ಭತ್ತ ಖರೀದಿ ಹಣ ನೀಡದೆ ವಂಚನೆ: ರೈತರ ದೂರು
Team Udayavani, Jun 22, 2022, 6:01 PM IST
ಕವಿತಾಳ: ರೈತರಿಂದ ಭತ್ತ ಖರೀದಿಸಿದ ವ್ಯಾಪಾರಿ ಹಣ ನೀಡದೆ ರೈತರಿಗೆ ಕೋಟ್ಯಂತರ ಹಣ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಮಸ್ಕಿ ತಾಲೂಕಿನ ಹಿರೇದಿನ್ನಿ ಗ್ರಾಮದ ವ್ಯಾಪಾರಿ ಹಣ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ನೂರಾರು ರೈತರು ಆತನಿಂದ ಹಣ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಮಸ್ಕಿ ತಾಲೂಕಿನ ಇರೇದಿನ್ನಿ, ಚಿಕ್ಕದಿನ್ನಿ, ಮಲ್ಲದಗುಡ್ಡ, ಸುಂಕನೂರು, ಎಲೆಕೂಡ್ಲಿಗಿ, ಮತ್ತು ಲಿಂಗಸುಗೂರು ತಾಲೂಕಿನ ಕೆಲವು ಹಳ್ಳಿಗಳ ರೈತರಿಂದ ಭತ್ತ ಖರೀದಿಸಿದ ಚಿದಾನಂದ ರೈತರಿಗೆ ಹಣ ನೀಡದೆ ವಂಚಿಸಿದ್ದಾನೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ ರೈತರಾದ ಶರಣಯ್ಯಸ್ವಾಮಿ, ತಿಪ್ಪಾರಡ್ಡಿ, ವೀರನಗೌಡ, ತಿಮ್ಮಣ್ಣ, ವೆಂಕಟೇಶ ಚೆಲುವಾದಿ ಇತರರು ವ್ಯಾಪಾರಿ ವಂಚನೆ ಕುರಿತು ಹೇಳಿದರು. ವೆಂಕಟೇಶ ಚೆಲುವಾದಿ ಮತ್ತು ಅವರ ಮೂವರು ಸಹೋದರರ 16 ಲಕ್ಷ, ಸುಂಕನೂರು ಗ್ರಾಮದ ತಿಪ್ಪಾರಡ್ಡಿ ಅವರ 4 ಲಕ್ಷ, ವೀರನಗೌಡ ಅವರ 9 ಲಕ್ಷ ಸೇರಿದಂತೆ ನೂರಾರು ರೈತರ ಕೋಟ್ಯಂತರ ಹಣ ನೀಡುತ್ತಿಲ್ಲ. ಹೀಗಾಗಿ ಹಣ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡುವುದಾಗಿ ರೈತರು ಹೇಳಿದರು. ಆರೋಪಿ ಕಾಣೆಯಾದ ಬಗ್ಗೆ ಕುಟುಂಬದವರು ದೂರು ದಾಖಲಿಸಿದ್ದಾಗಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು