ರೈತರ ಅನುಕೂಲಕ್ಕೆ ನೀರಾ ಇಳಿಸಲು ಅನುಮತಿ
Team Udayavani, Dec 21, 2017, 6:45 AM IST
ಲಿಂಗಸುಗೂರು: ರೈತರ ಅನುಕೂಲಕ್ಕಾಗಿ ನೀರಾ ಇಳಿಸಲು ಅನುಮತಿ ನೀಡಲಾಗಿದೆ. ಎಂದು ಅಬಕಾರಿ ಸಚಿವ ಆರ್.
ಬಿ. ತಿಮ್ಮಾಪುರ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಬಕಾರಿ ಇಲಾಖೆಗೆ ಈ ಸಾಲಿನಲ್ಲಿ 18,500 ಕೋಟಿ ಆದಾಯ ಸಂಗ್ರಹ ಗುರಿ ನೀಡಲಾಗಿದೆ. ಈಗಾಗಲೇ 12,500 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದರು. ಅಬಕಾರಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಹಳ್ಳಿ-ಹಳ್ಳಿಗಳಲ್ಲಿನ ಕಿರಾಣಿ ಅಂಗಡಿಯಲ್ಲಿ ಮದ್ಯ ದೊರೆಯುತ್ತಿದೆ. ಇದಕ್ಕೆ ಶೀಘ್ರವೇ ಮುಕ್ತಿ ಕಾಣಿಸಲು ರಾಜ್ಯಾದ್ಯಂತ 1200 ಗಾರ್ಡ್ಗಳು ಹಾಗೂ 250 ಎಸ್ಐ ಹುದ್ದೆಗಳ ನೇಮಕ ಮುಗಿದಿದ್ದು, ತರಬೇತಿ ಪಡೆಯುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಜನಸಂಖ್ಯೆ ಅನುಗುಣವಾಗಿ ಬಾರ್ಗಳು ಇಲ್ಲ. ಹೀಗಾಗಿ ಎಂಎಸ್ಐಎಲ್ ಸೇರಿ 900 ಮದ್ಯದಂಗಡಿಗಳನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದರು. ಎಂಎಸ್ಐಎಲ್ ಸೇರಿ 900 ಹೊಸ ಮದ್ಯದಂಗಡಿ ತೆರೆಯಲು ಅರ್ಜಿ ಆಹ್ವಾನಿ ಸಲಾಗಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ನಿಧಾನಗತಿಯಲ್ಲಿ ಸಾಗಿದೆ.
ಸಿಎಲ್-7 ಪರವಾನಗಿಗಾಗಿ ಈ ಹಿಂದೆ 20×30 ಅಳತೆ ಕಟ್ಟಡ ಕೇಳಲಾಗಿತ್ತು. ಇದನ್ನು ಸಡಿಲಗೊಳಿಸಿ 15×20 ಅಳತೆ ಕೊಠಡಿ ಸಾಕು ಎಂದು ತಿಳಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ