ಅಧಿಕಾರಿಗಳ ವಿರುದ್ಧ ಅಖಾಡಕ್ಕಿಳಿದ ಒಕ್ಕೂಟ
Team Udayavani, Mar 15, 2022, 2:43 PM IST
ಸಿಂಧನೂರು: ಚುನಾಯಿತ ಸದಸ್ಯರು ಮತ್ತು ಗ್ರಾಪಂ ಅಧಿಕಾರಿಗಳ ಮಧ್ಯೆ ಸಮನ್ವಯತೆ ಹಳಿ ತಪ್ಪಿದ್ದು, ತಾಲೂಕಿನಲ್ಲಿ ಅಧಿಕಾರಿಗಳು ವರ್ಸಸ್ ಗ್ರಾಪಂ ಸದಸ್ಯರ ಶೀತಲ ಸಮರ ಆರಂಭವಾಗಿದೆ.
ತಾಲೂಕಿನ 30 ಗ್ರಾಪಂ ವ್ಯಾಪ್ತಿಯಲ್ಲಿ ಬಹುತೇಕ ಕಡೆಗಳಲ್ಲಿ ಪಿಡಿಒಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ಹೊಂದಾಣಿಕೆ ಇಲ್ಲವಾಗಿದ್ದರಿಂದ ಸಮಸ್ಯೆ ಬಿಗಡಾಯಿಸಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕೆಲಸಗಳು ನಡೆಯುತ್ತಿಲ್ಲ. ಚುನಾಯಿತ ಸದಸ್ಯರ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತಿಲ್ಲ ಎಂಬ ಆರೋಪ ಮುಂದಿಟ್ಟುಕೊಂಡು ಒಕ್ಕೂಟದ ನೇತೃತ್ವದಲ್ಲಿ ಸದಸ್ಯರು ಬಹಿರಂಗವಾಗಿ ಹರಿಹಾಯುತ್ತಿದ್ದಾರೆ.
ಏನಿದು ಸಮಸ್ಯೆ?
ಗ್ರಾಪಂ ಸದಸ್ಯರ ಒಕ್ಕೂಟ ಗೌರವ ಹೆಚ್ಚಳದ ಒಂದೇ ಒಂದು ಬೇಡಿಕೆ ಮುಂದಿಟ್ಟುಕೊಂಡು ಮನವಿ ಸಲ್ಲಿಸಿತ್ತು. ನಂತರದಲ್ಲಿ ಮಾತುಕತೆ ನಡೆದಾಗ ಕ್ರಿಯಾಯೋಜನೆ ಸಲ್ಲಿಕೆ, ನರೇಗಾ ಕೆಲಸದಲ್ಲಿ ಎನ್ಎಂಆರ್ ವಿಳಂಬ, ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ದಾಖಲೆ ನಿರ್ವಹಣೆ ಲೋಪ ಸೇರಿದಂತೆ ಹಲವು ವಿಷಯ ಪ್ರಸ್ತಾಪಿಸಲಾಗಿದೆ. ಬಹಿರಂಗವಾಗಿ ಪಂಚಾಯತ್ ಅಧಿಕಾರಿಗಳು ಸದಸ್ಯರ ಮಾತಿಗೆ ಧ್ವನಿಯಾಗುತ್ತಿಲ್ಲವೆಂದು ಹೊಂದಾಣಿಕೆ ಕೊರತೆ ಹೊರಹಾಕಿದ್ದಾರೆ. ಒಂದು ಹಂತದಲ್ಲಿ ಅಧಿಕಾರಿಗಳೊಂದಿಗೆ ಜಟಾಪಟಿಯೂ ನಡೆದಿದೆ.
ಹೊಸ ಇಒಗೆ ಸವಾಲು
ಈ ಹಿಂದೆ ಇದ್ದ ತಾಪಂ ಇಒ ಪವನ್ಕುಮಾರ್ ವರ್ಗಾವಣೆಯಾದ ನಂತರ ಹೊಸದಾಗಿ ಲಕ್ಷ್ಮೀದೇವಿ ಇಒ ಆಗಿ ಬಂದಿದ್ದಾರೆ. ಅವರು ಆಗಮಿಸಿರುವ ಆರಂಭದಲ್ಲೇ ಹಲವು ಸಮಸ್ಯೆ ಮುಂದಿಟ್ಟುಕೊಂಡು ಸದಸ್ಯರ ಒಕ್ಕೂಟ ಹೋರಾಟ ಆರಂಭಿಸಿದೆ. ಮಾತುಕತೆ ಸಂದರ್ಭದಲ್ಲಿ ಎಡಿಎಗಳು ನಾಟಕ ಮಾಡುತ್ತಿದ್ದಾರೆಂದು ಹರಿಹಾಯ್ದ ಘಟನೆಯೂ ನಡೆದಿದೆ. ಗ್ರಾಪಂ ಮಟ್ಟದಲ್ಲಿ ಆಡಳಿತ ನಿರ್ವಹಣೆ ಪಿಡಿಒಗಳ ಮೂಲಕ ಸಮರ್ಪಕವಾಗಿ ನಡೆಯುತ್ತಿಲ್ಲವೆಂಬ ಆರೋಪ ಬಲವಾಗಿದ್ದು, ಈ ರೀತಿಯ ವಾಕ್ಸಮರಕ್ಕೆ ನಾಂದಿ ಹಾಡಿದೆ.
ಸರಿಯಾದ ಸಮಯಕ್ಕೆ ಪಿಡಿಒಗಳು ಬರುತ್ತಿಲ್ಲ. ಕರ ವಸೂಲಿ ನಡೆಯುತ್ತಿಲ್ಲ. ಇ-ಸ್ವತ್ತು ನಿರ್ವಹಣೆ ಮಾಡುತ್ತಿಲ್ಲ. ಕ್ರಿಯಾಯೋಜನೆಗಳ ವಿವರ ಕೊಡುತ್ತಿಲ್ಲ. ಪಂಚಾಯತ್ ಸದಸ್ಯರಿಗೆ ಗೌರವ ಕೊಡುತ್ತಿಲ್ಲ. ಇದನ್ನೆಲ್ಲ ಸರಿಪಡಿಸಬೇಕು. –ರವಿಗೌಡ ಮಲದಗುಡ್ಡ, ಪ್ರಧಾನ ಕಾರ್ಯದರ್ಶಿ, ಗ್ರಾಪಂಸದಸ್ಯರ ಒಕ್ಕೂಟ, ಸಿಂಧನೂರು
–ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ