ಶುಲ್ಕ ಕಟ್ಟಿದರೂ ಇಲ್ಲರೀ ತ್ಯಾಜ್ಯ ವಿಲೇವಾರಿ


Team Udayavani, Apr 27, 2022, 1:21 PM IST

12waste

ರಾಯಚೂರು: ಕೆಲಸಕ್ಕೆ ಕರಿಬೇಡಿ ಊಟಕ್ಕೆ ಮರಿಬೇಡಿ ಎನ್ನುವಂತಾಗಿದೆ ರಾಯಚೂರು ನಗರಸಭೆ ವರಸೆ.

ನಗರದ ಹೊರವಲಯದ ಸಾಕಷ್ಟು ಬಡಾವಣೆಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡದಿದ್ದರೂ ಪ್ರತಿ ವರ್ಷ ಶುಲ್ಕ ಮಾತ್ರ ಪಾವತಿಸಬೇಕಿದೆ. ಇಷ್ಟು ದಿನ ಆಸ್ತಿ ಕರದ ಜತೆಗೆ ಈ ಶುಲ್ಕ ಪಾವತಿಸುತ್ತಿದ್ದ ಕಾರಣ ಜನರಿಗೆ ಅದು ತಿಳಿಯುತ್ತಿರಲಿಲ್ಲ. ಆದರೆ, ಈಗ ಘನತ್ಯಾಜ್ಯ ವಿಲೇವಾರಿ ಶುಲ್ಕವೂ ಪ್ರತ್ಯೇಕವಾಗಿ ಪಾವತಿಸಬೇಕಿದೆ. ಅದಕ್ಕೆ ಪ್ರತ್ಯೇಕ ಚಲನ್‌ ಪಡೆದು ಭರ್ತಿ ಮಾಡಬೇಕಿದೆ.

ತಿಂಗಳಿಗೆ 10 ರೂ.ನಂತೆ ವರ್ಷಕ್ಕೆ 120 ರೂ. ಪಾವತಿಸಬೇಕಿದ್ದು, ಸ್ಥಳದ ಅಳತೆ ಆಧರಿಸಿ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಉದಾಹರಣೆಗೆ 30×40 ಅಳತೆಯ ಸ್ಥಳವಿದ್ದರೆ ಆಸ್ತಿ ತೆರಿಗೆ ಜತೆಗೆ ಘನತ್ಯಾಜ್ಯ ವಿಲೇವಾರಿ ಶುಲ್ಕ 120 ರೂ. ಪಾವತಿಸಬೇಕು. ನಿವೇಶನ ಅಳತೆ 40×60 ಇದ್ದಲ್ಲಿ 180 ರೂ. ವಾಣಿಜ್ಯ ವಕಯಗಳಾದರೆ ಈ ಶುಲ್ಕ ಇನ್ನೂ ಹೆಚ್ಚಾಗುತ್ತದೆ. ಇಷ್ಟು ದಿನ ಆಸ್ತಿ ತೆರಿಗೆ ಪಾವತಿಸುತ್ತಿದ್ದ ಜನರಿಗೆ ಈ ಬಗ್ಗೆ ಗೊತ್ತಿರಲಿಲ್ಲ. ಈಚೆಗೆ ನಗರಸಭೆ ಶೇ.3ರಷ್ಟು ತೆರಿಗೆ ಹೆಚ್ಚಳ ಮಾಡಿದೆ.

ಈ ತಿಂಗಳು ಕೊನೆವರೆಗೆ ಶೇ.5ರಷ್ಟು ರಿಯಾಯಿತಿ ಇರುವ ಕಾರಣ ಜನ ಹೆಚ್ಚಾಗಿ ತೆರಿಗೆ ಪಾವತಿಗೆ ಬರುತ್ತಿದ್ದು, ಈಗ ಜನರಿಗೆ ಬಿಸಿ ಮುಟ್ಟುತ್ತಿದೆ. ಆದರೆ, ನಮ್ಮ ಬಡಾವಣೆಯಲ್ಲಿ ತ್ಯಾಜ್ಯ ವಿಲೇವಾರಿಗೆ ವಾಹನಗಳೇ ಬರುವುದಿಲ್ಲ. ತಿಂಗಳುಗಳು ಕಳೆದೂ ಕಸ ತೆರವು ಮಾಡುವುದಿಲ್ಲ. ಸಂಬಂಧಿಸಿದ ವಾರ್ಡ್‌ ಸದಸ್ಯರಿಗೆ, ಅಧಿಕಾರಿಗಳಿಗೆ ತಿಳಿಸಿದರೂ ಕೇಳ್ಳೋರಿಲ್ಲ. ಇನ್ನೂ ಕಸ ವಿಲೇವಾರಿ ವಾಹನಗಳು ನಗರದ ಕೆಲ ಬಡಾವಣೆಗಳಲ್ಲಿ ಮಾತ್ರ ಓಡಾಡುತ್ತಿದ್ದು, ಹೊರವಲಯದ ಬಡಾವಣೆಗಳತ್ತ ಮುಖ ಮಾಡುವುದಿಲ್ಲ. ಇನ್ನೂ ಪೌರ ಕಾರ್ಮಿಕರು ಎಲ್ಲಿರುತ್ತಾರೋ, ಯಾವಾಗ ಕಸ ಗುಡಿಸುತ್ತಾರೋ ತಿಳಿಯುವುದಿಲ್ಲ.

ಕಂಡಕಂಡಲ್ಲಿ ಕಸ ತುಂಬಿರುತ್ತದೆ. ಚರಂಡಿಗಳಿಂದ ಕಸ ಹೊರಗೆ ತೆಗೆದರೂ ಅದನ್ನು ಗಾಡಿಗಳಿಗೆ ತುಂಬಿಕೊಂಡು ಹೋಗಲು ವಾರಗಟ್ಟಲೇ ಕಾಲಕ್ಷೇಪ ಮಾಡುತ್ತಾರೆ. ಸುತ್ತಲಿನ ನಿವಾಸಿಗಳು ದುರ್ನಾತದಲ್ಲೇ ಕಾಲ ಕಳೆಯುವಂತಾಗುತ್ತದೆ. ಆದರೆ, ನಗರಸಭೆ ಸೌಲಭ್ಯ ಸರಿಯಾಗಿ ಕಲ್ಪಿಸದಿದ್ದರೂ ಶುಲ್ಕ ಮಾತ್ರ ಸರಿಯಾಗಿ ಕಟ್ಟಿಸಿಕೊಳ್ಳುತ್ತದೆ ಎಂದು ದೂರುತ್ತಾರೆ ಸಾರ್ವಜನಿಕರು.

ಘನತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಶುಲ್ಕ ಪಡೆಯುತ್ತಿಲ್ಲ. ಇಷ್ಟು ದಿನ ಆಸ್ತಿ ತೆರಿಗೆ ಜತೆಗೆ ಪಡೆಯಲಾಗುತ್ತಿತ್ತು. ಈಗ ಪ್ರತ್ಯೇಕ ಚಲನ್‌ ನೀಡಲಾಗುತ್ತಿದೆ. ಸಮರ್ಪಕ ತ್ಯಾಜ್ಯ ವಿಲೇವಾರಿ ದೃಷ್ಟಿಯಿಂದಲೇ 29 ವಾಹನಗಳನ್ನು ಖರೀದಿಸಿದ್ದು, ಶೀಘ್ರದಲ್ಲೇ ಸೇವೆ ಲಭ್ಯವಾಗಲಿದೆ. -ಕೆ.ಮುನಿಸ್ವಾಮಿ, ನಗರಸಭೆ ಪೌರಾಯುಕ್ತ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewq

BJP ಟಿಕೆಟ್ ಕೊಡದಿದ್ದರೆ ನನ್ನ ದಾರಿ ನೋಡಿಕೊಳ್ಳುವೆ: ಬಿ.ವಿ.ನಾಯಕ ಆಕ್ರೋಶ

1-wqewqe

BJP; ರಾಯಚೂರಿನಲ್ಲೂ ‘ಗೋ ಬ್ಯಾಕ್ ಅಮರೇಶ್ವರ ನಾಯಕ’ ಕೂಗು!

SSLC ಕನ್ನಡ ಪ್ರಶ್ನೆಪತ್ರಿಕೆ ಜಾಲತಾಣದಲ್ಲಿ ಸೋರಿಕೆ?

SSLC ಕನ್ನಡ ಪ್ರಶ್ನೆಪತ್ರಿಕೆ ಜಾಲತಾಣದಲ್ಲಿ ಸೋರಿಕೆ?

1-sadasdas

Raichur: ಬಾಲಕಿ ಮೇಲೆ ಹಂದಿ ಮಾರಣಾಂತಿಕ ದಾಳಿ

Raichur; ಸೋನು ಗೌಡ ಕಾರಿಗೆ ಮುತ್ತಿಗೆ ಯತ್ನ

Raichur; ಸೋನು ಗೌಡ ಕಾರಿಗೆ ಮುತ್ತಿಗೆ ಯತ್ನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.