ಬೈಕ್ ಗಳ ಭೀಕರ ಅಪಘಾತ: ಮಹಿಳೆ ಸೇರಿ ಮೂವರು ಸ್ಥಳದಲ್ಲೇ ಸಾವು
Team Udayavani, Jun 2, 2022, 1:28 PM IST
ಸಿರವಾರ: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಮಹಿಳೆ ಸೇರಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ತಾಲೂಕಿನ ತಿಪ್ಪಲದಿನ್ನಿ ಕ್ರಾಸ್ ಬಳಿ ಜರುಗಿದೆ.
ರಾಯಚೂರಿಗೆ ತೆರಳುತ್ತಿದ್ದ ಒಂದು ಬೈಕ್ ಹಾಗೂ ರಾಯಚೂರಿನಿಂದ ಹಟ್ಟಿಗೆ ತೆರಳುತ್ತಿದ್ದ ಮತ್ತೊಂದು ಬೈಕ್ ನಡುವೆ ಢಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಇನ್ನೋರ್ವ ಹುಡುಗನಿಗೆ ಗಂಭೀರ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಮೃತರನ್ನು ವಿರುಪಾಕ್ಷಿ, ಅಕ್ಕಮಹಾದೇವಿ, ವೆಂಕೋಬಾ ಸಾಗರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಉಪ್ಪಿನಂಗಡಿ ಹಿಜಾಬ್ ವಿವಾದ: ಮಾಧ್ಯಮ ಪ್ರತಿನಿಧಿಗಳ ಮೇಲೆ ವಿದ್ಯಾರ್ಥಿಗಳ ಗೂಂಡಾಂಗಿರಿ
ಸ್ಥಳಕ್ಕೆ ಪಿಎಸ್ಐ ಗೀತಾಂಜಲಿ ಶಿಂಧೆ ಭೇಟಿ ನೀಡಿದ್ದಾರೆ.