ಉಪ ಚುನಾವಣೆ ಪ್ರಭಾವ, ಎಲ್ಲ ಆದೇಶಕ್ಕೂ ತಡೆ
ಇಲಾಖೆಯ ಮಂತ್ರಿಗಳ ಮೂಲಕ ಮೌಖಿಕ ಆದೇಶಗಳನ್ನು ಹೊರಡಿಸಿ ವರ್ಗಾವರ್ಗಿ ಆದೇಶಗಳನ್ನು ತಡೆ ಹಿಡಿಯಲಾಗುತ್ತಿದೆ
Team Udayavani, Feb 22, 2021, 4:28 PM IST
ಸಿಂಧನೂರು: ಸಾಮಾನ್ಯ ಸಂದರ್ಭದಲ್ಲಿ ಯಾವುದೇ ಆಯಕಟ್ಟಿನ ಸ್ಥಳಕ್ಕೆ ಮತ್ತೂಬ್ಬರ ವರ್ಗಾವಣೆಯಾದರೆ ದಿಢೀರ್ ಚಾರ್ಜ್ ಸ್ವೀಕರಿಸುತ್ತಾರೆ. ಸದ್ಯ ಯಾವುದೇ ಅಧಿಕಾರಿಗಳು ವರ್ಗಾವಣೆಯಾದರೂ ಅವರ ಆದೇಶಕ್ಕೆ ಮೌಖಿಕ ತಡೆ ಬೀಳುತ್ತಿದೆ.
ಮಸ್ಕಿ ಬೈ ಎಲೆಕ್ಷನ್ ಪ್ರಭಾವ ಸಿಂಧನೂರು ತಾಲೂಕಿನ ಮೇಲೂ ಬೀರಲಾರಂಭಿಸಿದ್ದು, ಸರಕಾರದಿಂದ ಆದೇಶಗಳು ಹೊರ ಬಿದ್ದರೂ ಸ್ಥಳೀಯವಾಗಿ ತಡೆ ಹಿಡಿಯುವ ಶಕ್ತಿಗಳ ಕೈ ಮೇಲಾಗುತ್ತಿದೆ. ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ತಾಲೂಕಿನ 5 ಗ್ರಾಮ ಪಂಚಾಯಿತಿಗಳು ಹಾಗೂ ಅದರ ವ್ಯಾಪ್ತಿಯ ಹಳ್ಳಿಗಳು ಒಳಪಟ್ಟಿವೆ. ಅದರಲ್ಲಿ ಪ್ರಮುಖ ಹೋಬಳಿಗಳೇ ತಾಲೂಕಿನಲ್ಲಿವೆ.
ಇದರ ಪರಿಣಾಮ ತಾಲೂಕಿನ ಮೇಲಾಗುತ್ತಿದ್ದು, ಅಧಿಕಾರಿಗಳು ಯಾರು ಇರಬೇಕೆಂಬುದನ್ನು ನಿರ್ಧರಿಸುವ ಶಕ್ತಿ ಮಸ್ಕಿ ಕ್ಷೇತ್ರದ ಪ್ರಭಾವಿಯ ಅಂಗಳಕ್ಕೆ ಜಿಗಿದಿದೆ. ಇದಕ್ಕೆ ಪೂರಕವೆಂಬಂತೆ ಸರಕಾರದಿಂದ ಹೊರಡಿಸಲಾದ ಬಹುತೇಕ ಆದೇಶಗಳಿಗೆ ತಡೆ ಬೀಳಲಾರಂಭಿಸಿದೆ.
ಏನೇನು ತಡೆ?: ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ರಾಘವೇಂದ್ರ ಅವರ ಸ್ಥಾನಕ್ಕೆ ತಾರಾಬಾಯಿ ಎಂಬುವರನ್ನು ನೇಮಿಸಿ ಪೊಲೀಸ್
ಇಲಾಖೆಯ ಐಜಿ ಆದೇಶ ಹೊರಡಿಸಿದ್ದರು. ಇದು ಜಾರಿಗೆ ಬರಲೇ ಇಲ್ಲ. ಪರಿಷ್ಕರಿಸಿದ ಆದೇಶವೂ ಅಧಿ ಕೃತವಾಗಿ ಹೊರ ಬಿದ್ದಿಲ್ಲ. ಡಿವೈಎಸ್ಪಿ ವಿಶ್ವನಾಥ
ಕುಲಕರ್ಣಿ ಅವರನ್ನು ವರ್ಗಾಯಿಸಿ ಅವರ ಸ್ಥಾನಕ್ಕೆ ಸಿಒಡಿ ವಿಭಾಗದಲ್ಲಿದ್ದ ಗೀತಾ ಅವರನ್ನು ನೇಮಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿತ್ತು.
ಇದು ಕೂಡ ಜಾರಿಯಾಗಿಲ್ಲ. ಮುನಿರಾಬಾದ್-ಮೆಹಬೂಬನಗರ ರೈಲ್ವೆ ವಿಭಾಗದ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ಶ್ರುತಿ ಅವರನ್ನು ಪ್ರಭಾರ ಸ್ವಾ ಧೀನಾ
ಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಆಗಲೂ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅವರು ಈ ಹುದ್ದೆಯ ಚಾರ್ಜ್ ಹಸ್ತಾಂತರ
ಮಾಡಿಲ್ಲ.
ಎಲ್ಲರೂ ತಡೀರಿ: ಮಸ್ಕಿ ಉಪಚುನಾವಣೆ ಘೋಷಣೆಯ ಸಂದರ್ಭ ಇರುವುದರಿಂದ ಸಿಂಧನೂರು ತಾಲೂಕಿನ ಯಾವುದೇ ಅಧಿಕಾರಿಯನ್ನು ಕೂಡ ವರ್ಗಾಯಿಸಿದಂತೆ ತಡೆ ಹಿಡಿಯುವ ಪ್ರಯತ್ನಗಳು ಸಾಗಿವೆ. ಅದರ ಫಲವಾಗಿ ಅಧಿಕಾರಿಗಳ ವರ್ಗಾವಣೆ ಆದೇಶ ಹೊರ ಬಿದ್ದ ಬಳಿಕವೂ ಆಯಾ ಇಲಾಖೆಯ ಮಂತ್ರಿಗಳ ಮೂಲಕ ಮೌಖಿಕ ಆದೇಶಗಳನ್ನು ಹೊರಡಿಸಿ ವರ್ಗಾವರ್ಗಿ ಆದೇಶಗಳನ್ನು ತಡೆ ಹಿಡಿಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅದಕ್ಕೆ ಪೂರಕವೆಂಬಂತೆ ವರ್ಗಾವಣೆ ಆದೇಶ ಬಂದರೂ ಯಾವೊಬ್ಬ ಅಧಿಕಾರಿಯ ಸ್ಥಾನವೂ ಬದಲಾವಣೆಯಾಗದಿರುವುದು ಸಾಕ್ಷಿಯಾಗಿದೆ.
*ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ