ಗ್ರಾಪಂ ಸದಸ್ಯನಿಗೂ ಇನ್ನು ನರೇಗಾ ಕೂಲಿ

| ಚುನಾವಣೆ ಹೊಸ್ತಿಲಲ್ಲಿ ಬಳುವಳಿ| ನಿರ್ಬಂಧ ತೆಗೆದು ಹಾಕಿದ ಸರ್ಕಾರ | ಅಭ್ಯರ್ಥಿಗಳು ನಿರಾಳ

Team Udayavani, Dec 25, 2020, 6:18 PM IST

ಗ್ರಾಪಂ ಸದಸ್ಯನಿಗೂ ಇನ್ನು ನರೇಗಾ ಕೂಲಿ

ಸಿಂಧನೂರು: ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಸದಸ್ಯನಾದ ವ್ಯಕ್ತಿ ಕೂಲಿಕಾರನಾಗಲು ಅನರ್ಹಎಂಬ ನಿಯಮ ತೆಗೆದು ಹಾಕಿರುವ ರಾಜ್ಯಸರ್ಕಾರ, ಗ್ರಾಪಂ ಚುನಾವಣೆ ಹೊಸ್ತಿಲಲ್ಲಿ ಬಂಪರ್‌ ಬಳುವಳಿ ನೀಡಿದೆ.

ಗ್ರಾಪಂಗೆ ಸದಸ್ಯನಾಗಿ ಆಯ್ಕೆಯಾಗುವ ಜನಪ್ರತಿನಿಧಿ ಇನ್ಮುಂದೆ ಕೂಲಿಕಾರನಾಗಿಯೂ 100 ದಿನಗಳ ಕಾಲ ಕೆಲಸ ನಿರ್ವಹಿಸಬಹುದು. ಕೂಲಿಗೂ, ಅಧಿಕಾರಕ್ಕೂ ಸಂಬಂಧವೇಇಲ್ಲವೆಂಬ ಆದೇಶವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಡಿ.7, 2020ರಂದು ಹೊರಡಿಸಿದೆ. ಜನರಿಂದ ಚುನಾಯಿತರಾದ ಸದಸ್ಯರು ಸರ್ಕಾರಿ ಸೌಲಭ್ಯಕ್ಕೆ ಅರ್ಹರಲ್ಲ ಎಂಬ ನಿರ್ಬಂಧವನ್ನು ಸರ್ಕಾರ ಸಡಿಲಿಸಿದೆ. ಜತೆಗೆ, ಚುನಾವಣೆಗೆ ಸ್ಪರ್ಧಿಸಿದರೂ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಅಧಿ  ನಿಯಮ ಅನ್ವಯವಾಗುವುದರಿಂದ ಮುಕ್ತವಾಗಿ ಪಂಚಾಯ್ತಿಗೆ ಚುನಾಯಿತರಾಗಬಹುದು ಎಂಬ ಸಂದೇಶ ರವಾನಿಸಲಾಗಿದೆ. ಆ ಮೂಲಕ ಚುನಾವಣೆ ಅಖಾಡದಲ್ಲಿರುವ ಆಕಾಂಕ್ಷಿಗಳ ದುಗುಡವನ್ನು ಸರ್ಕಾರ ನಿವಾರಿಸಿದೆ.

ಏನಿದು ಬದಲಾವಣೆ ? : ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಹೊರಡಿಸಿದ್ದ 2017ರ ಆದೇಶದ ಪ್ರಕಾರ ಪಂಚಾಯಿತಿ ಸದಸ್ಯರು ಉದ್ಯೋಗ ಖಾತ್ರಿಯಡಿ ಕೂಲಿಕಾರನಾಗಿ ಕೆಲಸ ನಿರ್ವಹಿಸುವಂತಿರಲಿಲ್ಲ. ಜತೆಗೆ, ಅವರಿಗೆದಿನಗೂಲಿ ನೀಡುವುದಕ್ಕೆ ಅವಕಾಶ ಇರಲಿಲ್ಲ.ಅಕುಶಲ ಕಾರ್ಮಿಕರಾದ ಹಿನ್ನೆಲೆಯಲ್ಲಿ ಅವರಿಗೆ ಕೂಲಿ ಕೆಲಸ ಕೊಡುವಂತೆ ಒತ್ತಡ ಬಂದಾಗಲೂ ಸರ್ಕಾರ ಸಮ್ಮತಿಸಿರಲಿಲ್ಲ. ಮಾ.5, 2019ರಂದು ಮತ್ತೂಂದು ಆದೇಶ ಹೊರಡಿಸಿ ಪಂಚಾಯಿತಿಗೆ ಚುನಾಯಿತರಾದ ಸದಸ್ಯರು ಗೌರವಾನ್ವಿತರಾದಹಿನ್ನೆಲೆಯಲ್ಲಿ ಅವರಿಗೆ ಅವಕಾಶ ನಿರಾಕರಿಸಲಾಗಿತ್ತು. ಯಾರಾದರೂ ಕೂಲಿ ಮಾಡಿದ್ದಾಗಿ ದಿನಗೂಲಿ ಪಡೆದುಕೊಂಡಿದ್ದ ಪ್ರಕರಣ ಕಂಡು ಬಂದಿದ್ದರೆ, ಕ್ರಮ ಜರುಗಿಸಿ ಮರು ವಸೂಲಿಗೆ ಮುಂದಾದ ನಿದರ್ಶನಗಳಿದ್ದವು. ಇಂತಹ ಬಹುಮುಖ್ಯ ಷರತ್ತನ್ನು ಈಗ ತೆಗದು ಹಾಕಲಾಗಿದೆ.

ಸದಸ್ಯರಿಗೂ ಈಗ ಕೂಲಿ: ಮಹಾತ್ಮ ಗಾಂಧಿ ನರೇಗಾ ಅಧಿನಿಯಮದ ಸೆಕ್ಷನ್‌-3 ರನ್ವಯ ಜಾಬ್‌ ಕಾರ್ಡ್‌ ಹೊಂದಿರುವ ಯಾವುದೇ ಗ್ರಾಮೀಣಕುಟುಂಬದ ವಯಸ್ಕ ಸದಸ್ಯರು ನರೇಗಾದಲ್ಲಿಅಕುಶಲ ಕೆಲಸಗಾರರಾಗಿ ದುಡಿಯಬಹುದಾಗಿದೆ.ಸದಸ್ಯರೆಂಬ ಕಾರಣಕ್ಕೆ ಅವರನ್ನು ನಿರ್ಬಂಧಿಸಲುಯಾವುದೇ ಅವಕಾಶಗಳಿಲ್ಲ ಎಂಬುದನ್ನು ನಿಯಮದಲ್ಲಿ ಉಲ್ಲೇಖೀಸಲಾಗಿದೆ. ಆದರೆ, ಪಂಚಾಯ್ತಿ ಸದಸ್ಯರು ವೈಯಕ್ತಿಕ ಸೌಲಭ್ಯ ಎಂದರೆ ವಸತಿ ಯೋಜನೆ ಅನುದಾನ, ವೈಯಕ್ತಿಕಶೌಚಾಲಯದ ಹಣ ಸೇರಿದಂತೆ ಯಾವುದೇ ಸವಲತ್ತು ಪಡೆಯುವಂತಿಲ್ಲವೆಂಬ ಷರತ್ತುಉಳಿಸಿಕೊಳ್ಳಲಾಗಿದೆ. ಕೂಲಿಯಾಗಿ ಕೆಲಸಮಾಡಲು ಮಾತ್ರ ಇದೀಗ ಅವಕಾಶ ನೀಡಿದ್ದು,ಚುನಾವಣೆ ಉದ್ಯೋಗ ಖಾತ್ರಿಯ ಹಕ್ಕಿಗೆತರಬಹುದು ಎಂಬ ಆತಂಕವನ್ನು ಈ ಬಾರಿ ನಿವಾರಿಸಲಾಗಿದೆ.

ಪ್ರಜಾಪ್ರಭುತ್ವದಲ್ಲಿ ಸ್ಪರ್ಧಿಸುವ ಹಕ್ಕನ್ನುಚಲಾಯಿಸಿ ನಂತರ ಸೋತರೂ ಸರಿಯೇ,ಗೆದ್ದರೂ ಸರಿಯೇ ನರೇಗಾ ಕಾರ್ಮಿಕರಾಗಿ ಕೂಲಿ ದುಡಿಯುವ ಅವಕಾಶವನ್ನು ಮುಕ್ತವಾಗಿರಿಸಲಾಗಿದೆ. ಚುನಾಯಿತ ವ್ಯಕ್ತಿ ಯಾವೊಂದು ಸರ್ಕಾರಿ ಸೌಲಭ್ಯಕ್ಕೆ ಅರ್ಹನಲ್ಲ ಎಂಬ ನಿಯಮವನ್ನು ಇದೇ ಮೊದಲ ಬಾರಿಗೆ ಸಡಿಲಿಸಿ ನಿರಾಳತೆ ಪ್ರಕಟಿಸಲಾಗಿದೆ.

 

– ಯಮನಪ್ಪ ಪವಾರ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.