ಸವಳು-ಜವಳಲ್ಲಿ ಬಂಪರ್ ಬೆಳೆ
ಲೀಜ್ಗೆ ಪಡೆದ ಭೂಮಿಯಲ್ಲಿ ಯರದೊಡ್ಡಿ ಯುವ ರೈತನ ಸಾಧನೆ
Team Udayavani, Jan 25, 2020, 12:12 PM IST
ಮುದಗಲ್ಲ: ಮಳೆ ಕೊರತೆ, ಮಾರುಕಟ್ಟೆ ಸಮಸ್ಯೆ ಹಾಗೂ ಹಳೆ ಪದ್ಧತಿ ಸೇರಿ ಹಲವು ಕಾರಣಗಳಿಂದಾಗಿ ಕೃಷಿಯಿಂದ ವಿಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರ ನಡುವೆ ಬಳ್ಳಾರಿ ಮೂಲದ ಜಗದೀಶ ಕುರಗೋಡ ಎಂಬ ರೈತ ಯರದೊಡ್ಡಿಯಲ್ಲಿ 12 ಎಕರೆ ಸವಳು, ಜವಳು ಭೂಮಿಯನ್ನು ಲೀಜ್ಗೆ ಪಡೆದು ದಾಳಿಂಬೆ ಬೆಳೆದು ಲಕ್ಷಾಂತರ ರೂ. ಸಂಪಾದಿಸುತ್ತಿದ್ದಾರೆ.
ತಲೇಖಾನ ಗ್ರಾಪಂ ವ್ಯಾಪ್ತಿಯ ಯರದೊಡ್ಡಿ ಗ್ರಾಮದಲ್ಲಿ ಸುಮಾರು 30 ಎಕರೆ ಸವಳು-ಜವಳು ಜಮೀನು ಲೀಜ್ಗೆ ಪಡೆದ ಯುವ ರೈತ ಜಗದೀಶ ಕುರಗೋಡ ದಾಳಿಂಬೆ ಬೆಳೆಯುತ್ತಿದ್ದಾರೆ. ಈ ಸವಳು-ಜವಳು ಜಮೀನನ್ನು 10 ವರ್ಷದ ಅವಧಿಗೆ ಲೀಜ್ಗೆ ಪಡೆದಿದ್ದೇನೆ. ಜಮೀನು ಮಾಲೀಕ ಎನ್. ವೆಂಕಟರಾವ್ ಅವರಿಗೆ ಮೊದಲ 5 ವರ್ಷ ಪ್ರತಿ ವರ್ಷ 1.5 ಲಕ್ಷ ರೂ. ನಂತರದ 5 ವರ್ಷ 2.5 ಲಕ್ಷ ರೂ.ದಂತೆ ನೀಡಬೇಕು. 2018-19ರಲ್ಲಿ ಅಂದಾಜು 10 ಲಕ್ಷ ರೂ. 2019-20ರಲ್ಲಿ 13 ಲಕ್ಷ ರೂ. ಲಾಭವಾಗಿದೆ. 6 ಎಕರೆಯಲ್ಲಿ ಕಳೆದ ಎರಡು ವರ್ಷದಿಂದ ಫಸಲು ಕೈ ಸೇರುತ್ತಿದೆ.
ಇನ್ನು 6 ಎಕರೆಯಲ್ಲಿ ಬೆಳೆದ ದಾಳಿಂಬೆ ಫಸಲು ಮುಂದಿನ ವರ್ಷದಿಂದ ಕೈ ಸೇರುತ್ತಿದೆ ಎಂದು ರೈತ ಜಗದೀಶ ವಿವರಿಸಿದರು. ಈ ಜಮೀನಿನಲ್ಲಿ ನಾಲ್ಕೈದು ಜನ ರೈತರು ಕೃಷಿ ಮಾಡಿ ನಷ್ಟ ಅನುಭವಿಸಿದ್ದಾರೆ. ಆದರೆ ನಾನು ಕೃಷಿಗೆ ಕೈ ಹಾಕಿದಾಗಿನಿಂದ ನಷ್ಟವಾಗಿಲ್ಲ. ಮೊದಲಿಗೆ ಆರು ಕೊಳವೆಬಾವಿ ಕೊರೆಸಿದ್ದೆ. ಅದರಲ್ಲಿ 4 ಕೊಳವೆ ಬಾವಿಯಲ್ಲಿ ನೀರು ಲಭ್ಯವಾಗಿದೆ. ಈ ಕೊಳವೆಬಾವಿಗಳ ನೀರನ್ನೇ ಬಳಸುತ್ತಿದ್ದೇನೆ. ಬಳ್ಳಾರಿಯ ತೋಟಗಾರಿಕೆ ಬೆಳೆ ತಜ್ಞ ಡಾ|ಶ್ರೀನಿವಾಸ ರಾಜು ಮಾರ್ಗದರ್ಶನದಲ್ಲಿ ದಾಳಿಂಬೆ ಸಸಿಗಳನ್ನು ಖರೀದಿಸಿ ನಾಟಿ ಮಾಡಿ ಪಾಲನೆ-ಪೋಷಣೆ ಮಾಡಿದ 3 ವರ್ಷದ ಬಳಿಕ ದಾಳಿಂಬೆ ಫಸಲು ಕೈಸೇರಿದೆ. ಇದಕ್ಕೆ ಜೈವಿಕ ಗೊಬ್ಬರ, ಸಾವಯವ ಗೊಬ್ಬರ ಸೇರಿ ಔಷಧ ಸಿಂಪಡಣೆಗೆ ತೋಟಗಾರಿಕೆ ತಜ್ಞ ಡಾ|ಶ್ರೀನಿವಾಸರಾಜು ಮಾರ್ಗದರ್ಶನ ನೀಡುತ್ತಿದ್ದು, ಪ್ರತಿ ತಿಂಗಳು ತೋಟಕ್ಕೆ ಭೇಟಿ ನೀಡಿ ಸಲಹೆ ನೀಡಿದ್ದಾರೆ ಎಂದು ರೈತ ಜಗದೀಶ ಹೇಳಿದರು.
ದೇವಪ್ಪ ರಾಠೊಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ