ಆಗಮಿಸಿದ ಅವರು, ಅಗತ್ಯ ಸದಸ್ಯರ ಬೆಂಬಲದೊಂದಿಗೆ ಸಭೆ ಮುಗಿಸಿದರು.

33ನೇ ವಾರ್ಡ್‌ ಸದಸ್ಯ ನರಸರೆಡ್ಡಿ ಸಭೆಯಲ್ಲಿ ವೇದಿಕೆ ಕೆಳಗೆ ಕುಳಿತು ಧರಣಿ ಆರಂಭಿಸಿದರು. ನನ್ನ ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ಮೇಘಾ ರೆಸಿಡೆನ್ಸಿ ನಿಯಮ ಬಾಹಿರವಾಗಿದ್ದು, ಕೂಡಲೇ ಅದರ ವಿರುದ್ಧ ಕ್ರಮ ಜರುಗಿಸಬೇಕು. ಈ ಬಗ್ಗೆ ಪ್ರತಿ ಸಭೆಯಲ್ಲೂ ಹೇಳಿದರೂ ಯಾರು ಸ್ಪಂದಿಸುತ್ತಿಲ್ಲ. ಜನರಿಗೆ ಕುಡಿವ ನೀರಿಲ್ಲದೇ ಎರಡು ಮೂರು ದಿನಕ್ಕೊಮ್ಮೆ ಬಿಡುತ್ತಿದ್ದೇವೆ.

ಆದರೆ, ಮೇಘಾ ರೆಸಿಡೆನ್ಸಿಯವರು ಅನುಮತಿ ಪಡೆಯದೆ ಮುಖ್ಯ ಪೈಪ್‌ಲೈನ್‌ ಮೂಲಕವೇ ನೀರು ಪಡೆಯುತ್ತಿದ್ದಾರೆ. ಪ್ರಶ್ನಿಸಿದರೆ ನನ್ನ ವಿರುದ್ಧವೇ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಆರೋಪಿಸಿ ಧರಣಿ ನಡೆಸಿದರು. ಇದಕ್ಕೆ ಸದಸ್ಯ ಸಾಜಿದ್‌ ಸಮೀರ್‌, ರಮೇಶ ಕೂಡ ಬೆಂಬಲ ನೀಡಿದರು. ಕಾನ್ವೆಂಟ್‌ ಶಾಲೆಗೆ ನಗರಸಭೆ ಸದಸ್ಯರೂ ಎಂಬುದನ್ನು ಲೆಕ್ಕಿಸದೆ ಅಗೌರವ ತೋರುತ್ತಾರೆ. ಸದಸ್ಯರ ಬಗ್ಗೆ ಇಷ್ಟೊಂದು ತಾತ್ಸಾರವಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಮುನಿಸ್ವಾಮಿ, ಮೇಘಾ ರೆಸಿಡೆನ್ಸಿ ವಿಚಾರ ನ್ಯಾಯಾಲಯದಲ್ಲಿದೆ. ಅದಕ್ಕೆ ಬೇಕಾದ ದಾಖಲೆಗಳನ್ನು ನಾವು ಅಲ್ಲಿಗೆ ಸಲ್ಲಿಸುತ್ತೇವೆ ಎಂದು ವಿವರಿಸಿದರು. ಇದಕ್ಕೆ ಒಪ್ಪದ ಸದಸ್ಯ ನರಸರೆಡ್ಡಿ, ನಗರಸಭೆಯಿಂದ ಕೂಡಲೇ ಕ್ರಮ ಜರುಗಿಸಬೇಕು. ರೆಸಿಡೆನ್ಸಿಯವರು ನಕಲಿ ದಾಖಲೆ ಸೃಷ್ಟಿಸಿದ್ದು, ಕೂಡಲೇ ಕ್ರಮ ಜರುಗಿಸಬೇಕು ಎಂದರು.

ಸದಸ್ಯ ಜಯಣ್ಣ ಮಾತನಾಡಿ, ನೀವು ಈ ರೀತಿ ಹಠ ಹಿಡಿಯುವುದು ಸರಿಯಲ್ಲ. ಏನೇ ಸಮಸ್ಯೆಗಳಿದ್ದರೂ ಚರ್ಚೆ ನಡೆಸಿ ತೀರ್ಮಾನಿಸಬೇಕು. ಕೂಡಲೇ ಮೇಘಾ ರೆಸಿಡೆನ್ಸಿ ಹಾಗೂ ಸದಸ್ಯರಿಗೆ ಅಗೌರವ ತೋರಿದ ಕಾನ್ವೆಂಟ್‌ಗೆ ನೋಟಿಸ್‌ ಜಾರಿ ಮಾಡುವಂತೆ ತಾಕೀತು ಮಾಡಿದರು. ಬಸವರಾಜ್‌ ದರೂರು ಮಾತನಾಡಿ,ಸಣ್ಣ ಪುಟ್ಟ ಸಮಸ್ಯೆಗಳನ್ನು ಯಾರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈಚೆಗೆ ಚೈತನ್ಯ ಆಸ್ಪತ್ರೆ ಹತ್ತಿರ ಮುಖ್ಯ ಪೈಪ್‌ಲೈನ್‌ ಒಡೆದು ನಿರಂತರ ಹರಿಯುತ್ತಿದ್ದರೂ ಯಾರು ಕ್ರಮ ಕೈಗೊಂಡಿಲ್ಲ.

ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಕೆಲ ಸದಸ್ಯರು, ನಮ್ಮ ಬಡಾವಣೆಯಲ್ಲಿ ಸ್ವತ್ಛತೆಗೆ ಪೌರ ಕಾರ್ಮಿಕರೇ ಇಲ್ಲದಾಗಿದೆ. ಹೇಳಿ ಹೇಳಿ ಸಾಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಸ ವಿಲೇವಾರಿಗೆ ಹೊಸ ವಾಹನ ಸಿಗಬಹುದು ಎಂದು ಕೊಂಡರೆ ಹಳೇ ವಾಹನಗಳನ್ನೇ ದುರಸ್ತಿ ಮಾಡಿಸಿ ನೀಡುತ್ತಿರುವುದು ಸರಿಯೇ ಎಂದು ಸದಸ್ಯರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ, ಹಳೇ ವಾಹನಗಳ ದುರಸ್ತಿ ಜತೆಗೆ ಕೆಲವೊಂದು ಹೊಸ ವಾಹನಗಳನ್ನು ಮಂಜೂರು ಮಾಡಲಾಗಿದೆ. ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುವುದು ಎಂದು ಸಮಾಧಾನ ವ್ಯಕ್ತಪಡಿಸಿದರು.

ಚೈತನ್ಯ ಎಲೆಕ್ಟ್ರಿಕಲ್‌ಗೆ ಅನುಮೋದನೆ
ಆರೋಪಗಳ ಸುರಿಮಳೆಯನ್ನೆ ಎದುರಿಸಿದ ಚೈತನ್ಯ ಎಲೆಕ್ಟ್ರಿಕಲ್‌ ಕಂಪನಿಗೆ ಟೆಂಡರ್‌ ಅನುಮೋದನೆ ನೀಡುವ ಮೂಲಕ ಅಧ್ಯಕ್ಷ ಹಿಡಿದ ಪಟ್ಟು ಸಾಧಿ ಸಿಕೊಂಡಂತೆ ಕಂಡು ಬಂತು. ಚೈತನ್ಯ ಎಲೆಕ್ಟ್ರಿಕಲ್‌ ಸಂಸ್ಥೆ ಕಾರ್ಯಕ್ಷಮತೆ ಬಗ್ಗೆ ಸಾಕಷ್ಟು ಆರೋಪಗಳಿದ್ದವು. ಉಪಾಧ್ಯಕ್ಷರ ಪತಿ ಕೂಡ ಈ ಬಗ್ಗೆ ಆರೋಪ ಮಾಡಿದ್ದರು. ಆದರೆ, ಅದೆಲ್ಲ ಮೀರಿ ಈಗ ಅದೇ ಕಂಪನಿಗೆ ಅ ಧಿಕೃತ ಹೊಣೆ ನೀಡಲಾಗಿದೆ. ಈ ಬಗ್ಗೆ ಸದಸ್ಯ ನರಸರೆಡ್ಡಿ, ನಮ್ಮ ವಾರ್ಡ್‌ನಲ್ಲಿ ಬೀದಿದೀಪಗಳು
ಮೂರು ದಿನ ಕೂಡ ಬಾಳಿಕೆ ಬರುತ್ತಿಲ್ಲ. ಚೈತನ್ಯ ಎಲೆಕ್ಟ್ರಿಕಲ್‌ ಸಂಸ್ಥೆ ಕಳಪೆ ಗುಣಮಟ್ಟದ ಬಲ್ಬ್ಗಳನ್ನು ನೀಡುತ್ತಿದೆ ಎಂದು ದೂರಿದರು. ಆದರೆ, ನಿಮ್ಮ ಯಾವುದೇ ದೂರುಗಳಿದ್ದರೂ ಪೌರಾಯುಕ್ತರ ಗಮನಕ್ಕೆ ತನ್ನಿ ಎಂದು ಅಧ್ಯಕ್ಷ ಚರ್ಚೆಗೆ ವಿರಾಮ ನೀಡಿದರು.

ಮತ್ತೆ ಏಪಕ್ಷೀಯ ನಿರ್ಧಾರ?
ಪ್ರತಿ ಬಾರಿ ಸಭೆಯಲ್ಲಿ ಎಲ್ಲ ವಿಷಯಗಳಿಗೂ ವಿರೋಧವಿಲ್ಲದೇ ಅನುಮೋದನೆ ಸಿಗುತ್ತಿತ್ತು. ಈ ಬಾರಿ ಅಧ್ಯಕ್ಷರ ವಿರುದ್ಧ ಸದಸ್ಯರು ಸಾಕಷ್ಟು ಅಸಮಾಧಾನಗೊಂಡಿದ್ದರು. ಸಭೆಯಲ್ಲಿ ಅನೇಕ ವಿಚಾರಗಳಿಗೆ ವಿರೋಧ ಬರಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ, ಬಿಜೆಪಿಯವರು ಸಭೆಗೆ ಬರಲಿಲ್ಲ. ಇನ್ನೂ ಕಾಂಗ್ರೆಸ್‌ ಹಾಗೂ ಪಕ್ಷೇತರ ಸದಸ್ಯರು ಮಾತ್ರ ಸಭೆಯಲ್ಲಿದ್ದರು. ಇದರಿಂದ ಅವರು ಕೂಡ ಯಾವ ವಿಷಯಗಳಿಗೂ ಚಕಾರ ಎತ್ತದೆ ಅನುಮೋದನೆ ನೀಡಿದರು.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.