ಕಾರ್ಮಿಕರಿಗೆ ಪ್ರಮಾಣ ಪತ್ರ ವಿತರಣೆ
Team Udayavani, May 30, 2020, 7:11 AM IST
ಗೊರೇಬಾಳ: ಹೊಸಳ್ಳಿ ಇ.ಜೆ ಪಂಚಾಯತ್ ವ್ಯಾಪ್ತಿಯ ಶ್ರೀಪುರಂ ಜಂಕ್ಷನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 11ರಿಂದ ಕ್ವಾರಂಟೈನ್ನಲ್ಲಿದ್ದ 33 ವಲಸಿಗ ಕಾರ್ಮಿಕರ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಬಿಡುಗಡೆ ಪ್ರಮಾಣ ಪತ್ರ ನೀಡಲಾಯಿತು.
ಟಾಸ್ಕ್ಫೋರ್ಸ್ ಸಮಿತಿ ನೋಡಲ್ ಅಧಿಕಾರಿಗಳಾದ ದಡೇಸುಗೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವೀರಭದ್ರಪ್ಪ, ಹೊಸಳ್ಳಿ ಇ.ಜೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಾಜೇಂದ್ರಾಚಾರ, ಗೊರೇಬಾಳ ಹೋಬಳಿ ಕಂದಾಯ ನಿರೀಕ್ಷಕ ವೀರೇಶ, ಸಾಸಲಮರಿ ಪ್ರಭಾರ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಣ 33 ಜನರಿಗೆ ಬಿಡುಗಡೆ ಪ್ರಮಾಣ ಪತ್ರ ನೀಡಿದರು. ಕ್ವಾರಂಟೈನ್ನಿಂದ ಹೊರ ಬಂದರೂ ಇನ್ನು 14ದಿನಗಳವರೆಗೆ ಯಾರೂ ಹೊರಗಡೆ ತಿರುಗಾಡುವಂತಿಲ್ಲ ಎಂದು ಎಚ್ಚರಿಸಲಾಯಿತು.