ವಾರದೊಳಗೆ ಮಾವಿನ ಕೆರೆ ನೀರು ತೆರವಿಗೆ ಡಿಸಿ ಸೂಚನೆ
ಮಾರ್ಚ್ ಅಂತ್ಯಕ್ಕೆ ನೀರು ಸಂಪೂರ್ಣವಾಗಿ ಖಾಲಿಯಾದಲ್ಲಿ ವಿಶಾಲವಾದ ಕೆರೆಯ ಹೂಳನ್ನು ತೆಗೆಯಲು ಸಾಧ್ಯ
Team Udayavani, Mar 25, 2021, 6:46 PM IST
ರಾಯಚೂರು: ನಗರದ ಮಾವಿನ ಕೆರೆಯ ಸರ್ವಾಂಗೀಣ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾಮಗಾರಿ ಕೈಗೊಂಡಿದ್ದು, ಮೊದಲ ಹಂತದಲ್ಲಿ ಕೆರೆ ನೀರು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಸೂಚಿಸಿದರು. ಕೆರೆ ಅಭಿವೃದ್ಧಿ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಈ ಬೇಸಿಗೆಯಲ್ಲಿ ತ್ವರಿತವಾಗಿ ಕೆರೆಯ ನೀರು ಖಾಲಿ ಮಾಡಿದಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ಕೈಗೊಂಡ ಕಾಮಗಾರಿ ಮುಗಿಸಲು ಸಾಧ್ಯ. ಆದ ಕಾರಣ ಮೊದಲು ಕೆರೆಯಲ್ಲಿ ಉಳಿದಿರುವ ನೀರಿನ ಆಳವನ್ನು ಪರಿಶೀಲಿಸಿ, ಅದನ್ನು ಸಂಪೂರ್ಣ ಹೊರಹಾಕಬೇಕು.
ಮಾರ್ಚ್ ಅಂತ್ಯಕ್ಕೆ ನೀರು ಸಂಪೂರ್ಣವಾಗಿ ಖಾಲಿಯಾದಲ್ಲಿ ವಿಶಾಲವಾದ ಕೆರೆಯ ಹೂಳನ್ನು ತೆಗೆಯಲು ಸಾಧ್ಯ. ಹೂಳು ತೆಗೆಯಲು ವ್ಯವಸ್ಥಿತವಾಗಿ ಕಾಮಗಾರಿ ಹಮ್ಮಿಕೊಳ್ಳಬೇಕು. ಅದಕ್ಕೆ ನುರಿತ ಇಂಜಿನಿಯರ್ ನೆರವು ಪಡೆಯಬೇಕು ಎಂದು ನಗರಸಭೆ ಪೌರಾಯುಕ್ತ ವೆಂಕಟೇಶ ಅವರಿಗೆ ಸೂಚಿಸಿದರು.
ಪೌರಾಯುಕ್ತ ವೆಂಕಟೇಶ ಮಾತನಾಡಿ, ಈವರೆಗೂ ಪಂಪ್ ಇಲ್ಲದೆ ನೀರು ತೆರವುಗೊಳಿಸಲಾಗಿತ್ತು. ಆದರೆ, ಇದೀಗ ಮೋಟರ್ ಅಳವಡಿಸಿ ನೀರು ಖಾಲಿ ಮಾಡಲಾಗುವುದು. ಒಂದು ವಾರದೊಳಗೆ ನೀರು ಸಂಪೂರ್ಣ ಖಾಲಿ ಮಾಡುವುದಾಗಿ ತಿಳಿಸಿದರು.
ದೊಡ್ಡ-ದೊಡ್ಡ ಮೋಟರ್ಗಳನ್ನು ಅಳವಡಿಸಿ ನೀರು ತೆರವು ಮಾಡಿ, ಒಣ ಭಾಗವೊಂದನ್ನು ಆಯ್ಕೆ ಮಾಡಿಕೊಂಡು ಹೂಳು ತೆಗೆಯುವ ಕಾಮಗಾರಿ ಆರಂಭಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಅತಿಕ್ರಮಣಕಾರರ ವಿರುದ್ಧ ಎಫ್ಐಆರ್ ದಾಖಲಿಸಿ, ಅವರನ್ನು ಬಂಧಿಸುವಂತೆ ಸೂಚಿಸಿದರು. ಮಾವಿನ ಕೆರೆಗೆ ಈ ಹಿಂದೆ ವಿವಿಧೆಡೆಯಿಂದ ಒಳಚರಂಡಿ ನೀರು ಹರಿದು ಬರುತ್ತಿತ್ತು, ಅದನ್ನು ತಡೆ ಹಿಡಿಯಲಾಗಿದೆ. ಮತ್ತೂಮ್ಮೆ ಅದನ್ನು ನಗರಸಭೆ ಅಧಿಕಾರಿಗಳು ಪರಿಶೀಲಿಸುವಂತೆ ಸೂಚಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣಪ್ಪ, ನಗರಸಭೆ ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು
ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!