ಪ್ರಾದೇಶಿಕ ಪಕ್ಷಗಳಿಂದ ಅಭಿವೃದ್ಧಿ ಸಾಧ್ಯ: ನಾಯಕ
Team Udayavani, Aug 15, 2021, 2:51 PM IST
ರಾಯಚೂರು: ಅಭಿವೃದ್ಧಿ ಕೇವಲ ಪ್ರಾದೇಶಿಕಪಕ್ಷಗಳಿಂದ ಸಾಧ್ಯ ಎಂಬುದಕ್ಕೆ ಅಕ್ಕಪಕ್ಕದರಾಜ್ಯಗಳೇ ನಿದರ್ಶನ. ಈ ನಿಟ್ಟಿನಲ್ಲಿ ಬರುವಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ಬೆಂಬಲಿಸುವಂತೆ ಮಾನ್ವಿ ಶಾಸಕ ರಾಜಾವೆಂಕಟಪ್ಪ ನಾಯಕ ಮನವಿ ಮಾಡಿದರು.
ನಗರದ ಅತ್ತನೂರು ಫಂಕ್ಷನ್ ಹಾಲ್ನಲ್ಲಿಶನಿವಾರ ನಡೆದ ಜಿಪಂ-ತಾಪಂ ಚುನಾವಣೆಗಳಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ದಕ್ಷಿಣ ಭಾರತ ಸೇರಿದಂತೆ ವಿವಿಧ ರಾಜ್ಯಗಳಲ್ಲಿಪ್ರಾದೇಶಿಕ ಪಕ್ಷಗಳ ಆಡಳಿತವಿದೆ. ರಾಜ್ಯದಲ್ಲೂಜೆಡಿಎಸ್ ಅ ಧಿಕಾರಕ್ಕೆ ಬರಬೇಕಿದ್ದು, ಆ ನಿಟ್ಟಿನಲ್ಲಿಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ಬಲಪಡಿಸುವ ನಿಟ್ಟಿನಲ್ಲಿಸಾಕಷ್ಟು ಒತ್ತು ನೀಡಲಾಗಿದೆ. ರಾಷ್ಟ್ರೀಯಪಕ್ಷಗಳಿಗೆ ಸಮನಾಗಿ ನಮ್ಮ ಶಕ್ತಿ ಪ್ರದರ್ಶನಮಾಡಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿಸಾಬೀತಾಗಿದೆ. ಕಾರ್ಯಕರ್ತರು ಹೆಚ್ಚಿನಮಟ್ಟದಲ್ಲಿ ಶ್ರಮಿಸಿದರೆ ಜಿಪಂ-ತಾಪಂಚುನಾವಣೆಗಳಲ್ಲೂ ನಾವು ಹೆಚ್ಚು ಸ್ಥಾನಗೆಲ್ಲಬಹುದು ಎಂದರು.ದೇವದುರ್ಗದ ಮುಖಂಡೆ ಕರೆಮ್ಮ ನಾಯಕಮಾತನಾಡಿ, ಈ ಸ್ಥಳೀಯ ಸಂಸ್ಥೆಗಳ ಚುನಾವಣೆಫಲಿತಾಂಶ ಬರುವ ವಿಧಾನಸಭೆ ಚುನಾವಣೆಗೆದಿಕ್ಸೂಚಿಯಾಗಬೇಕು.
ಸಾಕಷ್ಟು ಜನ ಪಕ್ಷತೊರೆದಿದ್ದು, ಅವರಿಗೆ ಈ ಚುನಾವಣೆಯಲ್ಲಿಕಾರ್ಯಕರ್ತರು ತಕ್ಕ ಪಾಠ ಕಲಿಸಬೇಕು.ಕಾಂಗ್ರೆಸ್, ಬಿಜೆಪಿ ಆಡಳಿತ ನೋಡಿ ಜನಬೇಸತ್ತಿದ್ದಾರೆ. ಜನ ಕಾಂಗ್ರೆಸ್ ನೋಡಿಬಿಜೆಪಿಗೆ, ಬಿಜೆಪಿ ನೋಡಿ ಕಾಂಗ್ರೆಸ್ಗೆ ಮತಹಾಕುತ್ತಾರೆಂಬ ಭ್ರಮೆಯಲ್ಲಿದ್ದಾರೆ. ಆದರೆ, ಈಬಾರಿ ಜೆಡಿಎಸ್ಗೆ ಹೆಚ್ಚಿನ ಮತ ಪಡೆಯುವಮೂಲಕ ಆ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕುಎಂದರು.
ಮುಖಂಡರಾದ ರವಿ ಪಾಟೀಲ್, ಜಿಲ್ಲಾಧ್ಯಕ್ಷಎಂ. ವಿರೂಪಾಕ್ಷಿ, ಸಿದ್ಧು ಬಂಡಿ, ಮಹಾಂತೇಶಪಾಟೀಲ್ ಅತ್ತನೂರು ಮಾತನಾಡಿದರು.ಈ ವೇಳೆ ಕಾರ್ಯಾಧ್ಯಕ್ಷ ಎನ್. ಶಿವಶಂಕರ್,ನಗರಾಧ್ಯಕ್ಷ ಬಿ.ತಿಮ್ಮಾರೆಡ್ಡಿ, ಲಕೀÒ$¾ಪತಿಗಾಣಧಾಳ, ಪಿ. ಯಲ್ಲಪ್ಪ, ಪವನಕುಮಾರ್,ಬುಡ್ಡನಗೌಡ, ನಿಜಾಮುದ್ದೀನ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು
ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!
MUST WATCH
ಹೊಸ ಸೇರ್ಪಡೆ
Shobha, Bharathi Shetty ಹೊರತು ಬಿಎಸ್ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
High Court ಎಚ್ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆ
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್ಗೆ ಹಲ್ಲೆ