ಇಂಧನ ದರ ಹೆಚ್ಚಳ ಖಂಡಿಸಿ ಕರವೇ ಕಾರ್ಯಕರ್ತರ ನಿರಶನ
Team Udayavani, Feb 6, 2021, 3:25 PM IST
ಲಿಂಗಸುಗೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಳ ಖಂಡಿಸಿ ಕರವೇ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ದಿನದಿಂದ ದಿನಕ್ಕೆ ಜನಸಾಮಾನ್ಯರ ದಿನಬಳಕೆ ವಸ್ತುಗಳ ಗಗನಕ್ಕೇರುತ್ತಲೇ ಇವೆ. ಅವುಗಳಲ್ಲಿ ಜೀವನಾಶ್ಯಕ ಎನಿಸುವಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಗಳು ಈ ಭಾರಿ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಏರಿಕೆ ಮಾಡಿದೆ.
ಇದರಿಂದ ಸಾರಿಗೆ ಬಸ್ ದರ ಹೆಚ್ಚಿದ್ದು, ಜನಸಾಮಾನ್ಯರಿಗೆ ತೊಂದರೆ ಎದುರಿಸುವಂತಾಗಿದೆ. ಬಡವರಿಗೆ ವರದಾನವಾಗುವಂತಹ ಯೋಜನೆಗಳನ್ನು ಸರ್ಕಾರ ರೂಪಿಸಬೇಕೆ ಹೊರತು ಬಡವರಿಗೆ ಹೊರೆಯಾಗುವಂತಹ ಕಾರ್ಯಕ್ಕೆ ಮುಂದಾಗದಿರುವುದು ದುರಂತವೇ ಸರಿ.
ಇದನ್ನೂ ಓದಿ:ಬೈಕ್ ಸವಾರರಿಗೆ ಹೆಲ್ಮೆಟ್ ವಿತರಣೆ
ಅಗತ್ಯ ವಸ್ತುಗಳ ಬೆಲೆ ಕಡಿಮೆಗೊಳಿಸುವತ್ತ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಕರವೇ ಅಧ್ಯಕ್ಷ ಜಿಲಾನಿಪಾಷಾ, ಶಿವರಾಜ ನಾಯಕ, ಅಜೀಜ್ ಪಾಷಾ, ಚಂದ್ರು ನಾಯಕ, ರವಿಕುಮಾರ ಬರಗುಡಿ, ಹನುಮಂತ ನಾಯಕ, ಜಮೀರ್ ಖಾನ್, ಅಲ್ಲಾವುದ್ದೀನ್ ಇದ್ದರು.