ಬಿಸಿಲಿನಿಂದ ಬೆಂದಿದ್ದ ರಾಯಚೂರಿನಲ್ಲಿ ಭಾರೀ ವರ್ಷಧಾರೆ: ರೈತರಲ್ಲಿ ಹರ್ಷ, ಹಲವರಿಗೆ ಸಂಕಷ್ಟ
Team Udayavani, May 30, 2020, 2:10 PM IST
ರಾಯಚೂರು: ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಶನಿವಾರ ಬೆಳಗಿನ ಜಾವ ಸುರಿದ ಭಾರೀ ವರ್ಷಧಾರೆ ತಂಪೆರೆದರೆ, ಮುಂಗಾರು ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗಕ್ಕೂ ಖುಷಿ ತಂದಿದೆ. ಆದರೆ, ನಗರ ಸೇರಿದಂತೆ ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಾನಾ ಅವಾಂತರ ಸೃಷ್ಟಿಸಿದೆ.
ರಾತ್ರಿ ಎರಡೂವರೆ ಸುಮಾರಿಗೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಶುರುವಾದ ಮಳೆ ಬೆಳಗಿನ ಜಾವದರೆಗೂ ಸುರಿಯಿತು. ಕಲಮಲಾ ಹೋಬಳಿಯಲ್ಲಿ 148.5 ಮಿಮೀ ಮಳೆ ದಾಖಲಾಗುವ ಮೂಲಕ ಅತಿ ಹೆಚ್ಚು ಪ್ರಮಾಣದ ಮಳೆ ಬಿದ್ದಿದೆ. ಇನ್ನೂ ಜಮೀನುಗಳಲ್ಲಿ ನೀರು ಸಂಗ್ರಹಗೊಂಡು ಬದುಗಳು ಒಡೆದು ಹೋಗಿದೆ. ಈಗಾಗಲೇ ಭೂಮಿ ಹದ ಮಾಡಲು ಕಾದು ಕುಳಿತ ರೈತರಿಗೆ ಈ ಮಳೆ ಪೂರಕವಾಗಿದೆ.
ನಗರದ ಸಿಯಾತಲಾಬ್, ಮಡ್ಡಿಪೇಟೆ, ಎಲ್ಬಿಎಸ್ ನಗರ, ಶಕ್ತಿನಗರದ ಲೇಬರ್ ಕಾಲನಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ಮಳೆ ನೀರು ನುಗ್ಗಿ ನಾನಾ ಅವಾಂತರ ಸೃಷ್ಟಿಸಿದೆ. ಈ ಪ್ರದೇಶಗಳು ತಗ್ಗಿನಲ್ಲಿದ್ದು, ಸ್ವಲ್ಪ ಮಳೆ ಬಂದರೂ ನೀರು ಮನೆಗಳಿಗೆ ನುಗ್ಗುತ್ತದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಜಾಗರಣೆ ಕಾಯಂ ಎನ್ನುವಂತಾಗಿದ್ದು, ಶನಿವಾರವೂ ನೀರು ಎತ್ತಿ ಹಾಕುವ ಕಾಯಕ ಶುರುವಾಗಿತ್ತು. ಸಿಯಾತಲಾಬ್ ಬಡಾವಣೆಯಲ್ಲಿ ಚರಂಡಿ ನೀರು ಮಿಶ್ರಣಗೊಂಡು ಮನೆಗಳಿಗೆ ನುಗ್ಗಿವೆ. ಮನೆ ಬಳಕೆ ವಸ್ತುಗಳು, ಪಾತ್ರೆ ಪಗಡೆ, ದವಸ ಧಾನ್ಯಗಳೆಲ್ಲ ನೀರು ಪಾಲಾದವು. ಎಲ್ ಬಿಎಸ್ ನಗರದಲ್ಲಿ ಮಳೆಗೆ ನೆನೆದು ಮನೆ ಗೋಡೆ ಕುಸಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು
ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!
MUST WATCH
ಹೊಸ ಸೇರ್ಪಡೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್