“ಅಕ್ರಮ ಮತದಾನ’ದ ಬೂತ್‌ ಎತ್ತಂಗಡಿಗೆ ಒತ್ತಡ!

ಲಿಖಿತ ದೂರು ನೀಡಿದ ಕಾಂಗ್ರೆಸ್‌ ! ­ಹೆಚ್ಚಿನ ಬಂದೋಬಸ್ತ್ ಎನ್ನುತ್ತಿದೆ ಜಿಲ್ಲಾಡಳಿತ !­ಚುನಾವಣೆ ಆಯೋಗ ಕೈಗೊಳ್ಳುವ ಕ್ರಮದತ್ತ ಎಲ್ಲರ ಚಿತ್ತ

Team Udayavani, Mar 28, 2021, 8:29 PM IST

dgsgd

ಮಸ್ಕಿ: ಕಳೆದ ಬಾರಿ ಅಕ್ರಮ ಮತದಾನ ಚಲಾವಣೆಗೊಂಡಿದ್ದವು ಎನ್ನುವ ಆರೋಪ ಹೊತ್ತ ಮಸ್ಕಿಯ ಎರಡು ಬೂತ್‌ಗಳನ್ನು ಬೇರೆಡೆ ವರ್ಗಾಯಿಸಲು ಕಾಂಗ್ರೆಸ್‌ ಪಟ್ಟು ಹಿಡಿದಿದೆ. ಆದರೆ ಪ್ರಭಾವಕ್ಕೆ ಮಣಿದ ಜಿಲ್ಲಾಡಳಿತ ಈ ಬೂತ್‌ಗಳನ್ನು ಬದಲಾಯಿಸಲು ಮೀನಾಮೀಷ ಎಣಿಸುತ್ತಿದೆ.

ಮಸ್ಕಿ ಪಟ್ಟಣದಲ್ಲಿರುವ 88 ಮತ್ತು 89 ಈ ಎರಡು ಬೂತ್‌ಗಳೇ ಈಗ ಈ ವಿವಾದದ ಕೇಂದ್ರಿತ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ನಿವಾಸದಿಂದ ಕೇವಲ 10 ಮೀಟರ್‌ ಅಂತರದಲ್ಲಿಯೇ ಈ ಎರಡು ಮತದಾನ ಕೇಂದ್ರಗಳಿವೆ. ಇದೇ ಕಾರಣಕ್ಕೆ ಇಲ್ಲಿ ಪ್ರಭಾವ ಬೀರಲಾಗುತ್ತಿದೆ. ಕಳೆದ 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆ ಇಂತಹದ್ದೇ ಘಟನೆಗಳು ನಡೆದಿದ್ದವು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಪುತ್ರಿ ವಿದೇಶದಲ್ಲಿದ್ದರೂ ಅವರ ಹೆಸರಿನಲ್ಲಿ ಮತ ಚಲಾವಣೆಗೊಂಡಿತ್ತು.

ಇನ್ನು ಸತ್ತವರ ಹೆಸರಿನಲ್ಲೂ ಮತದಾನ ಮಾಡಲಾಗಿತ್ತು. ಊರಲ್ಲಿ ಇರದೇ ಇರುವವರು, ಬೋಗಸ್‌ ಮತದಾರರ ಹೆಸರಿನಲ್ಲೂ ಮತಗಳು ಚಲಾವಣೆಗೊಂಡಿದ್ದವು. ಹೀಗೆ ರಿಗ್ಗಿಂಗ್‌ ನಡೆದಿದೆ ಎನ್ನುವ ಆಪಾದನೆ ಮೇಲೆ ಆಗಿನ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆದಿದ್ದವು. ಮರು ಮತದಾನಕ್ಕೂ ಆಗ್ರಹಗಳಾಗಿದ್ದವು. ಕೊನೆಗೆ ರಾಜಿ ಸಂಧಾನ, ಪೊಲೀಸ್‌ ಅಧಿ ಕಾರಿಗಳ ಮನವೊಲಿಕೆ ಬಳಿಕ ಈ ಜಗಳ ನಿಂತಿತ್ತು. ಆದರೆ ಕೊನೆಗೆ ಚುನಾವಣೆ ಫಲಿತಾಂಶ ಬಂದ ಬಳಿಕ ಈ ಮತದಾನ ಕೇಂದ್ರದಲ್ಲಿ ನಡೆದ ಅಕ್ರಮದ ಕುರಿತು ಕೇಸ್‌ ಕೋರ್ಟ್‌ ಮೆಟ್ಟಿಲೇರಿತ್ತು.

ಚುನಾವಣೆ ವಿಳಂಬ: ಆಗಿನ ಬಿಜೆಪಿ ಅಭ್ಯರ್ಥಿ ಆಗಿದ್ದ ಆರ್‌.ಬಸನಗೌಡ ತುರುವಿಹಾಳ ಮತದಾನ ಕೇಂದ್ರ 88 ಮತ್ತು 89ರಲ್ಲಿ ಅಕ್ರಮ ಮತದಾನ ಮಾಡಲಾಗಿದೆ ಎನ್ನುವ ಸಾಕ್ಷಿ ಮತ್ತು ಆಧಾರ ಸಮೇತ ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ದೂರು ದಾಖಲಿಸಿದ್ದರು. ಸುಮಾರು ಎರಡು ವರ್ಷ ಈ ಕೇಸ್‌ನ ವಿಚಾರಣೆ ನಡೆದಿತ್ತು. ಮಾಜಿ ಶಾಸಕ ಪ್ರತಾಪಗೌಡರ ಪುತ್ರಿ ಮತ್ತು ಹಲವು ಬೋಗಸ್‌ ಮತದಾರರ ಹೆಸರಿನಲ್ಲಿ ಮತದಾನದ ಕುರಿತು ನ್ಯಾಯಾಲಯದಲ್ಲಿ ಧ್ವನಿ ಎತ್ತಿದ್ದರು. ಇದೇ ಕಾರಣಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ರಾಜೀನಾಮೆ ಸಲ್ಲಿಸಿದ್ದರೂ ಇಲ್ಲಿನ ಕ್ಷೇತ್ರಕ್ಕೆ ಚುನಾವಣೆ ಶೀಘ್ರ ಘೋಷಣೆಯಾಗಿರಲಿಲ್ಲ. ಈ ಕೇಸ್‌ನ ವಿಚಾರಣೆ ನಡೆದಿರುವಾಗಲೇ ಸ್ವತಃ ದೂರುದಾರರಾದ ಆರ್‌. ಬಸನಗೌಡ ತುರುವಿಹಾಳ ಕೇಸ್‌ ವಾಪಸ್‌ ಪಡೆಯುವ ಬಗ್ಗೆ ಲಿಖೀತ ಒಪ್ಪಿಗೆಯನ್ನು ಕೋರ್ಟ್‌ಗೆ ನೀಡಿದ್ದರಿಂದ ಕೇಸ್‌ ಇತ್ಯರ್ಥವಾಗಿತ್ತು. ಈ ಕೇಸ್‌ ಇತ್ಯರ್ಥದ ಬಳಿಕವಷ್ಟೇ ಇತ್ತೀಚೆಗೆ ಉಪಚುನಾವಣೆ ಘೋಷಣೆಯಾಗಿದೆ.

ಮತ್ತೆ ಅಕ್ರಮದ ಭೀತಿ: ಈ ಹಿಂದೆ ಹೀಗೆ ಅಕ್ರಮ ಮತದಾನ ನಡೆದ ಈ ಎರಡು ಬೂತ್‌ಗಳಲ್ಲಿ ಮತ್ತೆ ನಕಲಿ ಮತಗಳ ಚಲಾವಣೆಯ ಭೀತಿ ಇದೆ ಎಂದು ಕಾಂಗ್ರೆಸ್‌ನ ಬ್ಲಾಕ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ ಆತಂಕ ವ್ಯಕ್ತಪಡಿಸಿ, ಈ ಎರಡು ಬೂತ್‌ಗಳನ್ನು ಬೇರೆಡೆ ವರ್ಗಾಯಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದಾರೆ. ಮಾಜಿ ಶಾಸಕರ ನಿವಾಸದಿಂದ ಕೇವಲ 10 ಮೀಟರ್‌ ಅಂತರದಲ್ಲಿಯೇ ಇರುವುದರಿಂದ ಇಲ್ಲಿ ಮತ್ತೆ ಬೋಗಸ್‌ ವೋಟ್‌ ನಡೆಯಲಿವೆ. ಹೀಗಾಗಿ ಇವುಗಳನ್ನು ಬೇರೆಡೆ ವರ್ಗಾಯಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದಾರೆ. ಆದರೆ ಇತ್ತೀಚೆಗೆ ಇಲ್ಲಿನ ಮತದಾನ ಕೇಂದ್ರಗಳಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವೆಂಕಟೇಶಕುಮಾರ್‌ ಈ ಬೂತ್‌ಗಳನ್ನು ಬದಲಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಬೇಕಿದ್ದರೆ ಹೆಚ್ಚಿನ ಬಂದೋಬಸ್ತ್, ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಆದರೆ ಈ ಬೂತ್‌ಗಳನ್ನು ಬದಲಾಯಿಸಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಆದರೆ ಈಗ ಕಾಂಗ್ರೆಸ್‌ ಪಕ್ಷದಿಂದ ಲಿಖೀತ ದೂರು ಸಲ್ಲಿಸಲಾಗಿದ್ದು, ಆಯೋಗ ಏನು ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.

ಮಲ್ಲಿಕಾರ್ಜುನ ಚಿಲ್ಕರಾಗಿ   

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.