ಸಿಎಂ ಏನೇ ಹೇಳಿದರೂ, ಸಚಿವ ಸ್ಥಾನ ಕೇಳುವುದು ನಮ್ಮ ಕರ್ತವ್ಯ: ಎಚ್.ವಿಶ್ವನಾಥ್
Team Udayavani, Jan 13, 2020, 3:01 PM IST
ರಾಯಚೂರು: ಮುಖ್ಯಮಂತ್ರಿಗಳು ಏನೇ ಹೇಳಿದರೂ ಸಚಿವ ಸ್ಥಾನ ಕೇಳುವುದು ನಮ್ಮ ಕರ್ತವ್ಯ. ರಾಜೀನಾಮೆ ನೀಡಿದ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.
ದೇವದುರ್ಗ ತಾಲೂಕು ತಿಂಥಿಣಿಯ ಕನಕಗುರುಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಒಂದು ಸರ್ಕಾರ ಪತನವಾಗಲು ಮತ್ತೊಂದು ಸರ್ಕಾರ ರಚನೆ ಆಗಲು 17 ಶಾಸಕರ ತ್ಯಾಗ ಇದೆ. ಅದಕ್ಕಾಗಿಯೇ ಆಗ್ರಹಪೂರ್ವಕ ವಿನಂತಿ ಮಾಡುತ್ತಿದ್ದೇವೆ.
ಒಂದು ವೇಳೆ ಕೊಡದೇ ಇದ್ದರೆ ಮುಂದೆ ಕಾದು ನೋಡುತ್ತೇವೆ. ಇವತ್ತು ಸೋಮವಾರ. ನಾಳೆ ನಾಡಿದ್ದು ಏನಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.
ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗಲು ನಾವು 17 ಜನ ತ್ಯಾಗ ಮಾಡಿದ್ದೇವೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ತಂಗಡಗಿಯವರುಸಚಿವ ಸ್ಥಾನದ ಬಗ್ಗೆ ಮಾತನಾಡಲು ಯಾರು. ಅವರೇನು ಮುಖ್ಯಮಂತ್ರಿಯೇ? ಮಾಜಿ ಸಚಿವರ ಮಾತುಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.