ಬೆಂಬಿಡದ ಮಳೆ; ನಿತ್ಯ ಜನತೆಗೆ ರಗಳೆ
Team Udayavani, Oct 14, 2017, 5:03 PM IST
ಮೈಸೂರು: ನಗರದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಪಡುವಾರಹಳ್ಳಿ ಸೇರಿದಂತೆ ತಗ್ಗುಪ್ರದೇಶದ ಅನೇಕ ಬಡಾವಣೆಗಳ ಮನೆಗಳಿಗೆ ಮಳೆ ನೀರು ನುಗ್ಗಿ ರಾತ್ರಿಯಿಡೀ ಇಲ್ಲಿನ ನಿವಾಸಿಗಳು ಜಾಗರಣೆ ಮಾಡುವಂತಾಯಿತು.
ಇತ್ತ ದಸರಾ ವಸ್ತುಪ್ರದರ್ಶನ ಬಳಿಯ ದೊಡ್ಡ ಮೋರಿ ಮಳೆ ನೀರಿನಿಂದ ತುಂಬಿ ಹರಿದ ಪರಿಣಾಮ ವಸ್ತುಪ್ರದರ್ಶನ ಪ್ರಾಧಿಕಾರದ ಅಂಗಳದಲ್ಲೂ ಮಂಡಿಯುದ್ದ ನೀರು ನಿಂತು ಮಳಿಗೆ ಪಡೆದಿರುವ ವ್ಯಾಪಾರಸ್ಥರು ಪರಿತಪಿಸುವಂತಾಯಿತು. ವಸ್ತುಪ್ರದರ್ಶನ ಆವರಣದ ದೊಡ್ಡ ಮೋರಿ ತಡೆಗೋಡೆ ಕುಸಿದಿದ್ದರೂ ಅಧಿಕಾರಿಗಳು ದುರಸ್ತಿ ಮಾಡಿಸಿಲ್ಲ. ಬದಲಿಗೆ ಗೋಡೆ ಕುಸಿದು ಬಿದ್ದಿರುವ ಜಾಗಕ್ಕೆ ಮರಳು ಮೂಟೆ ಪೇರಿಸಿದ್ದರಿಂದ ಭಾರೀ ಮಳೆಯಿಂದ ನುಗ್ಗಿದ ಮರಳು ಮೂಟೆಗಳನ್ನು ನೀರು ಹೊತ್ತು ತಂದು ಅಂಗಳಕ್ಕೆ ಭಾರೀ ನೀರು ನುಗ್ಗಿದೆ.
ಸ್ಥಳಕ್ಕೆ ಧಾವಿಸಿದ ಶಾಸಕ ವಾಸು ನೆರವಿಗೆ ನಿಂತರು. ಅಭಯ ತಂಡದ ಸಿಬ್ಬಂದಿ ಮನೆಗಳಿಗೆ ನುಗ್ಗಿದ್ದ ನೀರನ್ನು ಕುಕ್ಕರಹಳ್ಳಿ ಕೆರೆಗೆ ಹರಿಸಲು ಹುಣಸೂರು ರಸ್ತೆ ಅಗೆದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿದ್ದ ಕಿರು ಸೇತುವೆ ಒಡೆದ ಪರಿಣಾಮ ಹುಣಸೂರು ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಹುಣಸೂರು ರಸ್ತೆ ಹಾಗೂ ವಾಲ್ಮೀಕಿ ರಸ್ತೆಗೆ ಹೊಂದಿಕೊಂಡಂತೆ ಇದ್ದ ನಿವೇಶನದಲ್ಲಿ ಮಹಾರಾಣಿ ಕಾಲೇಜಿನ ನೂತನ ಕಟ್ಟಡ ನಿರ್ಮಿಸುತ್ತಿದ್ದು, ಇದಕ್ಕಾಗಿ ಕುಕ್ಕರಹಳ್ಳಿ ಕೆರೆಗೆ ನೀರು ಹರಿಯಲು ಇದ್ದ ದೊಡ್ಡ ಮೋರಿಯನ್ನು ಮುಚ್ಚಲಾಗಿದೆ. ಇದೇ ಹುಣಸೂರು ರಸ್ತೆ ಬಂದ್ ಆಗಲು ಕಾರಣವಾಗಿದೆ.
ಜತೆಗೆ ಶ್ರೀರಾಂಪುರ 2ನೇ ಹಂತ, ಕುವೆಂಪುನಗರ ವಾಟರ್ಟ್ಯಾಂಕ್, ರಾಮಕೃಷ್ಣ ನಗರ ವಾಸು ಬಡಾವಣೆ, ಮಧುವನ ಬಡಾವಣೆ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡುವಂತಾಯಿತು.
ಮೇಯರ್ ಪರಿಶೀಲನೆ: ಭಾರೀ ಮಳೆಯಿಂದ ನಗರದ ಜನ ಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ನಗರ ಪ್ರದಕ್ಷಿಣೆ ನಡೆಸಿದ ಮೇಯರ್ ಎಂ.ಜೆ.ರವಿಕುಮಾರ್, ನಗರದ ಹಾರ್ಡಿಂಜ್ ವೃತ್ತ, ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಒಂಟಿಕೊಪ್ಪಲ್, ಚಂದ್ರಕಲಾ ಆಸ್ಪತ್ರೆ, ಹುಣಸೂರು ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ನ್ಯೂ ಕಾಂತರಾಜೇ ಅರಸ್ ರಸ್ತೆ, ಆರ್ಟಿಒ ವೃತ್ತ, ಗನ್ ಹೌಸ್, ಮೃಗಾಲಯ ಎದುರಿನ ರಸ್ತೆಗಳ ಪರಿಶೀಲನೆ ನಡೆಸಿದರು.
ಇದೇ ವೇಳೆ ರಸ್ತೆಗಳಲ್ಲಿನ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಅಧಿಕಾರಿಗಳಿಗೆ ತಿಳಿಸಿದರು. ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿ ಬಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅನಾಹುತ ಸಂಭವಿಸುವ ಮುನ್ನ ರಸ್ತೆಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು