ಕಾಂಗ್ರೆಸ್ ನವರದ್ದು ಗರತಿ ರಾಜಕಾರಣವಾ ?: ಸಚಿವ ಸಿ.ಟಿ.ರವಿ
Team Udayavani, Nov 6, 2019, 12:47 PM IST
ರಾಯಚೂರು: ಬಿಜೆಪಿಯವರಿಗೆ ನೈತಿಕತೆ ಇಲ್ಲ ಎನ್ನುವ ಕಾಂಗ್ರೆಸ್ ನವರದ್ದು ಗರತಿ ರಾಜಕಾರಣವಾ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು ಪಕ್ಷದಲ್ಲಿ ಮಾತ್ರ ಗರತಿಯರು ಇರೋದು. ಸಿಎಂ ಇಬ್ರಾಹಿಂಗಿಂತ ಗರತಿ ಬೇಕಾ? ಡಿಸಿಎಂ ಆಗಿದ್ದಾಗಲೇ ಅದೇ ಪಕ್ಷದ ವಿರುದ್ಧ ಬಂಡಾಯ ಸಾರಿದ್ದು ಗರತಿ ರಾಜಕಾರಣವೇ ಎಂದು ಪರೋಕ್ಷವಾಗಿ ಸಿದ್ದಾರಮಯ್ಯರನ್ನು ವ್ಯಂಗ್ಯವಾಡಿದರು.
ಹಿಂದೆ ಜನತಾದಳದ ಆರು ಜನ ಶಾಸಕರನ್ನು, ಜೆಡಿಎಸ್ ನ ಅನೇಕರನ್ನು ತಮ್ಮ ಪಕ್ಷಕ್ಕೆ ಕರೆಕೊಂಡಿದ್ದು ಯಾವ ಸೀಮೆ ರಾಜಕಾರಣ. ಚಲುವರಾಯ ಸ್ವಾಮಿ, ಮಾಗಡಿ ಬಾಲಕೃಷ್ಣ, ಅಖಂಡ ಶ್ರೀನಿವಾಸ, ಜಮೀರ್ ಅಹ್ಮದ್, ಶ್ರೀನಿವಾಸ ಪ್ರಸಾದ ಯಾವ ಪಕ್ಷದಲ್ಲಿದ್ದರು. ಭೂತದ ಬಾಯಲ್ಲಿ ಭಗವದ್ಗೀತೆ ಅನ್ನೋದು ಕಾಂಗ್ರೆಸ್ ಗೆ ಹೇಳಿದ್ದು ಎಂದು ಟೀಕಿಸಿದರು.
ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಬಂದಾಗ ವೀರಪ್ಪ ಮೊಯ್ಲಿ ಸಿ.ಬೈರೆಗೌಡರ ಆಡಿಯೋ ಕ್ಯಾಸೆಟ್ ಬಿಡುಗಡೆಯಾಗಿತ್ತು. ಕಾಂಗ್ರೆಸ್ ಅವಧಿಯಲ್ಲಿ ಸರ್ಕಾರ ಉರುಳಿಸಲು ಏನೇನು ಮಾಡಿದ್ದರು ಎಂಬ ಸಂಗತಿ ಬಿಚ್ಚಿಡಬೇಕಾದ ಪ್ರಸಂಗ ಬಂದರೆ ಅದನ್ನೂ ಮಾಡುತ್ತೇವೆ ಎಂದರು.
ನಮ್ಮ ಸರ್ಕಾರ ಬೀಳಿಸುವ ಪ್ರಯತ್ನ ನನಸಾಗದು. ಈ ವಿಚಾರದಲ್ಲಿ ದೇವೆಗೌಡರ ಹೇಳಿಕೆ ಸ್ವಾಗತಾರ್ಹ. ದೇವೆಗೌಡರು ಅನುಭವಿ ರಾಜಕಾರಣಿ. ಯಾವ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದಾರೋ ಅದನ್ನು ಅನುಮಾನದಿಂದ ನೋಡುವುದಿಲ್ಲ ಎಂದರು.
ಅನರ್ಹರ ಪ್ರಕರಣ ಸುಪ್ರೀಂ ಅಂಗಳದಲ್ಲಿದೆ . ತೀರ್ಪು ಬರುವವರೆಗೆ ಕಾಯಬೇಕು. ನಮ್ಮ ಸರ್ಕಾರ ಸುಭದ್ರವಾಗಿದೆ. ಉಪ ಚುನಾವಣೆ ನಡೆದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೆ. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಮುಂದುವರಿಯಲಿದೆ. ಪ್ರಧಾನಿ ಮೋದಿ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಬಹುಶ ಈ ಸ್ಥಾನದಲ್ಲಿ ನೆಹರು ಇದ್ದಿದ್ದರೆ ಅಂತಾರಾಷ್ಟ್ರೀಯ ಖ್ಯಾತಿಗಾಗಿ ಆರ್ ಸಿಇಪಿಗೆ ಸಹಿ ಹಾಕುತ್ತಿದ್ದರೇನೋ. ಆದರೆ, ಮೋದಿಯವರಿಗೆ ಖ್ಯಾತಿಗಿಂತ ದೇಶದ ಹಿತ ಮುಖ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ