ಜಲಕ್ಷಾಮಕ್ಕೆ ಪಿಡಿಒಗಳೇ ಹೊಣೆ: ನಾಡಗೌಡ
ಶಾಸಕ ಬಸವರಾಜ್ ದಢೇಸುಗೂರು ತಾಯಿಯೂ ಹಾಜರ್ಸಭೆಯಲ್ಲಿ ವಿಶೇಷ ಆಕರ್ಷಣೆ
Team Udayavani, Mar 7, 2021, 5:44 PM IST
ಸಿಂಧನೂರು: ನೀರಾವರಿ ಇಲಾಖೆ ಅಧಿಕಾರಿಗಳು ಮೊದಲು ಕೆರೆಗಳಿಗೆ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು. ಆ ನಂತರದಲ್ಲಿ ಪಿಡಿಒಗಳು ಎಚ್ಚೆತ್ತುಕೊಳ್ಳಬೇಕು. ಯಾರೇ ತಪ್ಪು ಮಾಡಿದರೂ ನೀರಿನ ಅಭಾವ ತಲೆದೋರಿದರೆ, ಅವರ ವಿರುದ್ಧವೇ ಕ್ರಮ ಜರುಗಿಸಲಾಗುವುದು ಎಂದು ಶಾಸಕ ವೆಂಕಟರಾವ್ ನಾಡಗೌಡ ಎಚ್ಚರಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಕುಡಿವ ನೀರಿನ ಸಂಬಂಧ ಶನಿವಾರ ಕರೆದಿದ್ದ ಗ್ರಾಪಂ ಪಿಡಿಒಗಳು ಹಾಗೂ ಗ್ರಾಪಂ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು. ಎಡದಂಡೆ ಕಾಲುವೆಗೆ ಮಾರ್ಚ್ 31ರತನಕ ಮಾತ್ರ ನೀರು ಸರಬರಾಜು ಮಾಡಲಾಗುತ್ತದೆ. ಅದಕ್ಕೂ ಮೊದಲು ಕುಡಿವ ನೀರಿನ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ತಾಲೂಕಿನ ಎಲ್ಲ ಕುಡಿವ ನೀರಿನ ಕೆರೆಗಳನ್ನು ಮಾರ್ಚ್ 20ರೊಳಗೆ ಭರ್ತಿ ಮಾಡಬೇಕು.ಎರಡ್ಮೂರು ದಿನಗಳಲ್ಲಿ ಇರುವ ನೀರನ್ನು ಖಾಲಿ ಮಾಡಿ, ಕೆರೆಗಳನ್ನು ಸ್ವತ್ಛಗೊಳಿಸಬೇಕು. ಖುದ್ದು ಅ ಧಿಕಾರಿಗಳು ಸ್ಥಳದಲ್ಲಿದ್ದು ಈ ಕೆಲಸವನ್ನು ನಿಭಾಯಿಸಬೇಕು ಎಂದರು.
ಅಧಿಕಾರಿಗಳಿಗೆ ಚಾಟಿ: ಗ್ರಾಪಂ ವಾರು ಸಮಸ್ಯೆಯ ಮೇಲೆ ಚರ್ಚಿಸುತ್ತಿದ್ದ ಶಾಸಕರು, ಪಿಡಿಒಗಳ ಹಾಜರಾತಿಯನ್ನು ತಾವೇ ಪಡೆದರು. ಈ ಹಂತದಲ್ಲಿ ಕೆಲವು ಪಿಡಿಒಗಳು ಸಭೆಯಲ್ಲಿ ಇಲ್ಲದಿರುವುದನ್ನು ಕಂಡ ಆಕ್ಷೇಪಿಸಿದರು. 32ನೇ ಉಪಕಾಲುವೆಗೆ ಸಂಬಂಧಿ ಸಿ ಕಾರಟಗಿ ಉಪವಿಭಾಗದ ಎಇಇ ಸೂಗಪ್ಪ ಅವರನ್ನು ಕರೆದಾಗ ಸಭೆಯಲ್ಲಿ ಇರಲಿಲ್ಲ. ಸಿಟ್ಟಿಗೆದ್ದ ಶಾಸಕರು ನಾನು ಬೆಂಗಳೂರಿನಲ್ಲಿ ಅ ಧಿವೇಶನ ಬಿಟ್ಟು ನೀರಿನ ಕಾರಣಕ್ಕೆ ಇಲ್ಲಿಗೆ ಬಂದಿರುವೆ. ಅ ಧಿಕಾರಿಗಳಿಗೆ ವಿಷಯ ಗೊತ್ತಾದ ಮೇಲೂ ಬಂದಿಲ್ಲವೆಂದರೆ ಹೇಗೆ? ಏನ್ ಹುಡುಗಾಟ ಆಡುತ್ತಿದ್ದೀರಾ? ಎಂದು ಕಿಡಿಕಾರಿದರು. ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಅದನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯಿಲ್ಲವೇ ಎಂದು ಅ ಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.
ಪಿಕಪ್ ಬಂದ್ ಮಾಡಲ್ಲ: ಸೋಮಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವೆಂಕಟೇಶ್ವರ ಕ್ಯಾಂಪಿನ ಕುಡಿವ ನೀರಿನ ಕೆರೆ ತುಂಬಿಸಬೇಕಿದ್ದು, ಇದಕ್ಕಾಗಿ ಗೋರೆಬಾಳ ಪಿಕಪ್ ಬಂದ್ ಮಾಡಿಸಿ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಪಂ ಅಧ್ಯಕ್ಷ ಸೀತಾರಾಮರೆಡ್ಡಿ, ಪಿಡಿಒ ಅಮರಗುಂಡಪ್ಪ ಅವರು ಮನವಿ ಮಾಡಿದರು.
ಕನಿಷ್ಠ 5 ದಿನ ಈ ವ್ಯವಸ್ಥೆ ಮಾಡಿದರೆ, ಕೆರೆಗಳನ್ನು ತುಂಬಿಸಲು ಅನುಕೂಲವಾಗುತ್ತದೆ ಎಂದಾಗ ಶಾಸಕರು ಒಪ್ಪಲಿಲ್ಲ. ಐದು ದಿನಗಳ ಕಾಲ ಪಿಕಪ್ ಬಂದ್ ಮಾಡಿದ್ರೆ, ಅಲ್ಲಿನ ರೈತರು ವಿರೋಧ ವ್ಯಕ್ತಪಡಿಸುತ್ತಾರೆ. ಒಂದು ದಿನ ಬೇಕಾದರೆ ಬಂದ್ ಮಾಡಿಸಿ ಕೊಡಲಾಗುವುದು ಎಂದರು.
ತಹಶೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಪವನಕುಮಾರ್, ಸಿಪಿಐ ಜಿ.ಚಂದ್ರಶೇಖರ ಸೇರಿದಂತೆ ಜಿಪಂ, ಗ್ರಾಮೀಣ ಕುಡಿವ ನೀರು, ಜೆಸ್ಕಾಂ ಸೇರಿದಂತೆ ಇತರೆ ಇಲಾಖೆ ಅ ಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ