ರಾಹುಲ್ ಯಾತ್ರೆಗೆ ಬಂದ ನಟಿ ರಮ್ಯಾಗೆ ಸಭೆಗೆ ಸಿಗಲಿಲ್ಲ ಪ್ರವೇಶ!
Team Udayavani, Oct 24, 2022, 7:05 AM IST
ರಾಯಚೂರು: ಭಾರತ್ ಜೋಡೋ ಯಾತ್ರೆಯಲ್ಲಿ ದಿಢೀರ್ ಪ್ರತ್ಯಕ್ಷವಾಗುವ ಮೂಲಕ ಅಚ್ಚರಿ ಮೂಡಿಸಿದ್ದ ನಟಿ ರಮ್ಯಾ ಅವರು ಬಂದ ವೇಗದಲ್ಲೇ ಮರಳಿದ್ದು, ಇದು ಸಾಕಷ್ಟು ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ. ಪಕ್ಷದ ನಾಯಕಿ ಎನ್ನುವ ಕಾರಣಕ್ಕೆ ಸ್ವ ಪ್ರೇರಣೆಯಿಂದ ಯಾತ್ರೆಯಲ್ಲಿ ಭಾಗಿ ಯಾದರೂ ಹೆಚ್ಚು ಹೊತ್ತು ಉಳಿಯದೆ ತರಾತುರಿಯಲ್ಲೇ ಮರಳಿದ್ದು ಯಾಕೆ ಎನ್ನುವ ಪ್ರಶ್ನೆಯೂ ಮೂಡಿದೆ.
ವಾಲ್ಕಟ್ ಮೈದಾನದಲ್ಲಿ ಹಾಕಿದ್ದ ಬೃಹತ್ ವೇದಿಕೆಯಲ್ಲಿ ನಡೆದ ಸಭೆ ಯಲ್ಲಿ ರಮ್ಯಾಗೆ ಪ್ರವೇಶ ನಿರಾ ಕರಿಸಲಾಗಿದೆ. ವೇದಿಕೆ ಗಣ್ಯರ ಪಟ್ಟಿಯಲ್ಲಿ ರಮ್ಯಾ ಹೆಸರು ಇಲ್ಲದ ಕಾರಣಕ್ಕೆ ಭದ್ರತಾ ಪಡೆ ಅವರನ್ನು ತಡೆದಿದೆ. ಆದರೆ ರಾಹುಲ್ ಅಥವಾ ರಾಜ್ಯ ನಾಯಕರಾಗಲಿ ಅವರನ್ನು ವೇದಿಕೆಗೆ ಕರೆಸಲು ಮನಸ್ಸು ಮಾಡಿಲ್ಲ. ಸ್ಥಳೀಯ ನಾಯಕರು ಶ್ರಮಿಸಿದರೂ ಫಲಪ್ರದವಾಗಿಲ್ಲ. ಪರಿಣಾಮ ರಮ್ಯಾ ಕೋಪಗೊಂಡು ಮರಳಿದ್ದಾರೆ ಎನ್ನಲಾಗುತ್ತಿದೆ.
ಚರ್ಚೆಗೀಡಾದ ರಮ್ಯಾ
ಯಾತ್ರೆಯಲ್ಲಿ ದಿಢೀರ್ ಆಗಿ ರಮ್ಯಾ ಕಾಣಿಸಿಕೊಂಡಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಸುಮಾರು 500 ಕಿ.ಮೀ. ಯಾತ್ರೆ ಸಾಗಿದರೂ ಎಲ್ಲಿಯೂ ಕಂಡು ಬರದಿದ್ದ ಅವರು ಕೊನೆ ಕ್ಷಣದಲ್ಲಿ ರಾಯಚೂರಿನಲ್ಲಿ ಪಾಲ್ಗೊಂಡದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ. ಮಂಡ್ಯ ಸಂಸತ್ ಕ್ಷೇತ್ರದಿಂದ ಅಥವಾ ರಾಯಚೂರು ನಗರ ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶದಿಂದ ಅವರು ಯಾತ್ರೆಯಲ್ಲಿ ಭಾಗಿಯಾಗಿರಬಹುದು ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ