ಭೂ ರಹಿತ ಕುಟುಂಬಗಳಿಗೆ ಪಟ್ಟಾ ಕೊಡಿ


Team Udayavani, Aug 18, 2017, 3:14 PM IST

rayachuru rtc.jpg

ಮಾನ್ವಿ: ಭೂರಹಿತ 226 ಕುಟುಂಬಗಳಿಗೆ ಪಟ್ಟಾ ನೀಡಲು ಆಗ್ರಹಿಸಿ ತಾಲೂಕಿನ ಕೆ. ಗುಡದಿನ್ನಿ ಗ್ರಾಮದಿಂದ ಮಾನ್ವಿ ತಹಶೀಲ್ದಾರ ಕಚೇರಿವರೆಗೆ 226 ಕುಟುಂಬಗಳೊಂದಿಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಟಿಎಪಿಸಿಎಂಎಸ್‌ ಅವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಟಿಯುಸಿಐ ರಾಜ್ಯಾಧ್ಯಕ್ಷ ಆರ್‌.ಮಾನಸಯ್ಯ, ತಾಲೂಕಿನ ಕೆ. ಗುಡದಿನ್ನಿ, ಬಲ್ಲಟಗಿ, ಶ್ರೀನಿವಾಸಕ್ಯಾಂಪ್‌, ಜಂಬಲದಿನ್ನಿ, ಚೌಧರಿ ಕ್ಯಾಂಪ್‌, ಚಾಗಬಾವಿ ಗ್ರಾಮಗಳಲ್ಲಿನ ಸರ್ಕಾರಿ ಭೂಮಿ ಸ.ನಂ.11/ಅ ಮತ್ತು 11/ಆ 52, 53, 54, 55, 64ರ 200 ಎಕರೆ ಭೂಮಿಯನ್ನು 226 ಭೂರಹಿತ ರೈತರು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಭೂಮಿಗೆ ಕನ್ನ ಹಾಕಲು ಯತ್ನಿಸುತ್ತಿರುವ ಭೂಮಾಪೀಯಾಗಳ ಮೇಲೆ ಕ್ರಮ ಜರುಗಿಸಿ, ಭೂರಹಿತ ಕುಟುಂಬಗಳಿಗೆ ಪಟ್ಟಾ ನೀಡಬೇಕೆಂದು ಆಗ್ರಹಿಸಿದರು. ಕಳೆದ 28 ವರ್ಷಗಳಿಂದ ಪಡಾ ಬಿದ್ದಿದ್ದ ಸ.ನಂ.11/ಅ ಮತ್ತು 11/ಆ 52, 53, 54, 55, 64ರ ಪೈಕಿ 200 ಎಕರೆ ಭೂಮಿಯನ್ನು 226 ಕುಟುಂಬಗಳು ಸಾಗುವಳಿ ಮಾಡಿತ್ತಿರುವುದನ್ನು ಗಮನಿಸಿ ಕೆಲ ನೆಲಗಳ್ಳರು ನಕಲಿ ವಂಶಾವಳಿ ದಾಖಲಾತಿ ಮೂಲಕ 25 ವರ್ಷಗಳ ಹಿಂದೆ ಈ ಭೂಮಿಯನ್ನು ಖರೀದಿಸಿರುವುದಾಗಿ ಬೆಂಗಳೂರು ನ್ಯಾಯಾಧಿ ಕರಣಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಕೆ.ಗುಡದಿನ್ನಿಯಲ್ಲಿನ ಈ ಭೂಮಿ ಮೂಲತಃ ರಾಘವೇಂದ್ರರಾವ್‌ ಎನ್ನುವ ಬ್ರಾಹ್ಮಣ ಸಮಾಜದವರಿಗೆ ಸೇರಿದ್ದಾಗಿದೆ. ಆದರೆ ಕುಟುಂಬದ ಸುಳಿವು ಕೂಡಾ ಇಲ್ಲ. ಹೀಗಾಗಿ ಈ ಭೂಮಿಯನ್ನು 1992ರಲ್ಲಿ ಸರ್ಕಾರಿ ಭೂಮಿಯೆಂದು ಆದೇಶ ಹೊರಡಿಸಲಾಗಿದೆ. ಈಗ ಏಕಾಏಕಿ ಮಾಲೀಕರನ್ನು ಸೃಷ್ಟಿಸಿ ಭೂ ಕಬಳಿಸುವ ಹುನ್ನಾರ ನಡೆದಿದೆ. ಕೂಡಲೇ ಸಾಗುವಳಿ ಮಾಡುತ್ತಿರುವ ಭೂಹೀನರಿಗೆ ಪಟ್ಟಾ ನೀಡಬೇಕು ಮತ್ತು ನಕಲಿ ವಂಶಾವಳಿ ದಾಖಲೆಗಳ ಮೂಲಕ ಭೂಮಿ ಕಬಳಿಸಲು ಮುಂದಾಗಿರುವ ಭೂ ಮಾಫೀಯಾ, ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕೆಆರ್‌ಎಸ್‌ ಪ್ರಧಾನ ಕಾರ್ಯದರ್ಶಿ ಅಶೋಕ ನಿಲೋಗಲ್‌, ತಾಲೂಕು ಅಧ್ಯಕ್ಷ ವಿ. ಮುದುಕಪ್ಪ ನಾಯಕ, ಬಸವರಾಜ ಬಾಗಲವಾಡ, ಆರ್‌. ಹುಚ್ಚರೆಡ್ಡಿ, ಚನ್ನಮ್ಮ, ಸಂತೋಷ ಹಿರೇದಿನ್ನಿ, ಆನಂದ ಭೋವಿ, ಗಂಗಪ್ಪ ತೋರಣದಿನ್ನಿ, ಎಚ್‌. ಕೆ. ಚನ್ನಬಸವ, ಹನುಮಂತ ದೇಸಾಯಿ, ಗ್ರಾಮ ಘಟಕ ಅಧ್ಯಕ್ಷ ವೀರೇಶ ನಾಯಕ, ಲಾಲಪ್ಪ ನಾಯಕ, ಗಜೇಂದ್ರ ಕಲ್ಲೂರು, ಪರಶುರಾಮ, ಶರಣಯ್ಯಸ್ವಾಮಿ, ಹನುಮಂತ ಸಿರವಾರ, ಹುಲಿಗೆಪ್ಪ, ನಾಗರಾಜ, ಮುದುಕಪ್ಪ ಗಣದಿನ್ನಿ, ಗೌರಪ್ಪ, ಮಲ್ಲಯ್ಯ ನಾಯಕ, ವೆಂಕಟೇಶ ನಾಯಕ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.