ಪ್ರಸ್ತಾವನೆಯಲ್ಲೇ ಹೆದ್ದಾರಿ ರಿಪೇರಿ!
ಎನ್ಎಚ್-150 (ಎ) ಘೋಷಣೆಯಾಗಿ 4 ವರ್ಷ,ಬಿಡುಗಡೆಯಾಗಿಲ್ಲ ನಯಾಪೈಸೆ
Team Udayavani, Jan 6, 2021, 4:14 PM IST
ಮಸ್ಕಿ: ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿ ನಾಲ್ಕು ವರ್ಷ ಕಳೆದಿದೆ. ಆದರೆ ಇಲ್ಲಿನ ರಸ್ತೆಯಸ್ಥಿತಿಯೇ ಬದಲಾಗಿಲ್ಲ!.
ಮಸ್ಕಿ ಹೃದಯ ಭಾಗದಲ್ಲಿ ಹಾದುಹೋಗುವ ಮಸ್ಕಿ-ಲಿಂಗಸುಗೂರು(ಬೀದರ-ಶ್ರೀರಂಗಪಟ್ಟಣ) ಹೆದ್ದಾರಿ ಸ್ಥಿತಿಇದು. ಈ ಹಿಂದೆ ರಾಜ್ಯ ಹೆದ್ದಾರಿಯಾಗಿದ್ದಇಲ್ಲಿನ ರಸ್ತೆಯನ್ನು ರಾಷ್ಟ್ರೀಯಹೆದ್ದಾರಿಯಾಗಿ ಘೋಷಿಸಲಾಗಿದೆ. ಸುಧಾರಣೆ ನಿರ್ವಹಣೆ ಹೊಣೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಪವಿಭಾಗ ಹುನಗುಂದ ವ್ಯಾಪ್ತಿಗೆ ಸೇರಿಸಲಾಗಿದೆ.
ಆದರೆ ಘೋಷಣೆಗಷ್ಟೇ ಸೀಮಿತವಾದಇಲ್ಲಿನ ರಸ್ತೆ ಸುಧಾರಣೆಯಲ್ಲಿ ಮಾತ್ರ ಹಿಂದೆ ಬಿದ್ದಿದೆ. ಈ ಹಿಂದೆ ಹಾಕಿದ್ದಡಾಂಬರ್ ಎಲ್ಲೆಂದರಲ್ಲಿ ಕಿತ್ತು ಹೋಗಿದ್ದುರಸ್ತೆ ಸಂಪೂರ್ಣ ತೋಪೆದ್ದಿದೆ. ನಿತ್ಯ ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರುಮಾತ್ರ ತಗ್ಗು-ಗುಂಡಿಯಲ್ಲಿ ಎದ್ದು-ಬಿದ್ದು ಸಾಗುವಂತಾಗಿದೆ.
ಅಗಲೀಕರಣವೂ ಇಲ್ಲ: ಎನ್ ಎಚ್-150 (ಎ) ಘೋಷಣೆಯಾದ ರಸ್ತೆಯಲ್ಲಿನ ಮಸ್ಕಿ-ಸಿಂಧನೂರುವರೆಗಿನ ರಸ್ತೆ ಮಾತ್ರ ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ವಿಸ್ತೀರ್ಣವಾಗಿದ್ದು, ಈಗರಿ ಕಾಪೆìಟಿಂಗ್ ಮಾಡುವ ಮೂಲಕ ಸುಧಾರಣೆ ಮಾಡಲಾಗುತ್ತಿದೆ. ಆದರೆ ಮಸ್ಕಿ-ಲಿಂಗಸುಗೂರು ರಸ್ತೆ ಮಾತ್ರಇದ್ದ ಸ್ಥಿತಿಯಲ್ಲೇ ಕೈ ಬಿಟ್ಟಿರುವುದುಪ್ರಯಾಣಿಕರ ಆಕ್ಷೇಪಕ್ಕೆ ಕಾರಣವಾಗಿದೆ.
ಹಾಳಾದ ರಸ್ತೆ ಬಿಟ್ಟು, ಈ ರಸ್ತೆ ಏಕೆ ಮಾಡುತ್ತಿದ್ದಾರೆ? ಎನ್ನುವುದೇ ಈಗ ಗೊಂದಲ. ಮುದಬಾಳ್ ಕ್ರಾಸ್ -ಲಿಂಗಸುಗೂರುವರೆಗಿನ 25 ಕಿ.ಮರಸ್ತೆ ಸಂಪೂರ್ಣ ಹಾಳಾಗಿದೆ. ಅಲ್ಲದೇಈ ರಸ್ತೆ ಇನ್ನು ರಾಷ್ಟ್ರೀಯ ಹೆದ್ದಾರಿ ನಿಯಮದಂತೆ ಅಗಲೀಕರಣವಾಗಿಲ್ಲ.ಸದ್ಯ 5.5 ಮೀಟರ್ ಅಗಲವಿದ್ದು, 10 ಮೀ.ಗೆ ವಿಸ್ತೀರ್ಣ ಹೆಚ್ಚಿಸಬೇಕಿದೆ. ಇರುವ ರಸ್ತೆಯಲ್ಲಿ ನಿತ್ಯ ಲಕ್ಷಾಂತರ ವಾಹನ ಓಡಾಡುತ್ತವೆ. ಭಾರಿ ವಾಹನಗಳ ಓಡಾಟದಿಂದಾಗಿ ಸಂಪೂರ್ಣಹಾಳಾಗಿ ಹೋಗಿದೆ. ಹೀಗಾಗಿ ಈ ರಸ್ತೆ ಸಂಪೂರ್ಣ ಅಭಿವೃದ್ಧಿಗೆ ಅನುದಾನದ ಅಗತ್ಯವಿದೆ. ಇದಕ್ಕಾಗಿ 180 ಕೋಟಿ ರೂ. ಅನುದಾನ ಬೇಡಿಕೆ ಇಟ್ಟು ಪ್ರಸ್ತಾವನೆಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಗತ್ಯ ಅನುದಾನ ಬಿಡುಗಡೆಯಾದರೆ ರಸ್ತೆ ಸಂಪೂರ್ಣ ರಿಪೇರಿ ಮಾಡಿ ಎನ್ಎಚ್ ರೂಪ ನೀಡಲಾಗುತ್ತದೆ ಎನ್ನುತ್ತಾರೆ ಇಂಜಿನಿಯರ್ ವಿಜಯ್ಕುಮಾರ್.
ಇದೂ ಅದೇ ಸ್ಥಿತಿ: ಕೇವಲ ಮಸ್ಕಿ-ಲಿಂಗಸುಗೂರು ಮಾತ್ರವಲ್ಲ,ಇದೇ ಹೆದ್ದಾರಿಯಲ್ಲಿ ಸೇರಿದಲಿಂಗಸುಗೂರು-ತಿಂಥಿಣಿ ಬ್ರಿಡ್ಜ್ರಸ್ತೆಯದ್ದೂ ಇದೇ ಕಥೆ. ಈ ರಸ್ತೆ ಸುಧಾರಣೆಗೂ ಅನುದಾನದಅಗತ್ಯವಿದೆ. ಮಸ್ಕಿ-ತಿಂಥಿಣಿ ಬ್ರಿಡ್ಜ್ ವರೆಗೂ ಒಂದೇ ಪ್ಯಾಕೇಜ್ನಲ್ಲಿಒಟ್ಟು 320 ಕೋಟಿ(ಮುದಬಾಳಕ್ರಾಸ್-ಲಿಂಗಸುಗೂರು-180 ಕೋಟಿ,ಲಿಂಗಸುಗೂರು-ತಿಂಥಿಣಿ- 140
ಕೋಟಿ) ರೂ. ಬ್ರಿಡ್ಜ್ಗೆ ಡಿಪಿಆರ್ತಯಾರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಲಾಗಿದೆ. ಆದರೆ ಇದುವರೆಗೂನಯಾ ಪೈಸೆ ಬಿಡುಗಡೆಯಾಗಿಲ್ಲ. ಒಟ್ಟಿನಲ್ಲಿರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯಹೆದ್ದಾರಿಯಾಗಿ ಘೋಷಣೆಯಾದರೂ ಈಭಾಗದಲ್ಲಿ ಹಾದು ಹೋಗುವ ಇಲ್ಲಿನ ರಸ್ತಇನ್ನು ರಿಪೇರಿ ಭಾಗ್ಯ ಸಿಗದೇ ಇರುವುದು ವಿಪರ್ಯಾಸ.
ಎಸ್ಎಚ್ನಿಂದ ಎನ್ ಎಚ್ ಆಗಿ ಘೋಷಣೆಯಾಗಿನಾಲ್ಕು ವರ್ಷ ಕಳೆದರೂ ಮಸ್ಕಿ-ಲಿಂಗಸುಗೂರು ರಸ್ತೆಇದುವರೆಗೂ ಸುಧಾರಣೆಯಾಗಿಲ್ಲ.ಸರ್ಕಾರ ಈ ಕೂಡಲೇ ಈ ರಸ್ತೆಗೆ ಅನುದಾನ ಬಿಡುಗಡೆ ಮಾಡಬೇಕು- ಕೃಷ್ಣ ಡಿ. ಚಿಗರಿ, ಪ್ರಯಾಣಿಕರು, ಮಸ್ಕಿ
ಎನ್ಎಚ್-150 (ಎ) ರಸ್ತೆಯಲ್ಲಿ ಹಾದು ಬರುವ ಮಸ್ಕಿ-ತಿಂಥಿಣಿ ಬ್ರಿಡ್ಜ್ ವರೆಗೂ ರಸ್ತೆ ಅಗಲೀಕರಣ, ಸುಧಾರಣೆಗಾಗಿ ಅಗತ್ಯ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಇನ್ನು ಅನುಮೋದನೆಸಿಕ್ಕಿಲ್ಲ. ಅನುಮೋದನೆ ದೊರೆತು ಆರ್ಥಿಕ ಅನುದಾನ ಸಿಕ್ಕ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ. – ವಿಜಯಕುಮಾರ್, ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹುನಗುಂದಾ ವಿಭಾಗ
ಮಲ್ಲಿಕಾರ್ಜುನ ಚಿಲ್ಕರಾಗಿ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಪಾಕ್ ಪರ ಘೋಷಣೆ ವಿಚಾರ: ಮಂಗಳೂರಿನಲ್ಲಿ ಎಸ್ಡಿಪಿಐನಿಂದ ‘SP ಕಚೇರಿ ಚಲೋ’ ಪ್ರತಿಭಟನೆ
ದಕ್ಷಿಣಕನ್ನಡ ಜಿಲ್ಲೆಯ 6 ಕೇಂದ್ರಗಳಲ್ಲಿ ನಾಳೆಯಿಂದ ಲಸಿಕೆ ವಿತರಣೆ: ಡಾ. ಕೆ.ವಿ. ರಾಜೇಂದ್ರ
ಸಚಿವ ಸಂಪುಟ ಅಸಮಾಧಾನ: ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ ಎಂದ ನಳಿನ್
ಕತ್ತಲೆ ಕವಿದ ಬದುಕಿನಲ್ಲಿ ಬೆಳಕು ಮೂಡಿಸಿದ ಸ್ವ ಉದ್ಯೋಗ | Udayavani
ಭಾರತ ಆತ್ಮನಿರ್ಭರವಾಗಲು ಗ್ರಾಹಕರು ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸಬೇಕು
ಹೊಸ ಸೇರ್ಪಡೆ
Watch Live; ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ವಿಧ್ಯುಕ್ತ ಚಾಲನೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ವಿತರಣೆಗೆ ಚಾಲನೆ
ಬೆಳ್ತಂಗಡಿಗೆ ಆಗಮಿಸಿದ ಸಚಿವ ಮಾಧು ಸ್ವಾಮಿ: ವಿವಿಧ ಕಾಮಗಾರಿ ಶಿಲಾನ್ಯಾಸ ಹಾಗೂ ಲೋಕಾರ್ಪಣೆ
ಕುಷ್ಟಗಿಯ ಇಬ್ಬರು ಮಟ್ಕಾ, ಜೂಜುಕೋರರ 6 ತಿಂಗಳ ಗಡಿಪಾರು
ನೂತನ ನಿಯಮ ಗೊಂದಲ: ಅಪ್ ಡೇಟ್ ಮುಂದೂಡಿ ಮಹತ್ವದ ನಿರ್ಧಾರ ಕೈಗೊಂಡ ವಾಟ್ಸಾಪ್