ಪ್ರವಾಸದಲ್ಲೂ ನೆಮ್ಮದಿ ಕದಡಿದ ಆಪರೇಷನ್‌!

ಬಹುತೇಕ ಗ್ರಾಪಂಗಳಲ್ಲಿ ಬಿಜೆಪಿ-ಕಾಂಗ್ರೆಸ್‌ 2 ಸಮಬಲದ ಸ್ಥಾನ ಹೊಂದಿವೆ.

Team Udayavani, Jan 29, 2021, 4:45 PM IST

ಪ್ರವಾಸದಲ್ಲೂ ನೆಮ್ಮದಿ ಕದಡಿದ ಆಪರೇಷನ್‌!

ಮಸ್ಕಿ: ಗ್ರಾಪಂಗೆ ಆಯ್ಕೆಯಾದ ಹೊಸ ಸದಸ್ಯರಿಗೆ ಗೆದ್ದ ಸಂಭ್ರಮದ ಜತೆ ಪ್ರವಾಸ ಭಾಗ್ಯವೇನೊ ಒಲಿದಿದೆ. ಆದರೆ ಸಂಭ್ರಮದಲ್ಲಿ ಮೈ ಮರೆತು ತೇಲಾಡುವಂತಿಲ್ಲ; ಸ್ವಲ್ಪ ಯಾಮಾರಿದರೂ ವಿರೋಧ ಬಣದ ಗುಂಪು ದಿಢೀರ್‌ ಎತ್ತಂಗಡಿ ಮಾಡಲಿದೆ!. ತಾಲೂಕಿನ ಗ್ರಾಪಂಗೆ ಆಯ್ಕೆಯಾದ
ಸದಸ್ಯರನ್ನು ಕ್ಷೇತ್ರದಿಂದ ಮಾತ್ರವಲ್ಲ; ಅವರು ಯಾವ ರಾಜ್ಯ?, ಯಾವ ಪಟ್ಟಣದಲ್ಲಿದ್ದರೂ? ಹುಡುಕಾಡಿ ಅಪರೇಷನ್‌ ಮಾಡಲಾಗುತ್ತಿದೆ.

ಇಂತಹ ಹಲವು ಘಟನೆಗಳು ನಡೆದಿದ್ದು, ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ಬೆಂಬಲಿತರೆಂದು ಟೂರ್‌ನಲ್ಲಿರುವ ಸದಸ್ಯರಿಗೆ ದಿಗಿಲುಂಟು ಮಾಡಿದೆ. ಕೇವಲ ಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಮಾತ್ರವಲ್ಲ; ಮಸ್ಕಿ ಉಪ ಚುನಾವಣೆಗೆ ಸ್ಪರ್ಧೆ ಮಾಡುವವರು ಹಾಗೂ ಮುಂಚೂಣಿ ನಾಯಕರಿಗೂ ಇದು ಪ್ರತಿಷ್ಠೆ ಪ್ರಶ್ನೆಯಾಗಿದೆ. ಪಂಚಾಯಿತಿಗೆ ಆಯ್ಕೆಯಾದ ಸದಸ್ಯರನ್ನು ದುರ್ಬೀನು ಹಾಕಿ ಹುಡುಕಿಯೂ ಆಪರೇಷನ್‌ ಮಾಡುವ ಕಸರತ್ತು ಜೋರಾಗಿ
ಸಾಗಿದೆ.

ಜಿದ್ದಾ-ಜಿದ್ದಿಗೆ ಸೈ: ಮಸ್ಕಿ ಕ್ಷೇತ್ರದಲ್ಲಿ ಒಟ್ಟು 26 ಗ್ರಾಪಂಗಳಿದ್ದು, ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿಯುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠೆಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮಸ್ಕಿ ಕ್ಷೇತ್ರ ಉಪ ಚುನಾವಣೆ ಘೋಷಣೆಯಾಗುವುದರಿಂದ ಗ್ರಾಪಂ ಚುಕ್ಕಾಣಿಯೇ ಬೈ ಎಲೆಕ್ಷನ್‌ಗೆ ದಿಕ್ಸೂಚಿಯಾಗಲಿದೆ ಎನ್ನುವ ರಾಜಕಾರಣಿಗಳ ದೂರದೃಷ್ಟಿ ಇಂತಹ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಆಯಾ ಪಂಚಾಯಿತಿಗೆ ಹಂಚಿಕೆಯಾದ ಮೀಸಲಾತಿ ಪೈಕಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಂದೆನಿಸಿಕೊಂಡವರು ಮಾತ್ರವಲ್ಲ; ಸ್ವತಃ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಬಸನಗೌಡ ತುರುವಿಹಾಳರಿಗೆ ಇದು ಅಸ್ತಿತ್ವದ ಪ್ರಶ್ನೆಯಾಗಿದೆ.

ಇವರ ಅಸ್ತಿತ್ವ ಉಳಿವಿಗಾಗಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಪರವಾಗಿ ಅವರ ಪುತ್ರ ಪ್ರಸನ್ನ ಪಾಟೀಲ್‌ ತಮ್ಮ ಆಪರೇಷನ್‌ ಜವಾಬ್ದಾರಿ ವಹಿಸಿಕೊಂಡಿದ್ದರೆ, ಇತ್ತ ಕಾಂಗ್ರೆಸ್‌ನಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ, ಆರ್‌. ಬಸನಗೌಡ ತುರುವಿಹಾಳ ಸಹೋದರ ಆರ್‌. ಸಿದ್ದನಗೌಡ ಇಂತಹ ಕಾರ್ಯತಂತ್ರಕ್ಕೆ ಇಳಿದಿದ್ದಾರೆ. ಕೇವಲ ಮಸ್ಕಿಯಿಂದ ಟೂರ್‌ ಹೋದವರಿಗೆ ಮಾರ್ಗದರ್ಶನ ನೀಡುವುದು ಮಾತ್ರವಲ್ಲದೇ ಸ್ವತಃ ಇವರೇ ಟೂರ್‌ ಹೋದ ಸದಸ್ಯರ ಜತೆಗೆ ಪರ ರಾಜ್ಯದಲ್ಲಿ ಸಂಚಾರ ನಡೆಸಿದ್ದಾರೆ. 27 ಪಂಚಾಯಿತಿಗಳಲ್ಲಿ ಹೆಚ್ಚು ಪಂಚಾಯಿತಿ ಚುಕ್ಕಾಣಿ ಹಿಡಿಯುವುದೇ ಇವರ ಗುರಿಯಾಗಿದ್ದು, ಇದಕ್ಕಾಗಿ ತನು-ಮನ ಹಾಗೂ ಧನ ವ್ಯಯಿಸಿ ಜಿದ್ದಾಜಿದ್ದಿ ಪ್ರದರ್ಶಿಸುತ್ತಿರುವುದು ಎಲ್ಲರೂ ಮಸ್ಕಿ ರಾಜಕಾರಣದತ್ತ ತಿರುಗಿ ನೋಡುವಂತಾಗಿದೆ.

ಠಾಣೆ ಮೆಟ್ಟಿಲೇರಿ ಸ್ಥಾನ ಭರ್ತಿ
ಬಹುತೇಕ ಗ್ರಾಪಂಗಳಲ್ಲಿ ಬಿಜೆಪಿ-ಕಾಂಗ್ರೆಸ್‌ 2 ಸಮಬಲದ ಸ್ಥಾನ ಹೊಂದಿವೆ. ಹಾಲಾಪುರ, ತಲೆಖಾನ್‌, ಮೆದಕಿನಾಳ, ಗುಂಡಾ, ಗುಡದೂರು ಸೇರಿ ಹಲವಡೆ ಒಂದೆರಡು ಸ್ಥಾನ ಮಾತ್ರ ಬಾಕಿ ಇವೆ. ಬಾಕಿ ಸ್ಥಾನ ಭರ್ತಿಗೆ ಗುಜರಾತ, ಗೋವಾ, ಕೇರಳ, ತಮಿಳುನಾಡಲ್ಲಿ ಟೂರ್‌ ನಲ್ಲಿರುವ ಸದಸ್ಯರಿಗೆ ಗಾಳ ಹಾಕಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸಿ ತಾಣದಲ್ಲಿದ್ದ ತಾಂಡಾಸದಸ್ಯೆಯೊಬ್ಬರನ್ನು ಹಿಡಿಯಲು ಸದಸ್ಯೆ ಮಗನಿಂದಲೇ ತಾಯಿ ಮಿಸ್ಸಿಂಗ್‌ ದೂರು ನೀಡಿಸಿ ತಮಗೆ ಬೇಕಿದ್ದ ಸ್ಥಾನ ರಾಜಕೀಯ ಪಕ್ಷವೊಂದು ಪಡೆದಿದೆ. ಇದೇ ರೀತಿ ಹಲವು ಪ್ರಕರಣಗಳಿವೆ.

ಪ್ರತ್ಯೇಕ ಗುಂಪು
ಗ್ರಾಮ ಪಂಚಾಯತ್‌ ಚುಕ್ಕಾಣಿ ಹಿಡಿಯುವುದಕ್ಕಾಗಿ ಸ್ಥಳೀಯವಾಗಿದ್ದರೆ ಪ್ರಭಾವ ಬೀರಬಹುದು ಎನ್ನುವ ಕಾರಣಕ್ಕೆ ದೂರದೂರಿಗೆ ಸದಸ್ಯರು ಪ್ರವಾಸ ಹೋಗಿದ್ದಾರೆ. ಅಲ್ಲಿಯೂ ಅವರ ನಿದ್ದೆಗೆಡಿಸಲಾಗಿದೆ. ಇದಕ್ಕಾಗಿ ಸದಸ್ಯರನ್ನು ಕಾಯುವುದಕ್ಕಾಗಿಯೇ ಪ್ರತ್ಯೇಕ ಗುಂಪು ಕಾಂಗ್ರೆಸ್‌-ಬಿಜೆಪಿ ಎರಡು ಕಡೆಗೂ ರಚನೆ ಮಾಡಲಾಗಿದೆ. ಇವರು ಸದಸ್ಯರಲ್ಲದಿದ್ದರೂ ಸದಸ್ಯರ ಬೇಕು-ಬೇಡ ಅವರ ಚಲನವಲನ ತಿಳಿದುಕೊಳ್ಳುವುದಕ್ಕಾಗಿಯೇ 4-5 ಜನರನ್ನು ನೇಮಿಸಿರುವುದು ಗಮನಾರ್ಹ ಸಂಗತಿ.

*ಮಲ್ಲಿಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.