ನ್ಯಾಯಬೆಲೆ ಅಂಗಡಿಗೆ ಶಾಸಕ ರಾಜುಗೌಡ ಭೇಟಿ
Team Udayavani, Apr 15, 2020, 4:24 PM IST
ನಾರಾಯಣಪುರ: ಕೊಡೇಕಲ್ ಪಟ್ಟಣದ ನ್ಯಾಯಬೆಲೆ ಅಂಗಡಿಗೆ ಶಾಸಕ ರಾಜುಗೌಡ ಭೇಟಿ ನೀಡಿ ಪರೀಶಿಲನೆ ನಡೆಸಿದರು
ನಾರಾಯಣಪುರ: ಬಯೋಮೆಟ್ರಿಕ್ ಇಲ್ಲ; ಓಟಿಪಿ ಬರಲಿಲ್ಲ ಎಂದು ಇಲ್ಲದ ನೆಪ ಹೇಳಿ ಯಾವ ಪಡಿತರದಾರರನ್ನು ವಾಪಸ್ ಕಳುಹಿಸಬೇಡಿ ಎಂದು ಶಾಸಕ ನರಸಿಂಹನಾಯಕ (ರಾಜುಗೌಡ) ಹೇಳಿದರು.
ಕೊಡೇಕಲ್ ಪಟ್ಟಣದ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು. ಇದೇ ವೇಳೆ ಪಡಿತರದಾರರು ಓರ್ವ ಮಹಿಳೆ “ನಮ್ಮಲ್ಲಿ ಫೋನ್ ಇಲ್ಲ. ಅದಕ್ಕೆ ನಮಗೆ ರೇಷನ್ ಇಲ್ಲ ಎಂದರೆ, ಇನೋರ್ವ ಮಹಿಳೆ ನಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಬೇಕಿದ್ದು, ಅದಕ್ಕೆ ಪಡಿತರ ಬರುವುದಿಲ್ಲವಂತೆ ಎಂದು ತಮ್ಮ ಅಳಲು ಶಾಸಕರ ಮುಂದೆ ತೋಡಿಕೊಂಡರು.
ಈ ಕುರಿತು ಅಂಗಡಿ ಮಾಲೀಕರಿಂದ ಮಾಹಿತಿ ಪಡೆದ ಶಾಸಕರು, ಜಿಲ್ಲಾ ಆಹಾರ ನಿದೇರ್ಶಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮುಖ್ಯಮಂತ್ರಿಗಳು ನೀಡಿರುವ ಆದೇಶ ಪ್ರತಿ ಕುರಿತಂತೆ ಮಾತನಾಡಿದರು. ಪ್ರತಿಯೊಬ್ಬ ಪಡಿತರದಾರರಿಗೆ ಸಹಿ ಪಡೆಯುವ ಮೂಲಕ ಪಡಿತರ ನೀಡುವಂತೆ ಆದೇಶ ಹೊರಡಿಸಿ ಎಂದು ಹೇಳಿದರು. ಸಿದ್ದನಗೌಡ ಕರಿಭಾವಿ, ಸಂತೋಷ ಕೊಡೇಕಲ್ಮಠ, ಬಸವರಾಜ ಭದ್ರಗೋಳ, ಪ್ರಮೋದ ಜೋಶಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ