ಸ್ಥಳಾಂತರಿಸಿದ ದಾಳಿಂಬೆ ಗಿಡಗಳಲ್ಲಿ ಚಿಗುರು
Team Udayavani, Mar 18, 2020, 1:30 PM IST
ಲಿಂಗಸುಗೂರು: ಪಟ್ಟಣದ ನಿವಾಸಿ, ರೈತ ಬಸವರಾಜಗೌಡ ಗಣೇಕಲ್ ಅವರು 2019 ಡಿ.19ರಂದು ಬೇರು ಸಮೇತ ಕಿತ್ತು ಬೇರೆ ಹೊಲಕ್ಕೆ ಸ್ಥಳಾಂತರಿಸಿದ 5 ಸಾವಿರ ದಾಳಿಂಬೆ ಗಿಡಗಳಲ್ಲಿ ಈಗ ಹೊಸಚಿಗುರು ಬಂದಿದೆ. ಈ ಮೂಲಕ ರೈತನ ಪ್ರಯತ್ನಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ.
ರೈತ ಬಸವರಾಜಗೌಡ ಅವರು ನೀರಲಕೇರಾ ಗ್ರಾಮದ ಬಳಿ 22 ಎಕರೆ ಜಮೀನಿನಲ್ಲಿ 10 ಸಾವಿರ ದಾಳಿಂಬೆ ಗಿಡ ಬೆಳೆಸಿದ್ದರು. ಕಡಿಮೆ ಅಂತರದಲ್ಲಿ ಬೆಳೆಸಿದ್ದರಿಂದ ಒಂದಕ್ಕೊಂದು ತಾಗಿ, ಬಿಸಿಲು, ಗಾಳಿ ಹತ್ತದೇ ಇಳುವರಿ ಕುಂಠಿತವಾಗಿತ್ತು. ಇದರಿಂದ ಆತಂಕಕ್ಕೊಳಗಾಗಿದ್ದ ರೈತ ಬಸವರಾಜಗೌಡ ಅವರು, 10 ಸಾವಿರ ಗಿಡಗಳಲ್ಲಿನ 5 ಸಾವಿರ ಗಿಡಗಳನ್ನು ತಾಯಿ ಬೇರು ಸಮೇತ ಕಿತ್ತು 4 ಕಿ.ಮೀ. ದೂರದ ಜಮೀನಿನಲ್ಲಿ ನೆಟ್ಟಿದ್ದರು. 2019ರ ಡಿ.19ರಂದು ಆರಂಭವಾದ ಗಿಡಗಳ ಸ್ಥಳಾಂತರಿಸುವ ಕೆಲಸ ಸುಮಾರು ಒಂದೂವರೆ ತಿಂಗಳ ಕಾಲ ನಡೆಯಿತು. ಇದಕ್ಕಾಗಿ 30 ಲಕ್ಷ ರೂ. ವೆಚ್ಚವಾಗಿತ್ತು. ರೈತನ ಈ ಹೊಸ ಪ್ರಯತ್ನದಿಂದ ಗಿಡಗಳು ಬೆಳೆಯುತ್ತವೆಯೋ ಇಲ್ಲವೋ ಎಂಬ ಕುತೂಹಲ ಮೂಡಿಸಿತ್ತು. ಆದರೀಗ ದಾಳಿಂಬೆ ಗಿಡಗಳು ಬೆಳೆಯುತ್ತಿದ್ದು, ಹೂ ಕೂಡಾ ಬಿಟ್ಟು ರೈತನ ಮೊªಲ್ಲಿ ಮಂದಹಾಸ ಮೂಡಿಸಿವೆ.
ದಾಳಿಂಬೆ ಗಿಡಗಳನ್ನು ಸ್ಥಳಾಂತರಿಸುವ ಸುದ್ದಿ ತಿಳಿದು ಮಹಾರಾಷ್ಟ್ರ ಹಾಗೂ ರಾಜ್ಯದ ಚಿತ್ರದುರ್ಗ, ಹೊಸದುರ್ಗ, ಬಾಗಲಕೋಟೆ, ಬೆಂಗಳೂರು, ಬಳ್ಳಾರಿ, ಕಲಬುರಗಿ, ತುಮಕೂರು ಸೇರಿದಂತೆ ಅನೇಕ ಕಡೆಗಳಿಂದ ರೈತರು ಹಾಗೂ ಕೃಷಿ ವಿಜ್ಞಾನಿಗಳು ರೈತ ಗಣೇಕಲ್ ಅವರ ಜಮೀನಿಗೆ ಭೇಟಿ ನೀಡಿ ದಾಳಿಂಬೆ ಗಿಡ ಬೇರು ಸಮೇತ ಕಿತ್ತು ಬೇರೆಡೆ ನೆಡುವ ಕಾರ್ಯ ವೀಕ್ಷಿಸಿದ್ದರು.
ಆಗಸ್ಟ್ನಿಂದ ಹಣ್ಣು: ಬೇರು ಸಮೇತ ಗಿಡಗಳನ್ನು ಕಿತ್ತು ಮತ್ತೂಂದೆಡೆ ನೆಟ್ಟಿದ್ದ ದಾಳಿಂಬೆ ಗಿಡಗಳು ಈಗಾಗಲೇ ಹೂ ಬಿಟ್ಟಿವೆ. ಬಿಟ್ಟಿರುವ ಹೂಗಳನ್ನು ಕಿತ್ತು ಆಗಸ್ಟ್ ತಿಂಗಳಿಂದ ಹಣ್ಣಿಗೆ ಬಿಡುವ ಚಿಂತನೆ ರೈತ ಗಣೇಕಲ್ದ್ದಾಗಿದೆ.
ಕಡಿಮೆ ಅಂತರದಲ್ಲಿ ದಾಳಿಂಬೆ ಗಿಡಗಳನ್ನು ಬೆಳೆಸಿದ್ದರಿಂದ 5 ಸಾವಿರ ದಾಳಿಂಬೆ ಗಿಡಗಳನ್ನು ತಾಯಿ ಬೇರು ಸಮೇತ ಕಿತ್ತು ಬೇರೆ ಜಮೀನಿಗೆ ಸ್ಥಳಾಂತರಿಸಿ ನೆಟ್ಟಿದ್ದೆ. ನನ್ನ ಕಠಿಣ ಪ್ರಯತ್ನಕ್ಕೆ ದೇವರು ಫಲ ನೀಡಿದ್ದಾನೆ. ಆಗಸ್ಟ್ ತಿಂಗಳಿಂದ ಹಣ್ಣಿಗೆ ಬಿಡಲಾಗುವುದು. ಮತ್ತೆ ಚಿಗುರಿದ ದಾಳಿಂಬೆ ಗಿಡಗಳಿಂದ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ.
ಬಸವರಾಜಗೌಡ ಗಣೇಕಲ್,
ಪ್ರಗತಿಪರ ರೈತ, ಲಿಂಗಸುಗೂರು.
ಶಿವರಾಜ ಕೆಂಭಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ