ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ
Team Udayavani, Jan 27, 2018, 4:55 PM IST
ದೇವದುರ್ಗ: ಭಾರತದ ಸಂವಿಧಾನವನ್ನು 26 ನವೆಂಬರ್ 1949ರಂದು ಅಂಗೀಕರಿಸಿ 26 ಜನವರಿ 1950 ರಂದು ಜಾರಿಗೊಳಿಸಲಾಯಿತು. ಡಾ| ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಸಿದ್ದರು. ಸಂವಿಧಾನ ಮುಂದೆ ಯಾರೂ
ದೊಡ್ಡವರಲ್ಲ ಎಂದು ತಹಶೀಲ್ದಾರ ಶಿವಶರಣಪ್ಪ ಕಟ್ಟೋಳಿ ಹೇಳಿದರು.
ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಸಾರ್ವಜನಿಕ ಕ್ಲಬ್ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನ ಪ್ರತಿಯೊಂದು ದೇಶದ ಮೂಲಭೂತ ಕಾನೂನಾಗಿದೆ. ಒಂದು ದೇಶದ ಕಾನೂನುಗಳನ್ನು
ರೂಪಿಸುವುದಕ್ಕೆ ಸಂವಿಧಾನ ತನ್ನದೇ ಆದ ಮೂಲಗಳನ್ನು ಒದಗಿಸಿಕೊಡುತ್ತದೆ. ದೇಶದ ಜನರ ಭಾವನೆ ಮತ್ತು ಅಗತ್ಯಗಳಿಗೆ ತಕ್ಕಂತೆ ಸಂವಿಧಾನಕ್ಕೆ ಹಲವಾರು ತಿದ್ದುಪಡಿ ಮಾಡಿದ್ದೇವೆ. ಅಲ್ಲದೆ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ರಾಜ್ಯ ಸ್ಥಾನಮಾನ ನೀಡಲಾಗಿದೆ ಎಂದು ಹೇಳಿದರು.
ಹಿಂದುಳಿದ ಪ್ರದೇಶಗಳಿಗೆ 371ನೇ(ಜೆ) ಕಲಂ ಮೂಲಕ ವಿಶೇಷ ಸ್ಥಾನಮಾನ ಕೊಟ್ಟಿದ್ದರೂ ವೈವಿಧ್ಯೆತೆಯಲ್ಲಿ ಏಕತೆ ಸಾರಿದ್ದೇವೆ ಎಂಬುದು ನಮ್ಮ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಸಂವಿಧಾನ ರಚನೆಗಾಗಿ ಶ್ರಮಿಸಿದ ಡಾ| ಬಿ.ಆರ್. ಅಂಬೇಡ್ಕರ್ ಅವರನ್ನು ಇಲ್ಲಿ ಸ್ಮರಿಸಬೇಕಾಗಿದೆ. ದೇಶಕ್ಕಾಗಿ ಸ್ವಾತಂತ್ರ್ಯ ಸೌಲಭ್ಯ ಕಲ್ಪಿಸುವಲ್ಲಿ ತ್ಯಾಗ ಬಲಿದಾನವಾದ ಮಹಾನಾಯಕರ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ತಾಪಂ ಅಧ್ಯಕ್ಷ ಹನುಮಂತ ಕಟ್ಟಮನಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಉಪತಹಶೀಲ್ದಾರ ಅನಿಲ ಕುಮಾರ, ಬಿಇಒ ಎಸ್.ಎಂ. ಹತ್ತಿ, ತಾಪಂ ಅಧಿಕಾರಿ ಟಿ.ಜಿ. ವೀರನಾಯಕ, ಮುಖ್ಯಾಧಿಕಾರಿ ಫಿರೋಜಖಾನ್, ಸಿಪಿಐ ಟ. ಸಂಜೀವಕುಮಾರ, ಆದಿಕಮಲಮ್ಮ, ಶಿವರಾಜ ಬಿರಾದಾರ, ಪ್ರಾಚಾರ್ಯ ಎಂ.ಎಂ. ದೊಡ್ಡಮನಿ, ಇಕ್ಬಾಲ್, ರಾಘವೇಂದ್ರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ