ತಲೆನೋವಾದ ಕಟ್ಟಡ ತ್ಯಾಜ್ಯ ವಿಲೇವಾರಿ
ಎಲ್ಲೆಂದರಲ್ಲಿ ಸುರಿಯಲಾಗುತ್ತಿದೆ ಹಳೆ ಕಟ್ಟಡಗಳ ತ್ಯಾಜ್ಯ | ಜಾಗ ಒದಗಿಸುವಂತೆ ನಗರಸಭೆಯಿಂದ ತಹಶೀಲ್ದಾರರಿಗೆ ಪತ್ರ
Team Udayavani, Jan 17, 2020, 3:45 PM IST
ಚಿತ್ರದುರ್ಗ: ನಗರದ ಹೊರ ವಲಯಗಳಲ್ಲಿ ಹಳೆ ಕಟ್ಟಡಗಳ ತ್ಯಾಜ್ಯವನ್ನು ಸುರಿದಿರುವುದು.
ಚಿತ್ರದುರ್ಗ: ಹಳೇ ಕಟ್ಟಡಗಳ ತ್ಯಾಜ್ಯ ವಿಲೇವಾರಿ ನಗರದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿದೆ. ಡೆಬ್ರಿàಸ್ ವಿಲೇವಾರಿಗೆ ನಗರಸಭೆ ಸೂಕ್ತ ಜಾಗ ತೋರಿಸದ ಹಿನ್ನೆಲೆಯಲ್ಲಿ ಕಟ್ಟಡ ಕೆಡವಿದವರು ತ್ಯಾಜ್ಯ ವಿಲೇವಾರಿಗೆ ಪರದಾಡುವಂತಾಗಿದೆ.
ನಗರದ ಹಳೆಯ ಬಡಾವಣೆಗಳಲ್ಲಿ ಬಹುತೇಕ ಶಿಥಿಲಗೊಂಡ ಮನೆಗಳಿದ್ದು, ಹಂತ ಹಂತವಾಗಿ ಅಂತಹ ಕಟ್ಟಡಗಳನ್ನು ಬೀಳಿಸಿ ಹೊಸ ಮನೆ, ಮಳಿಗೆ ಕಟ್ಟಲು ಜನರು ಮುಂದಾಗುತ್ತಿದ್ದಾರೆ. ಮನೆ ಬೀಳಿಸಿದಾಗ ಸಿಗುವ ತ್ಯಾಜ್ಯವನ್ನು (ಡೆಬ್ರೀಸ್) ಎಲ್ಲಿ ವಿಲೇ ಮಾಡಬೇಕು ಎಂದು ಚಿಂತೆ ಮಾಡುವಂತಾಗಿದೆ. ಬಹುತೇಕರು ಕದ್ದು ಮುಚ್ಚಿ ರಾತ್ರೋ ರಾತ್ರಿ ತಂದು ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ತಂದು ಸುರಿದು ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ಹೊಳಲ್ಕೆರೆ ರಸ್ತೆ, ರಾಷ್ಟ್ರೀಯ ಹೆದ್ದಾರಿ 4 ರ ಸರ್ವೀಸ್ ರಸ್ತೆಗಳು, ಆಕಾಶವಾಣಿ ಹಿಂಭಾಗದ ಸಂಗಮೇಶ್ವರ ಬಡಾವಣೆ, ತಿಮ್ಮಣ್ಣನಾಯಕನ ಕೆರೆ, ದಾರುಕಾ ಬಡಾವಣೆ ಹಿಂಭಾಗ, ಗೋನೂರು ರಸ್ತೆಗಳಲ್ಲಿ ರಾಶಿ ರಾಶಿ ತ್ಯಾಜ್ಯ ಕಾಣಸಿಗುತ್ತಿದೆ.
ಮೂರ್ನಾಲ್ಕು ತಿಂಗಳ ಹಿಂದೆ ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಬ್ರೀಸ್ ಸಮಸ್ಯೆ ಬಗ್ಗೆ ಗಂಭೀರವಾಗಿ ಚರ್ಚೆಯಾಗಿತ್ತು. ಈ ವೇಳೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರು ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ತತ್ಪರಿಣಾಮ ಮರುದಿನ ಕಣ್ಣಿಗೆ ಕಾಣುವ ಎಲ್ಲಾ ಕಡೆಗಳಲ್ಲೂ ತ್ಯಾಜ್ಯವನ್ನು ಎತ್ತಿ ಹಾಕಲಾಗಿತ್ತು. ಕೆಲವೆಡೆ ಜೆಸಿಬಿಯಿಂದ ಹಿಂದಕ್ಕೆ ನೂಕಿ ಕೈತೊಳೆದುಕೊಳ್ಳಲಾಗಿತ್ತು. ಆದರೆ ಈಗ ಸಮಸ್ಯೆ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ. ತಕ್ಷಣ ಇದಕ್ಕೆ ಪರಿಹಾರ ಕಂಡು ಹಿಡಿದು ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಲಾಗಿತ್ತಾದರೂ ಸಮಸ್ಯೆ ಮಾತ್ರ ಹಾಗೆಯೇ ಇದೆ.
ತ್ಯಾಜ್ಯ ವಿಲೇಗೆ ಸ್ಪಷ್ಟ ನೀತಿಯೇ ಇಲ್ಲ: ಬೆಂಗಳೂರು, ಮೈಸೂರು ಸೇರಿದಂತೆ ಬಹುತೇಕ ಮಹಾನಗರ ಪಾಲಿಕೆಗಳಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಗೆ ನೀತಿ ರೂಪಿಸಲಾಗಿದೆ. ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಚಿತ್ರದುರ್ಗ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಗೆ ನಗರ ಸ್ಥಳೀಯ ಸಂಸ್ಥೆಗಳು ಸ್ಪಷ್ಟ ನೀತಿ ರೂಪಿಸಿಲ್ಲ. ಹೀಗಾಗಿ, ಕಟ್ಟಡ ಅವಶೇಷಗಳು ರಸ್ತೆ ಬದಿ, ಪಾಳು ಭೂಮಿ ಹಾಗೂ ಜಲಮೂಲಗಳಾದ ಕೆರೆ, ಬಾವಿಗಳನ್ನು ಸೇರುತ್ತಿವೆ. ರಿಯಲ್ ಎಸ್ಟೇಟ್ ಉದ್ಯಮ ಬೆಳೆದಂತೆಲ್ಲಾ ಹೊಸ ಹೊಸ ಕಟ್ಟಡ ನಿರ್ಮಾಣ ಮಾಡುವ ಉಮೇದಿನಲ್ಲಿ ಹಳೆ ಕಟ್ಟಡಗಳನ್ನು ನೆಲಸಮ ಮಾಡುವುದು ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಸ್ಥಳೀಯ ಸಂಸ್ಥೆಗಳು ಕೂಡಾ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಕಂಡು ಬರುತ್ತಿದೆ.
ನಿರ್ಮಿತಿ ಕೇಂದ್ರದ ಜತೆಗೆ ಎಂಒಯು: ಡೆಬ್ರೀಸ್ನಿಂದ ಇಟ್ಟಿಗೆ ತಯಾರಿಸುವ ಮಾದರಿಗೆ ಚಿತ್ರದುರ್ಗ ನಗರಸಭೆಗೆ ಇತ್ತೀಚೆಗೆ ರಾಜ್ಯ ಸರ್ಕಾರ ಪ್ರಶಸ್ತಿಯನ್ನೂ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ನಗರದ ಹಳೆ ಕಟ್ಟಡಗಳ ತ್ಯಾಜ್ಯವನ್ನು ಒಂದೆಡೆ ತಂದು ಹಾಕುವಂತೆ ಮಾಡಿ ಅದರಿಂದ ಇಟ್ಟಿಗೆ ತಯಾರಿಸುವ ಉದ್ದೇಶಕ್ಕೆ ನಗರಸಭೆ ಈಗಾಗಲೇ ನಿರ್ಮಿತಿ ಕೇಂದ್ರದ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಆದರೆ ಕೆಲಸ ಇನ್ನೂ ಆರಂಭವಾಗಿಲ್ಲ. ಎಲ್ಲವೂ ಕಡತಗಳಲ್ಲೇ ನಡೆಯುತ್ತಿದೆ.
ತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತ ಸ್ಥಳಾವಕಾಶ ನೀಡುವಂತೆ ನಗರಸಭೆಯಿಂದ ತಹಶೀಲ್ದಾರರಿಗೆ ಪತ್ರಬರೆಯಲಾಗಿತ್ತು. ಸೀಬಾರದ ಬಳಿ ನಿಷೇಧಿ ತ ಕ್ವಾರಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ಪತ್ರ ಚಿತ್ರದುರ್ಗ ತಹಶೀಲ್ದಾರ್ ಕಚೇರಿಯಲ್ಲಿ ಬಾಕಿ ಇರುವುದು ವಿಪರ್ಯಾಸ.
ಡೆಬ್ರೀಸ್ ವಿಲೇವಾರಿಗಾಗಿ ಕ್ವಾರಿಯೊಂದನ್ನು ನೀಡುವಂತೆ ತಹಶೀಲ್ದಾರ್ಗೆ ಪತ್ರ ಬರೆದಿದ್ದೇವೆ. 15 ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ಸ್ಥಳಾವಕಾಶ ಸಿಗುವ ಸಾಧ್ಯತೆ ಇದೆ. ಜತೆಗೆ ಇಟ್ಟಿಗೆ ತಯಾರಿಗೆ ನಿರ್ಮಿತಿ ಕೇಂದ್ರದ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಸದ್ಯಕ್ಕೆ ತ್ಯಾಜ್ಯವನ್ನು ನಗರದಿಂದ 8 ಕಿಮೀ ದೂರದಲ್ಲಿ ವಿಲೇ ಮಾಡುವಂತೆ ಸೂಚನೆ ನೀಡುತ್ತಿದ್ದೇವೆ.
.ಜೆ.ಟಿ. ಹನುಮಂತರಾಜು,
ಚಿತ್ರದುರ್ಗ ನಗರಸಭೆ ಪೌರಾಯುಕ್ತರು
ತಿಪ್ಪೇಸ್ವಾಮಿ ನಾಕೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು
ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!