ಗರಿಷ್ಠ ಪರಿಹಾರಕ್ಕೆ ರೈತರ ಆಗ್ರಹ
Team Udayavani, Jan 2, 2018, 2:56 PM IST
ರಾಯಚೂರು: ನಾರಾಯಣಪುರ ಬಲದಂಡೆ ವಿಸ್ತರಣೆ ಕಾಲುವೆಗಾಗಿ ಭೂ ಸ್ವಾಧಿಧೀನಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ
ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ನೇತೃತ್ವದಲ್ಲಿ ಸೋಮವಾರ ಸಭೆ ನಡೆಸಿದ್ದು, ರೈತರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.
ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಗೆ ಭೂ ಸಂತ್ರಸ್ತ ರೈತರೆಲ್ಲ ಆಗಮಿಸಿದ್ದರು. ವಿಸ್ತರಣೆ ಕಾಲುವೆ ವ್ಯಾಪ್ತಿಗೆ ಕಲ್ಮಲಾ, ಅಸ್ಕಿಹಾಳ, ಯರಮರಸ್ ಕ್ಯಾಂಪ್, ರಾಂಪುರ, ಚಂದ್ರಬಂಡಾ ಸೇರಿ ವಿವಿಧ ಗ್ರಾಮಗಳು ಸೇರಲಿದ್ದು, ಎಲ್ಲ ಕಡೆಯಿಂದಲೂ ರೈತರು ಆಗಮಿಸಿದ್ದರು. ಎಡಿಸಿ ಗೋವಿಂದರೆಡ್ಡಿ ಮಾತನಾಡಿ, ಈಗಾಗಲೇ ಭೂಮಿ ಸರ್ವೆ ಕಾರ್ಯ ಮುಗಿದಿದ್ದು, ರೈತರಿಗೆ ನೋಟಿಸ್ ವಿತರಣೆ ಮಾಡಲಾಗಿದೆ. ಸರ್ಕಾರ ರೈತರಿಂದ ಅಭಿಪ್ರಾಯ ಪಡೆದು ವರದಿ ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ರೈತರು ಮಾತನಾಡಿ, ಕಾಲುವೆ ವ್ಯಾಪ್ತಿಗೆ ಜಮೀನು ಹಾಗೂ ಕೃಷಿಯೇತರ ಜಮೀನು ಕೂಡ ಒಳಗೊಳ್ಳಲಿದೆ. ಬಯಲು ಪ್ರದೇಶಕ್ಕೆ ಎಕರೆಗೆ 25ರಿಂದ 50 ಲಕ್ಷ ರೂ. ಹಾಗೂ ನೀರಾವರಿ ಪ್ರದೇಶಗಳಿಗೆ 50ರಿಂದ 80 ಲಕ್ಷ ರೂ. ಪರಿಹಾರ ನೀಡಬೇಕು. ಜತೆಗೆ ಉದ್ಯೋಗ ಮೀಸಲಾತಿಯನ್ನು ಶೇ.4ರಿಂದ ಶೇ.10ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ನೀರಾವರಿ ಇಲಾಖೆ ಕಚೇರಿಗೆ ತೆರಳಿದರೆ ರೈತರಿಗೆ ಕಿಂಚಿತ್ತು ಗೌರವ ನೀಡುವುದಿಲ್ಲ. ಹೀಗಾಗಿ ಕಚೇರಿಯನ್ನು ನಗರದ ಆಸುಪಾಸು ಸ್ಥಳಾಂತರಿಸಬೇಕು. ಜಮೀನು ಮಾತ್ರವಲ್ಲದೇ, ನಿವೇಶನಗಳು ಕೂಡ ಸ್ವಾ ಧೀನಕ್ಕೆ ಒಳಪಡುತ್ತಿವೆ. ದರ ನಿಗದಿ ವಿಚಾರದಲ್ಲಿ ಪರಿಶೀಲಿಸಬೇಕು. ಜಿಎಸ್ಟಿ ಜಾರಿಯಾಗುವ ಮುಂಚೆ ಇದ್ದ ದರಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಎಡಿಸಿ ಗೋವಿಂದರೆಡ್ಡಿ ಮಾತನಾಡಿ, ನಿಮ್ಮ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಭೂ ಸ್ವಾಧಿಧೀನಕ್ಕೆ ಜಿಎಸ್ಟಿ ಅನ್ವಯವಾಗುವುದಿಲ್ಲ. ಜಿಲ್ಲೆಯಲ್ಲಿ ಒಟ್ಟು 1500 ಎಕರೆಗೂ ಹೆಚ್ಚು ಭೂಮಿ ಸ್ವಾ ಧೀನಪಡಿಸಿಕೊಳ್ಳಲಾಗುತ್ತಿದೆ. ಸುಮಾರು 900 ರೈತರಿಗೆ ಪರಿಹಾರ ವಿತರಿಸಬೇಕಿದೆ. ಶೀಘ್ರದಲ್ಲೇ ಸಚಿವ ಸಂಪುಟ ಸಭೆ ನಡೆಸಲಾಗುವುದು. ಹೀಗಾಗಿ ಸರ್ಕಾರ ರೈತರಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡುವಂತೆ ಸೂಚಿಸಿದ್ದರಿಂದ ಸಭೆ ನಡೆಸಿದ್ದಾಗಿ ಹೇಳಿದರು. ನಂತರ ಜಿಲ್ಲೆಯ ಕವಿತಾಳ ಮತ್ತು ಲಿಂಗಸುಗೂರು ಭಾಗದಲ್ಲಿ ಸಭೆ ನಡೆಸಿದರು. ಸಹಾಯಕ ಆಯುಕ್ತ ಮಲ್ಲಪ್ಪ ಪೂಜಾರಿ, ನೂರಾರು ರೈತರು ಪಾಲ್ಗೊಂಡಿದ್ದರು.
ಎನ್ಆರ್ಬಿಸಿ ಕಾಲುವೆ ವ್ಯಾಪ್ತಿಗೆ ಜಮೀನು ಹಾಗೂ ಕೃಷಿಯೇತರ ಜಮೀನು ಕೂಡ ಒಳಗೊಳ್ಳಲಿದೆ. ಬಯಲು ಪ್ರದೇಶಕ್ಕೆ ಎಕರೆಗೆ 25ರಿಂದ 50 ಲಕ್ಷ ರೂ. ಹಾಗೂ ನೀರಾವರಿ ಪ್ರದೇಶಗಳಿಗೆ 50ರಿಂದ 80 ಲಕ್ಷ ರೂ. ಪರಿಹಾರ ನೀಡಬೇಕು. ಜತೆಗೆ ಉದ್ಯೋಗ ಮೀಸಲಾತಿಯನ್ನು ಶೇ.4ರಿಂದ ಶೇ.10ಕ್ಕೆ ಹೆಚ್ಚಿಸಬೇಕು
ವಿವಿಧ ಗ್ರಾಮಗಳ ರೈತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ