ಬೆಳೆಹಾನಿ: ಸಿಎಂ ಪರಿಹಾರ ಘೋಷಣೆ ಮಾಡಲಿ
Team Udayavani, Nov 23, 2021, 5:32 PM IST
ಮುದಗಲ್ಲ: ಕಟಾವಿಗೆ ಬಂದಸ ತೊಗರಿ, ಭತ್ತ ಸತತ ಮಳೆಗೆ ಹಾಳಾಗಿದ್ದು, ಮುಖ್ಯಮಂತ್ರಿಗಳು ಬೆಳೆ ಸಮೀಕ್ಷೆ ನಡೆಯಿಸಿ ರೈತರಿಗೆ ಬೆಳೆಹಾನಿ ಪರಿಹಾರ ಘೋಷಣೆ ಮಾಡಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು. ಸಮೀಪದ ದೇಸಾಯಿ ಭೋಗಾಪುರ, ತಲೇಖಾನ ಗ್ರಾಮಗಳಲ್ಲಿ ಹಾಳಾದ ತೊಗರಿ ಬಿತ್ತನೆ ಮಾಡಿದ ಹೊಲಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ತೊಗರಿಯನ್ನೇ ನಂಬಿದ ರೈತರಿಗೆ ಮಳೆ ಕಾಟ ಹೆಚ್ಚಿದೆ. ತೊಗರಿ ಕಟಾವು ಬಂದಾಗ ಸತತ ಮಳೆಗೆ ಕಾಯಿಯೊಳಗೆ ಮೊಳಕೆಯೊಡೆದಿದೆ. ಇದರಿಂದ ತೀರಾ ನಷ್ಟವಾಗಿದೆ ಎಂದು ದೇಸಾಯಿ ಭೋಗಾಪುರ ಗ್ರಾಮದ ಶಂಕ್ರಪ್ಪ ಶಾಸಕರ ಎದುರು ಆಳಲು ತೊಡಿಕೊಂಡರು.
ನಂತರ ಶಾಸಕರು ಮಾತನಾಡಿ, ಅಕಾಲಿಕ ಮಳೆಯಿಂದ ಈ ಭಾಗದಲ್ಲಿ 15 ದಿನಗಳಿಂದ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ಒಂದು ವಾರ ಸತತ ಮಳೆ ಸುರಿದ ಪರಿಣಾಮ ಕಟಾವಿಗೆ ಬಂದ ತೊಗರಿ, ಭತ್ತ ಹಾಳಾಗಿದೆ. ಕೂಡಲೇ ಸರಕಾರ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು. ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಹನುಮೇಶ ಬಾಗೋಡಿ, ಶಂಭುಲಿಂಗಪ್ಪ ವಿಟ್ಲಾಪೂರ, ಮಂಜು ಹಡಗಲಿ ತಾಂಡಾ, ಪತ್ಯಪ್ಪ ರಾಠೊಡ, ಸೀನಪ್ಪ ಹಾಗೂ ಗ್ರಾಪಂ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್ ಕಾನ್ಸ್ಟೆಬಲ್ ಗೆ ಗಾಯ
Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್