ಕಾಲ್ನಡಿಗೆಯಲ್ಲಿ ಸಾಗಿದ ಕೂಲಿಕಾರರು
Team Udayavani, Apr 19, 2020, 12:59 PM IST
ಕಲಬುರಗಿ: ಚಿಮ್ಮಾಇದಲಾಯಿ ಗ್ರಾಮದ ಸಮೀಪದ ರಸ್ತೆ ಮಾರ್ಗವಾಗಿ ತಮ್ಮೂರಿಗೆ ಕಾಲ್ನಡಿಗೆಯಲ್ಲಿ ಹೊರಟಿರುವ ಕೂಲಿ ಕಾರ್ಮಿಕರು.
ಕಲಬುರಗಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್ಡೌನ್ ಮಾಡಿರುವುದರಿಂದ ನೆರೆಯ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಾಂಡೂರಿಗೆ ಸುಮಾರು 150 ಕಿಲೋ ಮೀಟರ್ ದೂರ ಕೂಲಿ ಕಾರ್ಮಿಕರು ನಡೆದುಕೊಂಡೇ ಸಾಗುತ್ತಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಈ ಕಾರ್ಮಿಕರು ವಾಹನ ಸಂಚಾರ ರದ್ದಾಗಿರುವ ಕಾರಣ ತಮ್ಮ ಊರಾದ ತಾಂಡೂರು ಸಮೀಪದ ಕೊಸಗಿ ಗ್ರಾಮಕ್ಕೆ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಮಾರ್ಗವಾಗಿ ಜಿಲ್ಲೆಯನ್ನು ಹಾಯ್ದು ಸಾಗುತ್ತಿದ್ದಾರೆ.
ಶನಿವಾರ ಚಿಂಚೋಳಿ ತಾಲೂಕಿನ ಚಿಮ್ಮಾಇದಲಾಯಿ ಗ್ರಾಮದ ಸಮೀಪ ತೆಲಂಗಾಣದತ್ತ ಸಾಗುತ್ತಿದ್ದ ಇವರು, ಕಳೆದ ನಾಲ್ಕು ದಿನಗಳಿಂದ ಕಾಲ್ನಡಿಗೆಯಲ್ಲೇ ಊರಿನತ್ತ ಹೊರಟಿದ್ದೇವೆ. ಇನ್ನು ಹಲವು ಗಂಟೆಗಳ ನಂತರ ಊರು ಸೇರಲಿದ್ದೇವೆ ಎಂದು ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ ಹಾಗೂ ಹಣಮಂತ ಪೂಜಾರಿ ಅವರಿಗೆ ತಿಳಿಸಿದ್ದಾರೆ. ಮೂವರು ಮಹಿಳೆಯರು ಹಾಗೂ ಮೂವರು ಪುರುಷರಿರುವ ಒಟ್ಟು ಆರು ಜನ ಕಾರ್ಮಿಕರು ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?