ಸರ್ಕಾರಿ ಮಳಿಗೆ ಬಾಡಿಗೆಯಲ್ಲಿ ಉಪಗುತ್ತಿಗೆ ಹೊರೆ!

ವಾರ್ಷಿಕ 30ಲಕ್ಷ ಬಾಡಿಗೆ ತರುವ ಮಳಿಗೆ ಬೀಳು; ಕೇವಲ8 ಮಳಿಗೆ ಹರಾಜು,ಮತ್ತೆ ಹೊಸದಾಗಿ ಟೆಂಡರ್‌

Team Udayavani, Sep 7, 2021, 7:09 PM IST

ಸರ್ಕಾರಿ ಮಳಿಗೆ ಬಾಡಿಗೆಯಲ್ಲಿ ಉಪಗುತ್ತಿಗೆ ಹೊರೆ!

ಸಿಂಧನೂರು: ಸರ್ಕಾರದ ಬೊಕ್ಕಸಕ್ಕೆ ಬಾಡಿಗೆ ಪಾವತಿಯಾಗುವ ಯಾವುದೇ ಸರ್ಕಾರಿ ಮಳಿಗೆ ಆಯಾ ಸಂಸ್ಥೆ ಮಾತ್ರ ಹರಾಜು ಹಾಕಬಹುದು. ಪ್ರಭಾವ ಬಳಸಿ ಮಳಿಗೆ ಬಾಡಿಗೆ ಪಡೆದ ನಂತರ ಉಪಗುತ್ತಿಗೆ ನೀಡುವ ಪರಂಪರೆಯಿಂದಾಗಿ ಇಲ್ಲಿನ ಸಾರಿಗೆ ಘಟಕಕ್ಕೆಸೇರಿದ 19 ಮಳಿಗೆ ಕೇಳ್ಳೋರಿಲ್ಲವಾಗಿದೆ.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ವಾರ್ಷಿಕ ‌ 30 ಲಕ್ಷ ರೂ. ಆದಾಯ ತರಬಹುದಾದ ಮಳಿಗೆಗಳು ಪಾಳು ಬಿದ್ದಿವೆ. 2006-07ನೇಸಾಲಿನಲ್ಲಿ ಬರೋಬ್ಬರಿ 1.70 ಕೋಟಿ ರೂ. ವ್ಯಯಿಸಿ ಸಾರಿಗೆ ಸಂಸ್ಥೆಗೆ ಸೇರಿದ ನಗರದ ಹೃದಯ ಭಾಗದಲ್ಲಿನ ಜಾಗದಲ್ಲಿ ಮಳಿಗೆ ನಿರ್ಮಿಸಲಾಗಿದೆ. ಅವು ಗಳನ್ನು ಸದ್ಬಳಕೆ ಮಾಡಿಕೊಳ್ಳುವುದರಲ್ಲಿ ನಿರ್ಲಕ್ಷ್ಯಕಾಣಿಸಿದೆ.

27ರಲ್ಲಿ 8 ಮಾತ್ರ ಹರಾಜು: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬರೋಬ್ಬರಿ 2 ಬಾರಿ ಟೆಂಡರ್‌ ಕರೆದಾಗಲೂ 8 ಮಳಿಗೆ ಮಾತ್ರ ಹರಾಜಿಗೆ
ಒಳಪಟ್ಟಿವೆ. ಅದರಲ್ಲೂ ಕೆಲವರು ಮಾತ್ರ ವ್ಯಾಪಾರ ಆರಂಭಿಸಿದ್ದಾರೆ. ಕೆಲವರು ಮಳಿಗೆ ಗುತ್ತಿಗೆ  ಪಡೆದ ಮೇಲೆ ಅಲ್ಲಿಗೆ ಕಾಲಿಟ್ಟಿಲ್ಲ. ಬದಲಿಗೆ ಮಳಿಗೆ ಬಾಡಿಗೆಗೆ ಇದೆ ಎಂಬ ಬೋರ್ಡ್‌ ನೇತು ಹಾಕಿದ್ದಾರೆ. ಈ ರೀತಿ ಸರ್ಕಾರಿ ಮಳಿಗೆಯನ್ನು ಬಾಡಿಗೆಗೆ ಖಾಸಗಿ ವ್ಯಕ್ತಿ ಫಲಕ ಹಾಕಲು ನಿಯಮದಲ್ಲಿ ಅವಕಾಶವಿಲ್ಲ. ಸರ್ಕಾರಿ ಮಳಿಗೆಗೆ ಫಲಕ ಹಾಕಿದ್ದರೂ ಕೇಳ್ಳೋರಿಲ್ಲವಾಗಿದೆ.

ಉಪಗುತ್ತಿಗೆಯ ಕಾಟ: ಉಪಗುತ್ತಿಗೆ ಪಡೆದವರು ಅದರ ದುಪ್ಪಟ್ಟು ಬಾಡಿಗೆಗೆ ವ್ಯಾಪಾರಿಗಳಿಗೆ ನೀಡುವ ಪರಂಪರೆ ಬೆಳೆದು ಬಂದ ಹಿನ್ನೆಲೆಯಲ್ಲಿ
ವಾಸ್ತವವಾಗಿ ದುಡಿಯುವವರು ಸಂಕಷ್ಟ ಎದುರಿಸುವಂತಾಗಿದೆ. ಟೆಂಡರ್‌ ಸಂದರ್ಭದ ಲಾಬಿ, ಅನಗತ್ಯ ಪೈಪೋಟಿಯಿಂದಾಗಿ ಇರುವ ‌ ಮಳಿಗೆ ಕೂಡ ಬಳಸುವವರು ಇಲ್ಲವಾಗಿದೆ. 27 ವಾಣಿಜ್ಯ ಮಳಿಗೆ ಒಳಗೊಂಡ ಸಂಕೀರ್ಣ ಸದ್ಯ ಬಯಲು ಶೌಚಾಲಯ ತಾಣವಾಗಿದೆ. ಮುಂದಿನ ಐದಾರು ಅಂಗಡಿ ಮಾತ್ರ ಬಳಕೆಯಾಗುತ್ತಿವೆ. ಉಳಿದವುಗಳಿಗೆ  ಬೀಗ ಜಡಿಯಲಾಗಿದೆ. ಉಪಗುತ್ತಿಗೆ ಕಾಟ ತಪ್ಪಿಸಿದರೆ ಟೆಂಡರ್‌ನಲ್ಲಿ ಪಾಲ್ಗೊಳ್ಳಬಹುದು ಎನ್ನುತ್ತಾರೆ ವ್ಯಾಪಾರಿಗಳು.

ಇದನ್ನೂ ಓದಿ:ಭಾರತದ ಗಡಿ ಪ್ರದೇಶ ಚೀನಾಗೆ ಹೊಸ ಕಮಾಂಡರ್‌

ಗೂಡಂಗಡಿ ತೆರವಿಗೆ ಪತ್ರ
ವಾಣಿಜ್ಯ ಮಳಿಗೆ ಮುಂಭಾಗದಲ್ಲಿ ಗೂಡಂಗಡಿಗಳಿವೆ. ಸಾರಿಗೆ ಸಂಸ್ಥೆಯ ಮಳಿಗೆಗಳಿಗೆ ಇವು ಅಡ್ಡವಾದಹಿನ್ನೆಲೆಯಲ್ಲಿ ಅನಧಿಕೃತ ಅಂಗಡಿ ತೆರವುಗೊಳಿಸಲು ಸಾರಿಗೆ ಸಂಸ್ಥೆ ಪತ್ರ ಬರೆದಿದೆ. ನಗರಸಭೆ ಅಧಿಕಾರಿಗಳು ಈ ಮಳಿಗೆಗಳಿಗೆ ನಗರಸಭೆಯಿಂದ ಪರವಾನಗಿ ಪಡೆದುಕೊಂಡಿಲ್ಲ. ಅವರನ್ನು ತೆರವುಗೊಳಿಸುವ ಪ್ರಶ್ನೆಯೇ ಇಲ್ಲವೆಂಬ ಉತ್ತರ ನೀಡಿದ್ದಾರೆ

ಈವರೆಗೂ ಕ್ರಮ ಶೂನ್ಯ
ಉದ್ದೇಶಿತ ವ್ಯಾಪಾರಕ್ಕೆಹೊರತುಪಡಿಸಿ ಬೇರೆ ರೀತಿಯ ಚಟುವಟಿಕೆ ಸರ್ಕಾರಿ ಮಳಿಗೆಗಳಲ್ಲಿ ನಡೆಸುವಂತಿಲ್ಲ. ಈ ನಿಯಮ ಅನ್ವಯಿಸಿಎಪಿಎಂಸಿ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿ, ತೋಟಗಾರಿಕೆ ಇಲಾಖೆ ಆವರಣದ 12 ಮಳಿಗೆ ಮಾಲೀಕರಿಗೆ ನೋಟಿಸ್‌ ನೀಡಿದ್ದರು. ನಂತರ ದಲ್ಲಿ ಯಾವುದೇ ಕ್ರಮ ಜಾರಿಯಾಗಲಿಲ್ಲ. ಇಂತಹ ಮೃದು ಧೋರಣೆಯಿಂದಾಗಿ ಬಹುತೇಕಕಡೆ ಸರ್ಕಾರಿ ಮಳಿಗೆಗಳು ಉಪ ಬಾಡಿಗೆ ನೀಡುವ ವ್ಯವಹಾರಕ್ಕೆ ದಾಳವಾಗಿವೆ. ನ್ಯಾಯವಾಗಿ ವ್ಯಾಪಾರ ನಡೆಸುವವರು, ದುಬಾರಿಗೆ ಬಾಡಿಗೆಯನ್ನು ಸರ್ಕಾರದ ಬದಲಿಗೆಖಾಸಗಿ ವ್ಯಕ್ತಿಗಳಿಗೆ ನೀಡಬೇಕಾದ ಅನಿವಾರ್ಯತೆ ತಲೆದೋರಿದೆ.

ಕಮರ್ಷಿಯಲ್‌ ಕಾಂಪ್ಲೆಕ್ಸ್‌ನ 27 ಮಳಿಗೆ ಪೈಕಿ 8 ಮಳಿಗೆಹೊರತುಪಡಿಸಿ, ಉಳಿದವುಗಳಿಗೆ ಟೆಂಡರ್‌ಕರೆಯಲಾಗುವುದು. ಆಸಕ್ತರು ಅರ್ಜಿ ಹಾಕಿದರೆ, ಅವಕಾಶ ನೀಡಲಾಗುತ್ತದೆ. ವಾರದಲ್ಲೇ ಈ ಪ್ರಕ್ರಿಯೆ ಆರಂಭವಾಗಲಿದೆ.
-ಐ.ಸಿ. ಹೊಸಮನಿ,
ಡಿಟಿಒ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸೆ

ಸಾರಿಗೆ ಸಚಿವರನ್ನು ಸಂಪರ್ಕಿಸಿ, ಅವರಿಂದ ಸಾರಿಗೆ ಸಂಸ್ಥೆಯ ಮಳಿಗೆ ಉದ್ಘಾಟಿಸುವುದಕ್ಕೆ ನಿರ್ಧರಿಸಲಾಗಿದೆ. ಪುನರ್‌ ಟೆಂಡರ್‌ಕರೆದು ಎಲ್ಲ ಮಳಿಗೆ ಹರಾಜುಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ವೆಂಕಟರಾವ್‌ ನಾಡಗೌಡ,
ಶಾಸಕರು, ಸಿಂಧನೂರು

-ಯಮನಪ್ಪ ಪವಾರ

 

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.